ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ ವಿಡೀಯೋ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ

Upayuktha
0

 


ಸುಳ್ಯ: ಸುಳ್ಯದ ಭಾವನಾ ಮೀಡಿಯಾ ಅರ್ಪಿಸುವ ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ  ವೀಡಿಯೋ ಭಕ್ತಿಗೀತೆಯನ್ನು ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ  ಸನ್ನಿಧಾನದಲ್ಲಿ ಬಿಡುಗಡೆಗೊಂಡಿತು . ಬೂಡು ದೇವಸ್ಥಾನದ ಪೂಜಾರಿ ಹಾಗೂ ಅಧ್ಯಕ್ಷರಾದ ಶ್ರೀ ಸುಂದರರವರು ಕಾರ್ಯಕ್ರಮ ಉದ್ಘಾಟಿಸಿದರು. 


ಸುಳ್ಯದ ಖ್ಯಾತ ಜ್ಯೋತಿಷಿ ಹಾಗೂ  ಸಾಹಿತಿ ಮತ್ತು  ಗಾಯಕರಾದ ಎಚ್. ಭೀಮರಾವ್ ವಾಷ್ಠರ್ ರವರು   ಭಕ್ತಿಗೀತೆಯನ್ನು  ಬಿಡುಗಡೆ  ಮಾಡಿ ಶುಭ ಹಾರೈಸಿದರು. ಈ ಭಕ್ತಿಗೀತೆಗೆ ಸಂಪೂರ್ಣ ಸಹಕಾರ ನೀಡಿದ ಐವರ್ನಾಡಿನ  ಪೆರುಮಾಳ್ ಲಕ್ಷ್ಮಣ್ ರವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 


ನಿರಂಜನ್ ಕಡ್ಲಾರು ಅವರ ಸಾಹಿತ್ಯದಲ್ಲಿ ಪುಷ್ಪಾವತಿ ಎಡಮಂಗಲ ಇವರ ಗಾಯನದಲ್ಲಿ  ಮೂಡಿಬಂದ ತುಳುನಾಡ ಕಾರ್ನಿಕದ ದೈವ 'ಕೊರಗಜ್ಜನ ಭಕ್ತಿಗೀತೆ' ಬಿಡುಗಡೆ ಸಂದರ್ಭದಲ್ಲಿ  ರಾಮಣ್ಣ ಎಡಮಂಗಲ , ವಿಜಯ್ ಪಾಟಾಜೆ , ಸಾಗರ್ ಬೆಳ್ಳಾರೆ , ಪ್ರದ್ಯುಮ್ನ , ಲಲಿತಾ ಕಡ್ಲಾರು ಇನ್ನಿತರರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top