ಮಲ್ಪೆಯಿಂದ ಕೊಡವೂರು ಹೋಗುವ ಪ್ರಮುಖ ರಸ್ತೆಯ ಎರಡೂ ಬದಿಯಲ್ಲಿ ಕಸ ನಿರಂತರವಾಗಿ ಸುರಿಯುತ್ತಿದ್ದ ಪರಿಣಾಮ, ಆ ರಸ್ತೆಯಲ್ಲಿ ಸಂಚರಿಸುವಾಗ ದುರ್ವಾಸನೆ ಪರಿಣಾಮ ಜನರು ಬಹಳಷ್ಟು ತೊಂದರೆಗೆ ಒಳಗಾಗಿದ್ದರು.
ಅಲ್ಲಿ ವಾಸಿಸುತ್ತಿದ್ದವರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದರು. ಇಲ್ಲಿ ಕೇವಲ ಕಸ ಅಲ್ಲದೆ ಕೊಳೆತ ಮೀನು, ಮಾಂಸ ಹೊಟೇಲ್ ತ್ಯಾಜ್ಯ ಹಾಕುತ್ತಿದ್ದ ಪರಿಣಾಮ ಪರಿಸರ ಮಲಿನವಾಗಿತ್ತು. ಇಂತಹ ಪ್ರದೇಶವನ್ನು ಉಡುಪಿ ನಗರಸಭೆಯವರು ಸ್ವಚ್ಚ ಭಾರತ ಯೋಜನೆಯಡಿ ಸುಂದರವಾದ ಮಿನಿ ಉದ್ಯಾನವನ್ನಾಗಿ ಪರಿವರ್ತಿಸಿದ್ದಾರೆ.
ಇದು ಉತ್ತಮವಾದ ಯೋಜನೆಯಾಗಿದ್ದು ಜನರು ಈ ರೀತಿಯ ಉತ್ತಮ ಉದ್ಯಾನವನ ನಿರ್ಮಾಣ ಮಾಡಿದಾಗ ಕಸ ಹಾಕುವವರು ಕಡಿಮೆಯಾಗಬಹುದು ಎಂಬ ದೃಷ್ಟಿಯಲ್ಲಿ ಕಾಪು ದೀಪ ಸ್ತಂಭ ಸಹಿತ ಉಪಯೋಗವಿಲ್ಲದ ಪ್ಲಾಸ್ಟಿಕ್ ಬಾಟಲ್ ಹಾಳಾದ ಟಯರ್ನಿಂದ ಮಾಡಿದ ಕಲಾಕೃತಿಗಳನ್ನು ರಚಿಸಲಾಗಿದೆ. ಈ ರೀತಿಯ ಮಾದರಿಗಳನ್ನು ಎಲ್ಲಾ ಕಡೆ ಮಾಡಿದ್ದಲ್ಲಿ ಕಸ ಹಾಕುವುದು ಕಡಿಮೆಯಾಗಬಹುದು.
ಪ್ರಾಣಿ ಪಕ್ಷಿಗಳು ಪರಿಸರ ನಾಶವಾದರೆ ನಾವು ನಾಶವಾಗುತ್ತೇವೆ ಎಂದು ಅರಿತು ಪರಿಸರ ಬೆಳೆಸುವಲ್ಲಿ ಅವುಗಳು ಯೋಗದಾನ ನೀಡುತ್ತಿವೆ. ಆದರೆ ಮನುಷ್ಯ ಇನ್ನೂ ಬುದ್ಧಿ ಕಲಿಯದೆ, ಈ ರೀತಿಯ ಪರಿಸರ ನಾಶದ ಕಾರ್ಯ ನಿರಂತರವಾಗಿ ಮಾಡುತ್ತಿರುವುದು ದುಃಖಕರ. ಪರಿಸರ ಉಳಿಸೋಣ ದೇಶ ರಕ್ಷಿಸೋಣ.
- ರಾಘವೇಂದ್ರ ಪ್ರಭು, ಕರ್ವಾಲು, ಉಡುಪಿ
9880811036
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ