ಮಂಗಳೂರು : ಮಂಗಳೂರು ನಗರದ ಮಂಗಳಾದೇವಿ ಸಮೀಪದ ರಾಮಕೃಷ್ಣ ಮಠದಲ್ಲಿ ಫೆಬ್ರವರಿ ತಿಂಗಳಲ್ಲಿ ಎರಡು ವಾರ ಜರುಗಿದ ಯೊಗ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಸ್ವಾಮಿ ಜಿತಕಾಮನಂದ ಜೀ ಮಹಾರಾಜ್ ತಮ್ಮ ಆಶೀರ್ವಚನದಲ್ಲಿ ಯೋಗವನ್ನು -(ಪತಂಜಲಿ ಋಷಿಗಳ ಅಷ್ಟಾಂಗ ಯೋಗ) ನಿತ್ಯ ನಿರಂತರವಾಗಿ ಅಭ್ಯಾಸ ಮಾಡಿದಾಗ ಸಹಜವಾಗಿ ಮನಸ್ಸಿಗೆ ನೆಮ್ಮದಿ ಶಾಂತಿ ದೊರಕುತ್ತದೆ. ಯೋಗವು ವೈವಿಧ್ಯಮಯ ಶ್ರೇಣಿಯ ವಿಷಯಗಳನ್ನು ಹೊಂದಿದೆ. ಒಬ್ಬರ ಜೀವನದಲ್ಲಿ ಸಮತೋಲನ ಮತ್ತು ನಿಯಂತ್ರಣವನ್ನು ಪಡೆಯುವುದು ಯೋಗದ ಪ್ರಾಥಮಿಕ ಗುರಿಯಾಗಿದೆ ಎಂದು ಹೇಳಬಹುದು. ಗೊಂದಲ ಮತ್ತು ತೊಂದರೆಯಿಂದ ಒಬ್ಬರನ್ನು ಮುಕ್ರಗೊಳಿಸಲು ಯೋಗ ಮತ್ತು ವ್ಯಾಯಾಮ ಮತ್ತು ಉಸಿರಾಟದ ನಿಯಂತ್ರಣದ ಅಭ್ಯಾಸದಿಂದ ಬರುವ ಶಾಂತತೆಯ ಭಾವವನ್ನು ಒದಗಿಸುವುದು.
ಯೋಗದ ಅಭ್ಯಾಸವು ನಿಮ್ಮೊಳಗೆ ಆಶಾವಾದವನ್ನು ಸ್ಥಾಪಿಸುತ್ತದೆ. ಪರಿಪೂರ್ಣ ಆರೋಗ್ಯ, ಆಧ್ಯಾತ್ಮಿಕ ನೆಮ್ಮದಿ ಮತ್ತು ಒಟ್ಟು ಯೋಗಕ್ಷೇಮದ ಹಾದಿಯಲ್ಲಿರುವಾಗ ಉತ್ತಮವಾಗಿ ಗಮನಹರಿಸಲು ಮತ್ತು ನಿಮ್ಮ ದಾರಿಯಲ್ಲಿನ ಯಾವುದೇ ಅಡೆತಡೆಗಳನ್ನು ನಿವಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಅಷ್ಟಾಂಗ ಯೋಗದ ಎಳನೆಯ ಮೆಟ್ಟಿಲಾದ ಧ್ಯಾನದ ಬಗ್ಗೆಯ ಮಹತ್ವವನ್ನು ತಿಳಿಸಿದರು. ಪ್ರತಿ ತಿಂಗಳು ರಾಮಕೃಷ್ಣ ಮಠದಲ್ಲಿ ಎರಡು ವಾರಗಳ ಯೋಗ ತರಬೇತಿ ಶಿಬಿರ ನಡೆಯುತ್ತದೆ. ಈ ಸಂದರ್ಭದಲ್ಲಿ ಯೋಗ ತರಬೇತಿ ಶಿಬಿರದಲ್ಲಿ ಶ್ರೀ ದೇಲಂಪಾಡಿಯವರು ತಿಳಿಸಿಕೊಟ್ಟ ಧ್ಯಾನವನ್ನು ಮನೆಯಲ್ಲಿ ನಿತ್ಯ ಅಭ್ಯಾಸ ಮಾಡಿ ಎಂದು ತಿಳಿಸಿದರು.
ಯೋಗ ತರಬೇತಿ ನೀಡಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಮಠದ ಸ್ವಾಮಿಜಿ ಹಾಗೂ ಶಿಬಿರಾರ್ಥಿಗಳು ಗೌರವಿಸಿದರು. ಶಿಬಿರಕ್ಕೆ ಸಹಕರಿಸಿ ಶ್ರೀ ದೇಲಂಪಾಡಿ ಶಿಷ್ಯರಾದ ಸುಮ ಹಾಗೂ ಕಾರ್ತಿಕ್ ಇವರಿಗೆ ಕೃತಜ್ಞತೆ ತಿಳಿಸಿದರು. ಸುಮಾರು 60ಕ್ಕೂ ಮಿಕ್ಕಿ ಮಂದಿ ಶಿಬಿರದಲ್ಲಿ ಹೆಸರುಗಳನ್ನು ನೊಂದಾಯಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ