ಪ್ರವಾಸ: ಕರುನಾಡ ಭೂಸ್ವರ್ಗ ಮುಳ್ಳಯ್ಯನಗಿರಿಯಲ್ಲೊಂದು ದಿನ

Upayuktha
0

ಮುಂಜಾನೆ ಹೊತ್ತು, ಇಂಪಾದ ಗಾಳಿ, ತಂಪಾದ ವಾತಾವರಣ ಈ ಸಮಯದ ವೇಳೆ ಪ್ರಯಾಣ ಬೆಳೆಸುವುದೆಂದರೆ ನನಗೆ ತುಂಬಾ ಹುಮಸ್ಸು, ಹೀಗಿರುವಾಗ ಒಂದು ದಿನ ಮನೆಯವರೆಲ್ಲ ಚಿಕ್ಕಮಗಳೂರಿನಲ್ಲಿರುವ "ಮುಳ್ಳಯ್ಯನಗಿರಿ" ಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಿದರು. ಕಿವಿಗೆ ಈ ಮಾತು ಕೇಳಿದ ತಕ್ಷಣ ಎಲ್ಲಿಲ್ಲದ ಆನಂದ ಉಂಟಾಯಿತು." ಅದರಲ್ಲೂ ಮಲಗುವ ಮುಂಚೆ ಅಪ್ಪ ಹೀಗೆಳಿದರು" ನಮ್ಮ ಕರ್ನಾಟಕದಲ್ಲಿ ಅತಿ ಎತ್ತರವಾದ ಶಿಖರವೆ ಮುಳ್ಳಯ್ಯನ ಗಿರಿ ಎಂದು! ಆಗಷ್ಟೇ ನಾನು 6ನೇ ತರಗತಿ ಮುಗಿಸಿ 7ನೇ ತರಗತಿಗೆ ಬಂದಿದ್ದೆ.


ತುಂಬಾ ಕುತೂಹಲವಾದ ಯೋಚನೆಯಲ್ಲಿ ಆ ದಿನ ರಾತ್ರಿ ನಿದ್ರೆ ಬಾರದು ಉಂಟು, ಇಗಿರುವಾಗ ಒಂದು ದಿನ ಉಳಿದು ಬರೋಣ ಎಂಬ ಮಾತು ಅಮ್ಮನ ಬಾಯಿಂದ ಹೊರಟಿತು. ಅಮ್ಮ ಅಲ್ಲಿಗೆ ಹೋಗುವುದೆಂದು ಹಣ್ಣು, ಹಂಪಲು ಕೆಲವೊಂದು ಇಟ್ಟು ತಿನ್ನುವ ತಿಂಡಿಯನ್ನು "ಪ್ಯಾಕ್ "ಮಾಡಿ ನಾವು ಹೋಗುವ ಜೀಪಿಗೆ ಮಲಗುವ ಮುಂಚೆ ಅದರಲ್ಲಿ ಇಟ್ಟು ಮಲಗಿದರು, ಮುಂಜಾನೆ ಸರಿಸುಮಾರು 5.30 ರ ಹೊತ್ತಿಗೆ ಮನೆಯಿಂದ ಹೊರಟೆವು. ನನ್ನ ಊರು ಶಿಲ್ಪಕಲೆಗಳಿಗೆ ಹೆಸರುವಾಸಿಯಾದ ಬೇಲೂರು, ಮುಂದೆ ಹೋಗುತ್ತಾ ಕಾಫಿನಾಡು ಎಂಬ ಬರಹ ಎಲ್ಲೆಡೆ ಕಂಪಿಸುತ್ತಿತ್ತು.


ಸರಿಸುಮಾರು 7ರ ಹೊತ್ತಿಗೆ ಚಿಕ್ಕಮಗಳೂರಿಗೆ ತಲುಪಿದೆವು, ಅಲ್ಲಿ ಕಾಫಿ, ತಿಂಡಿ ತಿಂದು ಮುಳ್ಳಯ್ಯನಗಿರಿಯತ್ತ ಪ್ರಯಾಣ ಬೆಳೆಸಿದೆವು, ಚಿಕ್ಕಮಗಳೂರಿಂದ, ಗಿರಿಗೆ 20 ಕಿಲೋಮೀಟರ್ ನ ದೂರವಿದೆ. ಕಿರಿದಾದ ರಸ್ತೆ ಒಂದು ಕಡೆ ಕಿರಿದಾದ ಬಂಡೆಕಲ್ಲಿನ ಮಧ್ಯದಲ್ಲಿ ಬರುತ್ತಿರುವ ನೀರು ದಾರಿಯನ್ನೆಲ್ಲಾ ಹರಿದಿತ್ತು. ಮತ್ತೊಂದು ಬದಿಯಲ್ಲಿ  ಇಣುಕಿ ನೋಡಿದರೆ ಪಾತಾಳ ಇದರ ಮಧ್ಯದ ಪಯಣ  ಸೊಗಸಾದ ಅನುಭವ ನೀಡಿತ್ತು. ಟ್ರಾಫಿಕ್ ಜಾಮ್ ಗಳ ಮಧ್ಯೆ ನಿಲ್ಲಿಸಿ, ನಿಲ್ಲಿಸಿ ಚಲಿಸುತ್ತಿರುವ ಗಾಡಿಯಲ್ಲಿ ಪಾತಾಳದ ರೀತಿ ಕಾಣುತ್ತಿರುವ ಆ ದಾರಿಯನ್ನು ನೋಡುವುದೇ ಮನಮೋಹಕ. ಮುಂದೆ ಬೆಟ್ಟ ಏರುತ್ತಿದ್ದಂತೆಯೇ, ಮಂಜು ಕವಿದ ವಾತಾವರಣ ನಿರ್ಮಾಣವಾಗುವುದರಿಂದ ವಿಪರೀತ ಚಳಿ, ನಮ್ಮನ್ನೇ ತೂರಿಕೊಂಡು ಹೋಗುವಷ್ಟು ಗಾಳಿ ಬೀಸುತ್ತಿತ್ತು.


ಒಂದು ಸಮ ತಟ್ಟಾದ ಸ್ಥಳದಲ್ಲಿ ಜೀಪನ್ನು ನಿಲ್ಲಿಸಿ  ಸುತ್ತಲು ಒಮ್ಮೆ ಕಣ್ಣು ಮಿಟುಕಿಸಿ ಮೆಟ್ಟಿಲುಗಳನ್ನು ಏರುವುದಕ್ಕೆ ಮುಂದಾದೆವು. ಮೆಟ್ಟಿಲು ಹತ್ತಿದಂತೆ ರಬಸನೇ ಬೀಸುವ ಗಾಳಿ ನಮ್ಮನ್ನೇ ಹೊತ್ತುಯ್ಯುತದ್ದೇಯೋ   ಎನ್ನುವ ಭೀತಿ ಕೂಡ ಕಾಡಲಾರಂಭಿಸಿತು. ಮೆಟ್ಟಿಲುಗಳನ್ನು ಹತ್ತುವಾಗ ನನ್ನ ಗೋಚರಕ್ಕೆ ಬಂದದ್ದು "ಪ್ರಪಾತಗಳು". ನೋಡುವಾಗ ಕಣ್ಣಿಗೆ ಅಪೂರ್ವವೆನಿಸಿದವು (6,318) ಅಡಿ ಅಷ್ಟು ಎತ್ತರಕ್ಕೆ ಏರಿ ದೇವಾಲಯವನ್ನು ತಲುಪಿದೆವು. ಇಡೀ ಚಿಕ್ಕಮಗಳೂರು ಒಮ್ಮೆ ನೋಡಿದಾಗೆ ಅನಿಸಿತು, ನನ್ನ ಮನೆಯವರು ದೇವರತ್ತ ಕಾಲ್ನಡಿಗೆ ಹಾಕಿದರೆ, ನನ್ನ ಮನಸು ತುತ್ತ ತುದಿ, ಚೂಪಾಗಿ ಕಾಣುತ್ತಿರುವ, ಒಂದಕ್ಕೊಂದು ಹೆಗಲಾಗಿ ನಿಂತಿರುವ ಬೆಟ್ಟಗಳ ಹತ್ತಿರ ಕಣ್ಣ ನೋಟ ಸೆಳೆಯಿತು.


ಯಾಕೆಂದರೆ ಕರ್ನಾಟಕದಲ್ಲಿ ಅತೀ ಎತ್ತರವಾದ ಶಿಖರ ಇದು ಎಂದ ಮೇಲೆ ಹಲವಾರು ವಿಚಾರವನ್ನು ಗಮನಿಸುವ ಕುತೂ ಹಲ, ಸ್ವಲ್ಪ ಸಮಯ ಒಬ್ಬಳೇ ಕಳೆದು ನಂತರ ಮನೆಯವರ ಜೊತೆ ನಡೆದೆ, ದೇವರಿಗೆ ಕೈ ಮುಗಿದು ಸೆಲ್ಫಿ, ಫೋಟೋ, ತೆಗೆದು ಮೆಟ್ಟಿಲುಗಳನ್ನು ಇಳಿಯುತ್ತಾ ಬಂದೇವು ಬೆಟ್ಟದ ಕೆಳಗೆ ಊಟದ ವ್ಯವಸ್ಥೆ ಇರಲಿಲ್ಲ ತಂದ ತಿಂಡಿ ಹಣ್ಣು ಹಂಪಲು ಹೊತ್ತು ಪುನಃ ನಾವೆಲ್ಲರೂ ಮೆಟ್ಟಿಲೇರಿದೆವು, ಊಟವೇನೋ ಆಯಿತು. ಬೆಳಗಿನ ಸೂರ್ಯ ಮರೆಯಾಗಿ ಬೆಳದಿಂಗಳ ಚಂದ್ರನು ಆವರಿಸಿದ, ಕಾಫಿ ನಾಡ ತಪ್ಪಲಿನಲ್ಲಿ ಸಮಯ ಕಳೆದದ್ದು ಗೊತ್ತೇ ಆಗಲಿಲ್ಲ. ವಿಪರೀತವಾದ ಚಳಿ, ನಾವಲ್ಲದೆ ಬೇರೊಂದು ಕುಟುಂಬ ಕೂಡ ಬಂದಿದ್ದ ಕಾರಣ ಸಣ್ಣದಾಗೆ ಬೆಂಕಿ ಹಾಕಿ ಬಿಸಿ ಕಾಯಿಸಿದೆವು. ತಂದ ತಿಂಡಿಯನ್ನು ಅವರಿಗೂ ಕೊಟ್ಟು ಅವರು ತಂದ ತಿಂಡಿಯನ್ನು ನಮಗೂ ನೀಡಿ ಒಟ್ಟಿಗೆ ಸೇರಿ ರಾತ್ರಿಯ ಊಟ ಮಾಡಿದೆವು. ಇದೊಂದು ಮರೆಯಲಾಗದ ಸವಿನೆನಪು.


"ಯಾರ ಮನೆಯ ಊಟದ ಋಣ ಎಲ್ಲಿರುವುದೋ" ನಂತರ ಮಲಗುವುದಕ್ಕೆ ಎಂದು ತಂದ ಚಾಪೆಯನ್ನು ಹಾಕಿ ದೇವರನ್ನು ನಮಿಸಿ ಮಲಗಿದೆವು. ತಂಪಾದ ವಾತಾವರಣ, ಸುಖ ನಿದ್ರೆ.


ಬೆಳಗಾದದ್ದು ತಿಳಿಯಲೇ ಇಲ್ಲ: ಮೆಟ್ಟಿಲು ಹತ್ತುವ ಪಕ್ಕದಲ್ಲಿ ಸಣ್ಣದಾದ ಕೊಳ.ಸ್ನಾನ ಮಾಡಿ ಮುಳ್ಳಪ್ಪ ಸ್ವಾಮಿಯ ದರ್ಶನ ಪಡೆದು ಪರಿಚಯವಾದ ಕುಟುಂಬಕ್ಕೆ ಧನ್ಯವಾದ ತಿಳಿಸಿ ಮೆಟ್ಟಿಲಿಳಿದು  ಬಂದು ಗುಡಿಯತ್ತ ನೋಡುತ್ತಾ ಕೈಮುಗಿದು ಹೊರಟೆವು. ಮುಳ್ಳಯ್ಯನಗಿರಿಯನ ನೋಡಿ ಬಂದಾಗ ಮನಸ್ಸಿನಲ್ಲಿ ಹೊರಬಂದ ಭಾವನೆ "ಸ್ವರ್ಗವನ್ನು ಕಂಡೆ ನಾ... ಮುಳ್ಳಯ್ಯನಗಿರಿಯಲ್ಲಿ ಎಂಬ ಒಳ ಮಾತನ್ನು ಹೃದಯ ಬಡಿದುಕೊಂಡಿತು.


"ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ-  ನಾವು ಓದುವುದರಿಂದ ಗ್ರಹಿಸುವುದು ಪುಸ್ತಕದಲ್ಲಿ ಇದ್ದದ್ದನ್ನು ಮಾತ್ರ, ದೇಶವನ್ನು ಸುತ್ತಿ ಬಂದಾಗ ಮಸ್ತಕವೇ ಕೋಶವಾಗಿರುತ್ತದೆ"

-ದೀಕ್ಷಿತ ಗಿರೀಶ್

ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ವಿವೇಕಾನಂದ ಮಹಾವಿದ್ಯಾಲಯ (ಪುತ್ತೂರು)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top