ಮನೆಯ ಸುತ್ತಲೂ ಮರವಿದ್ದರೆ ಎಷ್ಟೊಂದು ಸುಂದರ, ಮನಸ್ಸಿಗೆ ನೆಮ್ಮದಿಯು ಅಪಾರ. ಈಗಿನ ಕಾಲದಲ್ಲಿ ಮರ ಕಡಿದು, ಕಟ್ಟಡಗಳ ನಿರ್ಮಾಣವಾಗುತ್ತಿದೆ. ಹಿಂದಿನ ಕಾಲದಲ್ಲಿ ಗಾದೆಯಿತ್ತು "ಕಾಡು ಬೆಳೆಸಿ, ನಾಡು ಉಳಿಸಿ"ಯೆಂದು. ಆದರೆ, ಇಂದು ನಾಡನ್ನು ವಿಸ್ತರಿಸಲು ಕಾಡನ್ನು ಕಡಿಯುತ್ತಿದ್ದಾರೆ.
ದಿನವೂ ಕಳೆಯುತ್ತಿದ್ದಂತೆ, ಮರಗಳ ಸಂಖ್ಯೆಯು ಕ್ಷೀಣಿಸುತ್ತಿದೆ. ಪ್ರತಿಯೊಬ್ಬ ಮನುಷ್ಯನಿಗೂ ಉಸಿರಾಡಲು ಆಮ್ಲಜನಕವು ಅವಶ್ಯಕ. ಇಂದಿನ ಕಾಲದಲ್ಲಿ, ಮರವೂ ಅಲ್ಲೊಂದು, ಇಲ್ಲೊಂದು ಕಾಣಸಿಗುತ್ತವೆ. ಇನ್ನೂ ಮುಂದಕ್ಕೆ, ಮರವೆಂದರೆ ಏನು ಎಂಬ ಕಾಲ ಬರಬಹುದು.
ವಿಶ್ವ ಪರಿಸರ ದಿನದಂದು ಗಿಡ ನೆಟ್ಟು ನಂತರ, ಗಿಡಕ್ಕೆ ನೀರು ಹಾಕದೇ ಹೋದರೆ ಗಿಡ ಬೆಳೆಯದು. ಗಿಡವನ್ನು ಮಗುವಿನಂತೆ ಲಾಲನೆ- ಪೋಷಣೆ ಮಾಡಿದರೆ, ಗಿಡವು ಬೆಳೆದು ಮರವಾಗಿ ಗಾಳಿ ನೀಡುತ್ತದೆ.
ಗಿಡ ನೆಟ್ಟರೆ ಉಪಯೋಗವೇ ಹೊರತು, ದುರುಪಯೋಗವಿಲ್ಲ. ದಣಿದರೆ ನೆರಳು ನೀಡುವುದು, ಹಸಿದರೆ ಹಣ್ಣನ್ನು ನೀಡುವುದು, ದೇವರ ಪೂಜೆಗೆ ಪುಷ್ಪವೂ ನೀಡುವುದು. ಎಲ್ಲಾ ಬಗೆಯಲ್ಲೂ ಮರದ ಅವಶ್ಯಕತೆ ಅಗಾಧ. ಗಿಡ ನೆಡಿ ಆದರೆ, ಮರವನ್ನು ಕಡಿಯಬೇಡಿ. ಮರವಿಲ್ಲದಿದ್ದರೆ, ಮುಂದೊಂದು ದಿನ, ಮನುಷ್ಯ ಬದುಕುವುದು ಕಷ್ಟವಾಗಬಹುದು.
ಗಿಡ ನೆಡು,
ನೀರು ಹಾಕಿ,
ಫಲವ ಬೇಡು.
ಮರವ ಸುಟ್ಟು,
ಕಡಿದು ಹಾಕಿ,
ಗಾಳಿಗಾಗಿ ಬೇಡದಿರು
ಮಾನವ.
- ಸುಚಿರಾ.ಪಿ.ಶೆಟ್ಟಿ
ಪೂರ್ಣಪ್ರಜ್ಞ ಕಾಲೇಜು,
ಪಿ.ಜಿ. ಸೆಂಟರ್ ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ