ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ: ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Upayuktha
1 minute read
0



ಮಂಗಳೂರು: ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕು ನೀಲಕಂಠೇಶ್ವರ ದೇವಾಲಯ ಸಭಾಭವನದಲ್ಲಿ ಭಾನುವಾರ (ಜು.2) ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು- ಇದರ ಕಾರ್ಯಕಾರಿಣಿ ಸಭೆ ನಡೆಯಿತು. ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವೇ| ಬ್ರ| ಶ್ರೀ ಅನಂತ ಮೂರ್ತಿಯವರ ಉಪಸ್ಥಿತಿಯಲ್ಲಿ ಪ್ರಭಾರ ರಾಜ್ಯಾಧ್ಯಕ್ಷ ಪ್ರಕಾಶ.ವಿ. ಹೊಳ್ಳ ಶಕ್ತಿನಗರ ಇವರ ಅಧ್ಯಕ್ಷತೆಯಲ್ಲಿ ಸಭೆ ನೆರವೇರಿತು. ಈ ಸಭೆಯಲ್ಲಿ ಸರ್ವಾನುಮತದ ಹಾಗೂ ಬಹುಮತದ  ನಿರ್ಣಯದಂತೆ ರಾಜ್ಯ ಸಮಿತಿಯ ನೂತನ ಸದಸ್ಯರ ಆಯ್ಕೆ ಮಾಡಲಾಯಿತು.


ಪದಾಧಿಕಾರಿಗಳ ವಿವರ ಇಂತಿದೆ: 

ಸಂಸ್ಥಾಪಕ ಅಧ್ಯಕ್ಷರು: ವೇ|ಬ್ರ| ಎಂ.ಬಿ. ಅನಂತಮೂರ್ತಿ

ಪ್ರಭಾರ ರಾಜ್ಯಾಧ್ಯಕ್ಷ ಹಾಗೂ ಹಂಗಾಮಿ ರಾಜ್ಯಾಧ್ಯಕ್ಷರು: ಪ್ರಕಾಶ ವಿ. ಹೊಳ್ಳ ಶಕ್ತಿನಗರ ಮಂಗಳೂರು 


ಗೌರವ ಅಧ್ಯಕ್ಷರು: 

1. ಅರುಣ್ ಕುಮಾರ್ ಶರ್ಮ, 2. ರವಿರಂಗಯ್ಯ ಪಾಟೀಲ್

ಉಪಾಧ್ಯಕ್ಷರು: 1. ರಾಜೇಶ್, 2. ಸತೀಶ್ ಸಿಂಹ, 3. ವೇಣುಗೋಪಾಲ್

ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ: ಗೋಪಿನಾಥ್ ಕಶ್ಯಪ್ (ಶರ್ಮ)


ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ: ಸಂತೋಷ ಕೆ (ಸುದರ್ಶನ್ ಆಚಾರ್ಯ)


ಖಜಾಂಚಿ: ಅಭಿಷೇಕ್ ಭಾರದ್ವಾಜ್

ಉಪ ಖಜಾಂಚಿ ಹಾಗೂ ಕಚೇರಿ ಕಾರ್ಯದರ್ಶಿ: ರಘುರಾಮ್ ರಾವ್ ಮಂಗಳೂರು.

ಸಂಚಾಲಕರು/ ಸಂಘಟನಾ ಕಾರ್ಯಾಧ್ಯಕ್ಷರು ಮತ್ತು ರಾಜ್ಯ ಉಸ್ತುವಾರಿ: ಶ್ರೀನಿವಾಸ್ ಮೂರ್ತಿ ಜೋಯಿಸ್ ಬಳ್ಳಾರಿ.


ಸಂಘಟನಾ ಸಹ ಕಾರ್ಯದರ್ಶಿಗಳು:

1. ಕೇಶವಶರ್ಮ, 2. ಫಣೀಂದ್ರ ಶರ್ಮ, 3. ಜಿ.ಶ್ಯಾಮಸುಂದರ್ ಖಂಡೇರಾವ್, 4. ಚಂದ್ರಶೇಖರ್ ಲಂಕ, 5. ಪ್ರಹಲ್ಲಾದ್.

ಸುಭಾಷ್ ಪರಾಂಜಪೆ ಮಂಗಳೂರು ಅವರನ್ನು ರಾಜ್ಯ ನಿರ್ದೇಶಕರಾಗಿ ಹಾಗೂ ರಾಜ್ಯದ ಸರ್ವ ಸದಸ್ಯರನ್ನು ನಿರ್ದೇಶಕರಾಗಿ ಅಯ್ಕೆ ಮಾಡಲಾಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
To Top