ಶೂನ್ಯ ನೆರಳಿನ ದಿನ - ವಿದ್ಯಾರ್ಥಿಗಳಿಂದ ಖಗೋಳ ವಿದ್ಯಮಾನದ ವೀಕ್ಷಣೆ

Upayuktha
0



ಉಡುಪಿ: ಏಪ್ರಿಲ್ 25 ರಂದು ಶೂನ್ಯ ನೆರಳಿನ ದಿನ - ಈ ಖಗೋಳ ವಿದ್ಯಮಾನವನ್ನು ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಿಸಿದರು. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಈ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಿತ್ತು. 


ವಿದ್ಯಾರ್ಥಿಗಳು ಮಧ್ಯಾಹ್ನ 12.29 ಕ್ಕೆ ವಿವಿಧ ವಸ್ತುಗಳ ನೆರಳುಗಳು ಕಣ್ಮರೆಯಾಗಿರುವುದನ್ನು ಗಮನಿಸಿದರು. PAAC ನ ವಿದ್ಯಾರ್ಥಿಗಳು ಹಲವಾರು ವಸ್ತುಗಳನ್ನು ತಂದು ಈ ವಿದ್ಯಮಾನವನ್ನು ನೋಡಿ ಆನಂದಿಸಿದರು. ಶೂನ್ಯ ನೆರಳಿನ ಕ್ಷಣದಲ್ಲಿ ಮಾತ್ರ ಪ್ರದರ್ಶಿಸಬಹುದಾದ ಕೆಲವು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. 

 

ಡಾ. ಎ . ಪಿ . ಭಟ್, PAACನ ಸ್ಥಾಪಕ ಸಂಯೋಜಕರು ಹಾಗೂ ಉಡುಪಿಯ ಪೂರ್ಣಪ್ರಜ್ಞ ಸಂಸ್ಥೆಗಳ ಆಡಳಿತಾಧಿಕಾರಿ, ಇವರು ವಿದ್ಯಾರ್ಥಿಗಳಿಗೆ ಈ ವಿದ್ಯಮಾನದ ಹಿಂದಿನ ಖಗೋಳ ವಿಜ್ಞಾನವನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರತಿಭಾ ಸಿ. ಆಚಾರ್ಯ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ವಿನಯ್ ಕುಮಾರ್, ಕಾಲೇಜಿನ ವಿವಿಧ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


- ಅತುಲ್ ಭಟ್, ಸಂಯೋಜಕರು

  ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top