ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸಿಗೇನೊ ತುಂಬಾ ನಿಚ್ಚಳವಾದ ಬಹುಮತವೇನೊ ಬಂತು. ಕಾರ್ಯಕರ್ತರೂ ಖುಷಿಪಟ್ಟರು, ಜನ ಸಾಮಾನ್ಯರೂ ಖುಷಿ ಪಟ್ಟರು. ಆದರೆ ಕಾಂಗ್ರೆಸ್ನ ಈ ಸಂಭ್ರಮದಲ್ಲಿ ಇನ್ನೂ ಸಂತೇೂಷ ಪಡದೆ ದುಃಖದಲ್ಲಿ ಇರುವ ಇಬ್ಬರು ವ್ಯಕ್ತಿಗಳೆಂದರೆ ಕಾಂಗ್ರೆಸ್ನಲ್ಲಿ ಕನಕಪುರದ ಬಂಡೆ ಎಂದೇ ಖ್ಯಾತರಾದ ಡಿಕೆಶಿ ಮತ್ತು ಪಕ್ಷದಲ್ಲಿ ಟಗರು ಮಂಡೆ ಅನ್ನಿಸಿಕೊಂಡ ಸಿದ್ಧು. ನಿಜಕ್ಕೂ ನೇೂಡಿದರೆ ಚುನಾವಣಾ ಪೂರ್ವದಲ್ಲಿಯೇ ಈ ಟಗರು ಯಾವಾಗಲೂ ಈ ಬಂಡೆ ಕಲ್ಲಿಗೆ ತಲೆ ಜಜ್ಜಿ ಕೊಳ್ಳುತ್ತಿರುವುದನ್ನು ನೇೂಡಿದ್ದೇವೆ. ಚುನಾವಣೆ ಬಂತು ಅನ್ನುವ ಕಾರಣಕೇೂಸ್ಕರ ಪಕ್ಷದ ಹಿರಿಯರ ಒತ್ತಾಯದ ಮೇರೆಗೆ ಈ ತಲೆ ಜಜ್ಜಿಕೊಳ್ಳುವುದನ್ನು ನಿಲ್ಲಿಸಿದರು. ಈಗ ಚುನಾವಣೆ ಆಗಿದೆ ಇನ್ನು ಏನ್ನಿದರೂ ಮುಖ್ಯ ಮಂತ್ರಿ ಆಗುವ ಆಸೆ ಬಲವಾಗಿಯೇ ಇದೆ. ಈ ಆಸೆ ಪಕ್ಷದ ಮುಂದಿನ ಆಡಳಿತ ಕೆಲಸಕ್ಕೆ ಮುಂದೆ ತೊಂದರೆ ಕೊಡದಿದ್ದರೆ ಸಾಕು.
ಹಾಗಾದರೆ ಮುಂದಿನ ಮುಖ್ಯಮಂತ್ರಿ ಯಾರು ಅನ್ನುವ ಪ್ರಶ್ನೆ? ಇಲ್ಲಿ ಸಿದ್ದರಾಮಯ್ಯ ನವರಿಗಿರುವ ಸಾಧ್ಯತೆಗಳು ಎಷ್ಟು? ಅದೇ ರೀತಿಯಲ್ಲಿ ಡಿಕೆಶಿಯವರಿಗೆ ಇರುವ ಸಾಧ್ಯತೆಗಳು ಎಷ್ಟು ಅನ್ನುವುದು ಇಂದಿನ ಚರ್ಚೆ. ಮುಖ್ಯಮಂತ್ರಿ ಹುದ್ದೆ ಯಾರಿಗೆ ಸಿಗಬೇಕಾದದ್ದು ನ್ಯಾಯ?
ಸಾಮಾನ್ಯವಾಗಿ ಚುನಾವಣೆಯ ನಂತರ ಗೆದ್ದು ಬಂದ ಪಕ್ಷದ ಅಧ್ಯಕ್ಷರಿಗೆ ಆರ್ಹತೆಗಳ ಜೊತೆಗೆ ಬಯಕೆಗಳು ಇದ್ದರೆ ನೀಡುವುದು ಸಾಮಾನ್ಯ ಸಂಪ್ರದಾಯ. ಆದರೆ ಕೊಡಲೇ ಬೇಕೆಂದೆನ್ನಿಲ್ಲ. ಸಮಯ ಸಂದರ್ಭಕ್ಕೆ ಸರಿಯಾಗಿ ಎಲ್ಲಾ ಪಕ್ಷಗಳು ಅನುಕೂಲ ಶಾಸ್ತ್ರವನ್ನೆ ಅನುಸರಿಸಿದ ಉದಾಹರಣೆಗಳು ಸಾಕಷ್ಟು ಇದೆ. ಈ ಅಥ೯ದಲ್ಲಿ ಡಿಕೆಶಿಯವರಿಗೆ ನೀಡ ಬೇಕಾದದ್ದು ನ್ಯಾಯ. ಕಷ್ಟ ಪಟ್ಟು ಜವಾಬ್ದಾರಿಯಿಂದ ದುಡಿದ ಕಾರಣ ಈ ಸಾಧನೆಯ ಬಹುಮತ ಕಾಂಗ್ರೆಸ್ಗೆ ಬಂತು ಅನ್ನುವುದು ನಾವು ಒಪ್ಪಿಕೊಳ್ಳಲೇಬೇಕು. ಈ ಕಾರಣಕ್ಕಾಗಿಯೇ ಅವರು ಸಾಕಷ್ಟು ಶತಪ್ರಯತ್ನದಲ್ಲಿ ಅವರಿದ್ದಾರೆ. ಆದರೆ ಅವರಿಗಿರುವ ಪ್ರಮುಖ ವೀಕ್ ಪಾಯಿಂಟ್ ಅಂದರೆ ಅವರ ಮೇಲೆ ಸಾಕಷ್ಟು ಕೇಸುಗಳು ಇನ್ನೂ ತನಿಖೆಯ ಹಂತದಲ್ಲಿ ಇರುವ ಕಾರಣ ಎಲ್ಲಿಯಾದರೂ ಕೇಂದ್ರ ಸರ್ಕಾರ ಬ್ರಹ್ಮಾಸ್ತ್ರ ಪ್ರಯೇೂಗಿಸಿ ಬಿಟ್ಟರೆ ಅದನ್ನು ಮುಂದೆ ಕಾಂಗ್ರೆಸ್ ಅರಗಿಸಿಕೊಳ್ಳುವುದು ತುಂಬಾ ಕಷ್ಟ ಅನ್ನುವ ವಿಚಾರಗಳು ಕಾಂಗ್ರೆಸ್ ಹೈಕಮಾಂಡ್ ತಲೆಯಲ್ಲಿಯೂ ಇರಬಹುದು. ಆದರೆ ಡಿಕೆಶಿಯವರಲ್ಲಿ ತಾನು ಮುಖ್ಯಮಂತ್ರಿ ಆಗಿ ಬಿಟ್ಟರೆ ಸುಲಭವಾಗಿ ತನ್ನನ್ನು ಯಾರು ಮುಟ್ಟಲು ಸಾಧ್ಯವಿಲ್ಲ ಅನ್ನುವ ರಕ್ಷಣಾತ್ಮಕ ಆಲೇೂಚನೆಯೂ ಇರಬಹುದು.
ಒಂದು ವೇಳೆ ಡಿಕೆಶಿಗೆ ಈ ಸಂದರ್ಭದಲ್ಲಿ ಅವಕಾಶ ಕೊಡದೇ ಹೇೂದರೆ ಕಾಂಗ್ರೆಸ್ಸಿನ್ನು ಬೆಂಬಲಿಸಿರುವ ಒಕ್ಕಲಿಗರ ಮತ ಕೃೆ ತಪ್ಪ ಬಹುದಾ ಅನ್ನುವ ಹೆದರಿಕೆ ಮುಂದಿನ ಚುನಾವಣಾ ದೃಷ್ಟಿಯಿಂದ ಕಾಡುವುದು ಸಹಜ. ಇದಾಗಲೇ ಈ ಸಮುದಾಯದ ಮಠಾಧಿಪತಿಗಳಿಂದ ಬಂದಾಗಿದೆ. ಈ ಎಲ್ಲಾ ಮತಗಳು ನೇರವಾಗಿ ಜೆಡಿಎಸ್ ಹೇೂಗುವ ಸಾಧ್ಯತೆಯು ಇದೆ. ಅಂತೂ ಡಿಕೆಶಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಕಾಂಗ್ರೆಸ್ ವರಿಷ್ಠರಿಗೆ ಖಂಡಿತವಾಗಿಯೂ ಇದೆ.
ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಮಾಸ ಲೀಡರ್ ಅನ್ನಿಸಿಕೊಂಡ ಅಹಿಂದ ಮತಗಳಿಗೆ ಲಗ್ಗೆ ಹಾಕಿ ಪಕ್ಷಕ್ಕೆ ಜಯ ತಂದ ಸಿದ್ದರಾಮಯ್ಯ ನವರನ್ನು ಬದಿಗೆ ಸರಿಸುವುದು ಕೂಡ ಕಷ್ಟ. ಆಡಳಿತದ ಅನುಭವವಿದೆ. ಮಾತ್ರವಲ್ಲ ಚುನಾಯಿತ ಸದಸ್ಯರಲ್ಲಿ ಹೆಚ್ಚಿನ ಬೆಂಬಲವೂ ಇವರಿಗಿದೆ ಅನ್ನುವುದು ಎಲ್ಲರಿಗೂ ತಿಳಿದ ಸತ್ಯಾಂಶ. ಇವರಿಗೆ ಕೊಡದೇ ಇರಲು ಕಾರಣಗಳು ಇದೆ. 2013ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ ಮಂತ್ರಿಯಾಗಿ ಮುನ್ನಡೆಸಿ 2018ರ ಚುನಾವಣೆಯಲ್ಲಿ ಪಕ್ಷವನ್ನು ದಡ ಸೇರಿಸಲು ಸಾಧ್ಯವಾಗದೆ ಪಕ್ಷದ ಸೇೂಲಿಗೆ ಕಾರಣವಾದ ಮುಖ್ಯಮಂತ್ರಿ ಅನ್ನುವ ಹಣೆಪಟ್ಟಿಯೂ ಇವರಿಗಿದೆ. ಹೇಗೂ ಈಗ ಇವರಿಗೆ 75ರ ವಯಸ್ಸು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ ಅನ್ನುವುದು ಡಿಕೆಶಿ ಬಣದ ಒತ್ತಾಯವೂ ಹೌದು.
ಹಾಗಾದರೆ ಈ ಇಬ್ಬರ ಸಮಬಲ ಹೇೂರಾಟದಲ್ಲಿ ಸಿಎಂ ಕುರ್ಚಿ ಯಾರಿಗೆ ಒಲಿಯಬಹುದು ತಕ್ಷಣವೇ ನಿರ್ಧಾರವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲ ಎರಡುವರೆ ವರುಷ ಒಬ್ಬರಿಗೆ ಇನ್ನೊಂದು ಎರಡು ವರೆ ಅವಧಿ ಇನ್ನೆುಾಬ್ಬರಿಗೆ ಹಂಚಿಹಾಕುವ ಮಧ್ಯಸ್ಥಿಕೆಗೂ ಸಿದ್ದರಾಮಯ್ಯ ಒಪ್ಪಿದರೂ ಡಿಕೆಶಿ ಒಪ್ಪಲಾರರು ಅನ್ನುವ ವಿಚಾರವೂ ನಮ್ಮ ಮುಂದಿದೆ. ಅಂತೂ ರಾಜ್ಯದ ಮುಖ್ಯ ಮಂತ್ರಿಗಳ ಕುರ್ಚಿ ಸದ್ಯಕ್ಕೆ ಕಾಂಗ್ರೆಸ್ ದೆಹಲಿ ಅಂಗಳಕ್ಕೆ ರಿಪೇರಿಗಾಗಿ ಹೇೂಗಿದೆ ಅನ್ನುವ ಮಾಹಿತಿಯೂ ಇದೆ. ಅಂತೂ ಕೊನೆಯಲ್ಲಿ ಯಾರೇ ಆದರೂ ನಮಗೇನು ತೊಂದರೆ ಇಲ್ಲ. ಮತ್ತೆ ಯಾವುದೆ ಮೇಜರ್ ಸರ್ಜರಿಗೆ ಬೇರೆಯವರಿಗೆ ಅವಕಾಶ ಮಾಡಿಕೊಡದಿದ್ದರೆ ಸಾಕು.
-ವಿಶ್ಲೇಷಣೆ: ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ