ದೇಶಹಿತ ಕಾಯುವ ಪಕ್ಷಕ್ಕೆ ರಾಮಚಂದ್ರಾಪುರ ಮಠದ ಶಿಷ್ಯವರ್ಗ ಬೆಂಬಲ

Upayuktha
0


ಗೋಕರ್ಣ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದೇಶಹಿತ, ರಾಜ್ಯಹಿತ, ಸಮಾಜಹಿತ, ಸಂಸ್ಕøತಿ ಮತ್ತು ಗೋವಿನ ಹಿತ ಕಾಯುವ ಪಕ್ಷವನ್ನು ಶ್ರೀರಾಮಚಂದ್ರಾಪುರ ಮಠದ ಶಿಷ್ಯವರ್ಗ ಬೆಂಬಲಿಸಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಶಿಷ್ಯಭಕ್ತರ ಸಭೆಯಲ್ಲಿ ಒಕ್ಕೊರಲ ನಿರ್ಣಯ ಆಂಗೀಕರಿಸಲಾಯಿತು.


ಹವ್ಯಕ ಮಹಾಮಂಡಲ, ಮಂಡಲ, ವಲಯ ಹಾಗೂ ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರ ಪದಾಧಿಕಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಗಣ್ಯರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ಸಂಬಂಧ ಸರ್ವಾನುಮತದ ನಿರ್ಣಯ ಆಂಗೀಕರಿಸಲಾಯಿತು.

ಯಾವುದೇ ಕಾರಣಕ್ಕೆ ಸಮುದಾಯದ ಮತಗಳು ಹರಿದು ಹಂಚಿ ಹೋಗಬಾರದು. ಶ್ರೀಮಠದ ಶಿಷ್ಯಭಕ್ತರು ತಾವು ಮಾತ್ರ ಒಂದು ತತ್ವ ಸಿದ್ಧಾಂತಕ್ಕೆ ಬದ್ಧವಾಗಿರುವುದಲ್ಲದೇ ಸಮಾಜದ ಇತರ ವರ್ಗಗಳಿಗೂ ಮಾರ್ಗದರ್ಶಿ ಪಾತ್ರ ವಹಿಸುವ ಕಾರಣ ಇಡೀ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರು ಅಭಿಪ್ರಾಯಪಟ್ಟರು.


ಜತೆಗೆ ಮುಂದಿನ ದಿನಗಳಲ್ಲಿ ಮಠಕ್ಕೆ ಶ್ರೀರಕ್ಷೆಯಾಗಿ ನಿಲ್ಲುವ ಪಕ್ಷಕ್ಕೇ ನಮ್ಮ ಬೆಂಬಲ ಎಂಬ ಅಂಶವನ್ನು ಮತಯಾಚನೆಗೆ ಬರುವ ಮುಖಂಡರಿಗೆ ಸ್ಪಷ್ಟಪಡಿಸಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಎಲ್ಲ ಶಿಷ್ಯಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದೂ ಸಭೆಯಲ್ಲಿ ಸಲಹೆ ನೀಡಲಾಯಿತು.


ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸೇರಿದಂತೆ ಹವ್ಯಕ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಹವ್ಯಕ ಮಹಾಮಂಡಲದಿಂದ ಬರುವ ಸೂಚನೆಗೆ ಅನುಗುಣವಾಗಿ ಎಲ್ಲ ಹವ್ಯಕ ಬಾಂಧವರು ಮತ ಚಲಾಯಿಸಬೇಕು. ರಾಷ್ಟ್ರಹಿತ- ರಾಜ್ಯಹಿತವನ್ನೇ ಪ್ರಮುಖ ಅಂಶವಾಗಿ ಪರಿಗಣಿಸಬೇಕು ಎಂದು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top