ಬ್ರಹ್ಮಕಲಶದ ಅದ್ದೂರಿಗೆ ಸಾಕ್ಷಿಯಾದ ಹೊರೆಕಾಣಿಕೆ
ಮಂಗಳೂರು: ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಆಡಳಿತಕ್ಕೊಳಪಟ್ಟ ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೇ 14ರಂದು ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮವು ಬೃಹತ್ ವೈಭವದ ಶೋಭಾಯಾತ್ರೆಯೊಂದಿಗೆ ಅದ್ದೂರಿಯಾಗಿ ಜರಗಿತು.
ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಹೊರಟ ಭವ್ಯ ಮೆರವಣಿಗೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕದ್ರಿ ದೇವಸ್ಥಾನದ ಅರ್ಚಕರಾದ ಕೃಷ್ಣ ಅಡಿಗ, ಪದವು ಭದ್ರಕಾಳಿ ದೇವಸ್ಥಾನದ ಪ್ರ. ಅರ್ಚಕರಾದ ಉಮೇಶ್ನಾಥ್ ಜಿ., ಮುಂಬೈ ವೆಲ್ಕಮ್ ಪ್ಯಾಕೆಜಿಂಗ್ & ಇಂಡಸ್ಟ್ರೀಸ್ ಇದರ ಸಿಎಂಡಿ ರವೀಂದ್ರನಾಥ್ ಎಂ. ಭಂಡಾರಿ, ಕದ್ರಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಅಧ್ಯಕ್ಷರಾದ ಗೋಕುಲ್ ಕದ್ರಿ, ಕದ್ರಿ ದೇವಸ್ಥಾನದ ಮೊಕ್ತೇಸರರಾದ ರಾಜೇಶ್ ದೇರೆಬೈಲು, ಮನಪಾ ಕಾರ್ಪೊರೇಟರ್ ಮನೋಹರ ಶೆಟ್ಟಿ ಕದ್ರಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಮಯೂರ್ ಉಳ್ಳಾಲ್, ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶ ಸಮಿತಿ ಗೌರವ ಸಲಹೆಗಾರ ಪುರುಷೋತ್ತಮ ಕುಲಾಲ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ಪ್ರಧಾನ ಕಾರ್ಯದರ್ಶಿ ಗಿರಿಧರ ಜೆ. ಮೂಲ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಎ., ಬ್ರಹ್ಮಕಲಶ ಸಮಿತಿ ಸಂಚಾಲಕ ಕೆ. ಸುಂದರ ಕುಲಾಲ್, ಪೂರ್ಣಕುಂಭ ಸ್ವಾಗತ ಸಮಿತಿಯ ಸಂಚಾಲಕಿ ಶ್ರೀಮತಿ ಗೀತಾ ಮನೋಜ್, ಗೌರವ ಸಲಹೆಗಾರ ಎಂ.ಪಿ. ಬಂಗೇರ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷರುಗಳಾದ ರಘು ಎ. ಮೂಲ್ಯ, ಸುನೀಲ್ ಆರ್, ಸಾಲ್ಯಾನ್, ದಿವಾಕರ ಮೂಲ್ಯ ಬೆಂಗಳೂರು, ಕಾರ್ಯಾಧ್ಯಕ್ಷರುಗಳಾದ ಯಜ್ಞೇಶ್ ಬರ್ಕೆ, ಗಿರಿಧರ ಬಿ. ಸಾಲ್ಯಾನ್ ಮುಂಬೈ, ರಾಮ ಕುಲಾಲ್ ಪಕ್ಕಾಲು, ರವೀಂದ್ರ ಮುನ್ನಿಪ್ಪಾಡಿ, ವಿಠಲ್ ಕನ್ನೀರ್ತೋಟ, ದೇವದಾಸ್ ಎಲ್. ಕುಲಾಲ್, ಕೋಶಾಧಿಕಾರಿ ಬಿ. ಮೋಹನದಾಸ್ ಅಳಪೆ, ಮುಂಬೈ ಸಮಿತಿ ಅಧ್ಯಕ್ಷ ಬಿ. ದಿನೇಶ್ ಕುಲಾಲ್, ಬೆಂಗಳೂರು ಸಮಿತಿ ಅಧ್ಯಕ್ಷ ಮಾದವ ಕುಲಾಲ್, ಮೈಸೂರು ವಲಯ ಸಮಿತಿ ಅಧ್ಯಕ್ಷ ಬಿ. ತಿಮ್ಮಪ್ಪ, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಕೆ. ಸುಂದರ ಕುಲಾಲ್, ಸಂಚಾಲಕರಾದ ಕಿರಣ್ ಅಟ್ಲೂರು ಸೇರಿದಂತೆ ಹಲವು ಅತಿಥಿ ಗಣ್ಯರು, ಅವಿಭಜಿತ ಜಿಲ್ಲೆಯ ಕುಲಾಲ ಬಾಂಧವರು, ನಾಡಿನ ಸಮಸ್ತ ಭಕ್ತರು ಮಾತ್ರವಲ್ಲದೆ ಮುಂಬೈ, ಪೂನಾ, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲು ಪಡೆದರು.
ಆಕರ್ಷಕ ಮೆರವಣಿಗೆ
ಮಲ್ಲಿಕಟ್ಟೆ-ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ಭವ್ಯ ಮೆರವಣಿಗೆಯಲ್ಲಿ ಹಸಿರುವಾಣಿ ಹೊರೆಕಾಣಿಕೆಯ ಮೆರವಣಿಗೆ ಸಾಗಿ ಬಂತು. ಆಕರ್ಷಕ ಟ್ಯಾಬ್ಲೋಗಳು, ಚೆಂಡೆ ವಾದಕಗಳು, ಅತ್ಯಾಕರ್ಷಕ ಬರ್ಕೆ ಹುಲಿವೇಷ, ಕುಣಿತ ಭಜನೆ, ಗೊಂಬೆಕುಣಿತ, ತಾಲೀಮು, ಮೆರವಣಿಗೆಗೆ ಮೆರುಗು ನೀಡಿತು. ಕದ್ರಿ ಕ್ಷೇತ್ರದಿಂದ ಕುಲಶೇಖರ ಕ್ಷೇತ್ರಕ್ಕೆ ಬಂದ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾದಯಾತ್ರೆ ಮಾಡಿದ್ದು, ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಸುಮಾರು ಐದಾರು ಕಿ.ಮೀ.ನ ಮೆರವಣಿಗೆಗೆ ಕಾಲುನಡಿಗೆಯಲ್ಲೇ ಸಾಥ್ ನೀಡಿದರು.
ಗಮನ ಸೆಳೆದ ತರಕಾರಿ ರಥ
ಮೆರವಣಿಗೆಯಲ್ಲಿ ಬರ್ಕೆ ಹುಲಿಗಳ ನಲಿಕೆ ಗಮನ ಸೆಳೆದರೆ ಮತ್ತೊಂದೆಡೆ ತರಕಾರಿಯಿಂದಲೇ ರಚಿಸಿದ ತರಕಾರಿ ರಥ ಗಮನ ಸೆಳೆಯಿತು.
ಬೆಳಿಗ್ಗೆ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳಾದ ವೇ|ಮೂ| ಬ್ರಹ್ಮಶ್ರೀ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಗಣಯಾಗ, ಉಗ್ರಾಣ ಮುಹೂರ್ತ ಜರಗಿತು.
ರಾಜ್ಯದ ವಿವಿಧ ಕಡೆಗಳಿಂದ ಹೊರೆಕಾಣಿಕೆ
ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹೊರೆಕಾಣಿಕೆ ಸಮರ್ಪಿಸಿದರು. ನೂರಾರು ವಾಹನಗಳಲ್ಲಿ ಬಂದ ಹೊರೆಕಾಣಿಕೆಯು ಬ್ರಹ್ಮಕಲೋತ್ಸವದ ಅದ್ದೂರಿಗೆ ಸಾಕ್ಷಿಯಾಯಿತು. ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗಿಬಂದ ಸಾವಿರಾರು ಮಂದಿ ಭಕ್ತರಿಗೆ ಕ್ಷೇತ್ರದ ಅನ್ನಛತ್ರದಲ್ಲಿ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ