ಬೆಂಗಳೂರು: ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿಯ ವತಿಯಿಂದ ಮಲ್ಲೇಶ್ವರಂ ಈಜುಕೊಳದ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬಾಲಕಿಯರ ಹಾಗೂ ಮಹಿಳೆಯರಿಗೆ ಶ್ರೀ ಶೋಭಾನ ನಾಮ ಸಂವತ್ಸರ ವಸಂತ ಋತು ಅಂದರೆ ಮೇ 10 ಬುಧವಾರ ಆರಂಭವಾದ ಬೇಸಿಗೆ ಶಿಬಿರ ದಶಮೀ ರವಿವಾರ 14 ರಂದು ಪೂರ್ಣಗೊಂಡಿತು. ದಿನಕ್ಕೊಬ್ಬರಂತೆ ವಿಶೇಷ ಅತಿಥಿಗಳನ್ನು ಕರೆಸಿ ಅವರಿಂದ ಹಿತೋಪದೇಶ ಮತ್ತು ಆಶೀರ್ವಾದ ಮಾಡಿಸಲಾಯಿತು.
ಅರಳು ಮಲ್ಲಿಗೆ ಪಾರ್ಥಸಾರಥಿ ಹಾಗೂ ಎಂ. ರಾಜಲಕ್ಷ್ಮೀ ಪಾರ್ಥಸಾರಥಿ ಅವರು ಉದ್ಘಾಟನೆ ದಿನ ಬಂದು ಹುರಿದುಂಬಿಸಿದರು.
ಹಾಗೆಯೇ ಎರಡನೇ ದಿನ "ಸಮಸ್ತ ಲೋಕ ಸುಖಿನೋಭವಂತು "ಎಂದು ಸದಾ ರಾಯರಲ್ಲಿ ದೇವರಲ್ಲಿ ಬೇಡುವ ನಮ್ಮ ವೇದವ್ಯಾಸಾಚಾರ್ ಹಾಗೂ ಉಮಾ ವೇದವ್ಯಾಸಚಾರ್ ಅವರು ತುಳಸಿ ಮಹಿಮೆ ಹಾಗೂ ಧಾರ್ಮಿಕ ಉಡುಗೆ-ತೊಡಗೆ ಬಗ್ಗೆ ಎಚ್ಚರಿಸಿದರು.
ಜಯತೀರ್ಥಾಚಾರ್ ಹಾಗೂ ಶ್ರೀಮತಿ ವಾರುಣಿ ಜಯತೀರ್ಥಾಚಾರ್ ಅವರು ಮೂರನೇ ದಿನ ಅತಿಥಿಗಳಾಗಿ ಬಂದು ಪುಣ್ಯಕ್ಷೇತ್ರಗಳು ಅದರಲ್ಲೂ ಪಂಢರಾಪುರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಡಾ|| ಎನ್.ಜಿ. ವಿಜಯಲಕ್ಷ್ಮಿ ಅವರು ನಾಲ್ಕನೇ ದಿನ ಅತಿಥಿಗಳಾಗಿದ್ದು ತುಳಸಿ ಪೂಜೆ ಮತ್ತು ಗೌರಿ ಪೂಜೆ ಬಗ್ಗೆ ಮಾಹಿತಿ ನೀಡಿದರು.
ವಿಠಲ ಹಾಗೂ ಭಾರ್ಗವಿಯವರು ಐದನೇ ದಿನ ನಮ್ಮ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರು ಮತ್ತು ಮಕ್ಕಳಿಗೆ ಆಶೀರ್ವಾದದೊಂದಿಗೆ ಉಡುಗೊರೆ ಇತ್ತು ದಿನವನ್ನು ರಂಗೆಬ್ಬಿಸಿದರು. ಇವರು ಆಟದಲ್ಲಿ ಪಾಠ ಎಂಬಂತೆ ಸುಲಭವಾಗಿ ನಮ್ಮ ಮಕ್ಕಳಿಗೆ ನಿತ್ಯೋಪಾಸನೆ ಮಾಡಬೇಕಾದ ದಾಸರುಗಳು, ಋಷಿಗಳು ಹಾಗೂ ನಿತ್ಯ ಕರ್ಮ ಮೊದಲುಗೊಂಡು ಭಾಗವತದವರೆಗೂ ತಿಳಿಸಿದರು.
ಈ ಸಂದರ್ಭದಲ್ಲಿ ನಮ್ಮ ಗೌರವ ಕಾರ್ಯದರ್ಶಿಗಳಾದ ನರಹರಿರಾವ್ ಅವರು ಮೊದಲುಗೊಂಡು ಮಠದ ಎಲ್ಲಾ ಸಿಬ್ಬಂದಿಗಳು ಪೂರ್ಣ ಸಹಕಾರ ನೀಡಿದ್ದಾರೆ.
ರಮಾಮಣಿ ಹಾಗೂ ಅವರ ಸಂಗಡಿಗರಿಂದ ಈ ಬೇಸಿಗೆ ಶಿಬಿರ ಅದ್ಭುತವಾಗಿ ಯಶಸ್ಸುಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ