ಅಕ್ಷರ ಆರಾಧನೆ-12: ಶ್ರೀಕೃಷ್ಣನಿಂದ ನಾದಮಯವಾದ ಈ ಜಗ

Upayuktha
0

 ||ಅಜೈಕಪಾದಾಂತರ್ಗತ ಶ್ರೀ ಗೋವಿಂದಾಯ ನಮಃ|| 


ನೃತ್ಯ ನಾಟಕಗಳಲ್ಲಿ ಶ್ರೀಕೃಷ್ಣನ ವರ್ಣನೆಯನ್ನು ನಾವು ಕಾಣಬಹುದು, ಮತ್ತು ಕೇಳಬಹುದು. ಶ್ರೀಕೃಷ್ಣನ ಬಾಲಲೀಲೆಗಳು ಗೋಪಿಯರ ಜೊತೆ ಸರಸ, ರಾಧೆಯ ಪ್ರೇಮ ಪ್ರಸಂಗಗಳು ಸುಂದರವಾಗಿ ನಿರೂಪಿತವಾಗಿವೆ. ಕೃಷ್ಣನನ್ನು ಅನೇಕ ಹೆಸರುಗಳಿಂದ ಅನೇಕ ಭಾಷೆಗಳಲ್ಲಿ ಕರೆಯುತ್ತಾರೆ. ಶ್ಯಾಮ, ಮನಮೋಹನ, ಮೋಹನ, ಕನ್ನ, ಕೃಷ್ಣ, ಗೋಪಾಲ, ಮುರಳೀಧರ, ವಿಹಾರೀ, ಮುಕುಂದ, ನಂದ ನಂದನ, ಯದುನಂದನ, ಯಶೋದಾನಂದನ, ಗಿರಿಧರ, ಮುರಾರಿ, ಹೀಗೆ ಅನೇಕ ಹೆಸರುಗಳಿಂದ ಅವನನ್ನು ಕೂಗಿ ಕರೆಯುತ್ತಾರೆ.


ಕೃಷ್ಣನದು ವೈವಿಧ್ಯಮಯ ಹಾಗೂ ಸಂಭ್ರಮದ ಜೀವನ. ಆತನ ಜೀವನದ ಪ್ರತಿಯೊಂದು ಘಟನೆಗಳೂ ಸಡಗರದಿಂದ ಕೂಡಿವೆ. ಅವುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವುದೇ ಸಂತಸದ ಕ್ಷಣಗಳು. ಕವಿಗಳು ಸಾಹಿತಿಗಳು ತಮ್ಮ ಕಲ್ಪನಾ ಲಹರಿಯಲ್ಲಿ ಕೃಷ್ಣನನ್ನು ವಿಧ ವಿಧವಾಗಿ ಕಂಡು ಅನುಭವಿಸಿ ಸಂತಸಗೊಂಡಿದ್ದಾರೆ. ತಮ್ಮ ಭಾವನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.


ಯಶೋದೆಗೆ ಕೃಷ್ಣ ದೊರಕಿದ್ದು ಒಂದು ಯೋಗಾಯೋಗವೇ ಸರಿ. ಬಾಲ ಕೃಷ್ಣನ ದಿನಚರಿಯ ಪ್ರಮುಖ ಭಾಗ ಆತನ ನಿದ್ದೆ. ನಿದ್ದೆಯನ್ನು ಮಾಡಿದಂತೆ ತೋರಿಸುವ ಅವನ ಲೀಲೆ ವಿಚಿತ್ರ! ರತ್ನ ಖಚಿತವಾದ ತೊಟ್ಟಿಲಲ್ಲಿ ಯಶೋದೆ ತೂಗುತ್ತ ಕೃಷ್ಣನನ್ನು ಮಲಗಿಸುತ್ತಾಳೆ. ಎಲ್ಲ ತಾಯಿಂದಿರಂತೆ ಯಶೋದೆಗೂ ಕೃಷ್ಣನ ಬಗ್ಗೆ ಎಲ್ಲಿಲ್ಲದ ಕಾಳಜಿ, ಕಳವಳ!


ಕೃಷ್ಣನು ಜೋಕಾಲಿಯನ್ನು ಆಡುವ ಪರಿಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಕೃಷ್ಣನ ಗುಂಗುರು ಕೂದಲು ಜೋಕಾಲಿ ಆಟದ ಸಮಯದಲ್ಲಿ ಹಣೆ ಮತ್ತು ಗಲ್ಲಗಳ ಮೇಲೆ ನಲಿದಾಡುತ್ತೇವೆ. ಹೀಗಿರುವಾಗ ಕೃಷ್ಣ ನಸುನಗುತ್ತಾ ಕೇಕೆ ಹಾಕುತ್ತಾ ಇನ್ನೂ ಜೋರಾಗಿ ಜೋಕಾಲಿ ಆಡುತ್ತಾನೆ. ಗೋಕುಲದ ಸ್ತ್ರೀಯರಿಗೆ ಪ್ರತಿದಿನ ಸಂಜೆ ಒಂದು ಸುಂದರವಾದ ಅನುಭವ. ಆ ಹೊತ್ತಿನಲ್ಲೇ ಕೃಷ್ಣ ಹೇಳದೇ ಕೇಳದೇ ಯರ‍್ಯಾರೋ ಮನೆಗೆ ನುಗ್ಗಿ ಹಾಲು ಕುಡಿದು, ಬೆಣ್ಣೆ ತಿಂದು ಮಾಯವಾಗುತ್ತಿದ್ದ.


ಅವನು ಹಿಡಿಯಲು ಈ ಮಾತೆಯರು ಪರದಾಡುತ್ತಿದ್ದರು. ಕೈಗೆ ಸಿಕ್ಕಂತೆ ತೋರಿ ಕೃಷ್ಣ ಮಾಯವಾಗು ತ್ತಿದ್ದ. ಇದು ನಿತ್ಯದ ಸಂಗತಿಯಾಗಿತ್ತು. ನಾಳೆ ಕೃಷ್ಣ ನನ್ನು ಹಿಡಿದೇ ಹಿಡಿಯೋಣವೆಂದು ಎಲ್ಲ ಗೋಪಿಕಾ ಸ್ತ್ರೀಯರು ನಿತ್ಯವೂ ಹೇಳುತ್ತಿದ್ದರು. ಒಬ್ಬೊಬ್ಬರ ಮನೆಯಲ್ಲಿ ಶಾಂತವಾಗಿ ನಿದ್ರಿಸುತ್ತಿ ರುವ ಹಸುಗೂಸುಗಳನ್ನು ಎಬ್ಬಿಸಿ ಅಲ್ಲಿಂದ ಕಾಲು ಕೀಳುತ್ತಿದ್ದ. ನಮ್ಮ ಕೃಷ್ಣ. ಇಂಥ ಆತನ ಆಟಗಳನ್ನು ನೋಡುವುದೇ ಆನಂದ. ನಮಗೆ ಮಾತ್ರ ಕೇಳುವು ದರಲ್ಲೇ ಆನಂದ. ನಾವು ನೋಡಲು ಹೇಗೆ ಸಾಧ್ಯಾ?


ಶ್ರೀ ಕೃಷ್ಣನನ್ನು ಅರಿಯಲು ಬುದ್ಧಿ ಬೇಕಾಗಿಲ್ಲ; ಹೃದಯ ಸಾಕು. ಯಶೋದೆಗೆ ಅವನು ಕಂದ. ಅವನು ಬಾಯಿಯಲ್ಲಿ ಬ್ರಹ್ಮಾಂಡ ತೋರಿದರೂ ಅವಳಿಗೆ ದಿಗ್ಭ್ರಮೆಯೇ ಹೊರತು ಬ್ರಹ್ಮಾನಂದ ವಿಲ್ಲ. ಅರ್ಜುನನಿಗೆ ಅವನ ವಿಶ್ವರೂಪ ಸಹಿಸಲಾ ಗದು. ಅವನು ಯಶೋದೆಯ ಕೂಸು. ಅರ್ಜುನನ ಸಖ. ಅವನು ಅಹಂಕಾರದ ಭಕ್ತಿಗೊಲಿಯುವು ದಿಲ್ಲ. ಕುಚೇಲನ ಸ್ನೇಹಕ್ಕೆ ಒಲಿಯುತ್ತಾನೆ. ವಿದು ರನ ಸರಳತೆಗೆ ಮಣಿಯುತ್ತಾನೆ. ಶಿಶುಪಾಲನ ಅಹಂಕಾರದ ತಲೆ ಕತ್ತರಿಸುತ್ತಾನೆ, ದುರ್ಯೋಧ ನನ ಅಧರ್ಮದ ತೊಡೆ ಮುರಿಯುತ್ತಾನೆ. ಕ್ರೂರ ಕೊಡವಾದ ಕಂಸನ ಎದೆಗೆ ಒದೆಯುತ್ತಾನೆ. ಗೋಪಿಯರಿಗೆ ಒಲಿಯುತ್ತಾನೆ, ರಾಧೆಯ ಪ್ರೇಮಕ್ಕೆ ಶರಣಾಗುತ್ತಾನೆ. ದ್ರೌಪದಿಯನ್ನು ರಕ್ಷಿಸುತ್ತಾನೆ. ಗೋವಳರಿಗೆ ಗೋವರ್ಧನದ ಕೊಡೆ ಹಿಡಿಯು ತ್ತಾನೆ, ಅಧರ್ಮಕ್ಕೆ ಚಕ್ರದ ತಡೆ ಒಡ್ಡುತ್ತಾನೆ.


ಕರ್ತವ್ಯ, ಮಾನವೀಯತೆ, ಧರ್ಮಸ್ಥಾಪನಾ ದೀಕ್ಷೆ, ದುಷ್ಟನಿಗ್ರಹ, ವಿದ್ವತ್ತ್ವಿನ ಸರ್ವಜನಾನುರಾಗ, ಸರಸ ಸಂತೋಷಭಾವ, ಗೀತನೃತ್ಯ ವಿನೋದ, ಮುನಿಜನ ಸ್ನೇಹ, ಉನ್ನತ ತತ್ವಚಿಂತನೆ... ಹೀಗೆ ನಾನಾ ಜೀವನ ಧರ್ಮರಂಗಗಳನ್ನು ಸಾರ್ಥಕವಾಗಿ ನಿರ್ವಹಿಸಿ ಆದರ್ಶಪ್ರಾಯ ಈ ಯಶೋದಾಸುತ, ಶ್ರೀಕೃಷ್ಣ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top