ಬಾಳೆಗೊನೆ ಕಡಿಯುವ ಸಮಾರಂಭ
ಮಧೂರು: ಕಾಸರಗೋಡಿನ ಪ್ರಮುಖ ದೇವಾಲಯವಾದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಏಪ್ರಿಲ್ 14ರಿಂದ 18ರ ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ವಿಷು ಸಂಕ್ರಮಣದಂದು ದೇವಸ್ಥಾನದ ಜಾತ್ರೆಗೆ ಧ್ವಜಾರೋಹಣ ನಡೆಯುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರದಲ್ಲಿ ಬಾಳೆ ಗೊನೆ ಕಡಿಯುವ ಸಮಾರಂಭ ಶನಿವಾರ ನೆರವೇರಿತು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ.ಸಿ ಕೃಷ್ಣವರ್ಮ ರಾಜ, ರಾಘವ ಮಣಿಯಾಣಿ, ಎ.ಸುಬ್ರಹ್ಮಣ್ಯ ಶರ್ಮ, ಬಿ.ಎನ್ ಸುಬ್ರಹ್ಮಣ್ಯ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ವೀಡಿಯೋ: ಚಂದ್ರಶೇಖರ ಏತಡ್ಕ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ