ಫೆ 20-21: ಸುರ್ವೆ ಕಲ್ಚರಲ್‍ ಅಕಾಡೆಮಿಯಿಂದ ಮಲೆನಾಡು ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಉತ್ಸವ

Upayuktha
0

ಶಿವಮೊಗ್ಗ : ಸುರ್ವೆಕಲ್ಚರಲ್‍ ಅಕಾಡೆಮಿ (ರಿ) ತನ್ನ 30ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಮಲೆನಾಡು ಕರ್ನಾಟಕ ಪ್ರಾದೇಶಿಕ ರಾಜ್ಯಮಟ್ಟದ ಕಲಾ ಉತ್ಸವವನ್ನು ಶಿವಮೊಗ್ಗದ ಬಿ.ಹೆಚ್.ರಸ್ತೆಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ಫೆ.20, 21ರಂದು  ಏರ್ಪಡಿಸಿದೆ.  


ಸಂಸ್ಥೆ ತನ್ನ 31 ವರ್ಷಗಳ ದಾಖಲೆಯ ಹೆಜ್ಜೆಗಳನ್ನು, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಇಟ್ಟಿದೆ. ನಿರಂತರವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಆಂದೋಲನವನ್ನೆ ರಾಜ್ಯದಲ್ಲಿ ಮಾಡಿದೆ. ರಾಷ್ಟ್ರಮಟ್ಟದಲ್ಲು ಪ್ರತಿಭೆಗಳನ್ನು ಗುರುತಿಸಿದೆ. ಸಂಸ್ಥೆಯ ನಿರಂತರವಾದ ಸಾಂಸ್ಕೃತಿಕ ಪಯಣದಲ್ಲಿ, 65 ಸಾಂಸ್ಕೃತಿಕ ಸಮ್ಮೇಳನಗಳ ಮೂಲಕ, ನಾಡಿನ ಮೂಲೆಮೂಲೆಗಳಲ್ಲಿರುವ 1 ಲಕ್ಷ ಪ್ರತಿಭೆಗಳನ್ನು ಮತ್ತು ಸಾಧಕರನ್ನು ಗುರುತಿಸಿ, ವೇದಿಕೆ ನೀಡಿ ರಾಜಧಾನಿಯಲ್ಲಿ ಗೌರವಿಸಿದೆ.   20-02-2023 ಬೆಳಿಗ್ಗೆ 9.30ಕ್ಕೆ ಉದ್ಘಾಟನೆಯಲ್ಲಿ ಬೆಳಗಾವಿ ಜಿಲ್ಲೆ ಹಿರೇಮಠದ ಡಾ. ಕಲ್ಮೇಶ್ವರ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದಾರೆ. ಪತ್ರಕರ್ತ ಬಿ. ಗಣಪತಿರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿಯ ಶ್ರೀದುರ್ಗ ಆದಿಶಕ್ತಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀರಮಾನಂದ ಗುರೂಜಿ ಇರಲಿದ್ದಾರೆ.


ನಂತರ ಕೊಪ್ಪಳ ಜಿಲ್ಲೆಯ ವ್ಯಂಗ್ಯ ಚಿತ್ರ ಕಲಾವಿದ ಬದರಿ ನಾರಾಯಣ ಪುರೋಹಿತ್ರವರ ವ್ಯಂಗ್ಯ ಚಿತ್ರ ಪ್ರದರ್ಶನ ಮತ್ತು ಬೆಂಗಳೂರಿನ ಹವ್ಯಾಸಿ ಛಾಯಾಗ್ರಾಹಕ ಸುಹಾಸ್ಸುರ್ವೆರವರ ಅಪರೂಪ ಛಾಯಾಚಿತ್ರ ಪ್ರದರ್ಶನ ಎರಡು ದಿನಗಳ ಕಾಲ ನಡೆಯಲಿದೆ.


ಬೆಳಿಗ್ಗೆ 10 ಗಂಟೆಗೆ ರಾಮಚಂದ್ರ ದೇವ ರಚನೆ, ಎಂ.ಎನ್. ಸುರೇಶ ನಿರ್ದೇಶನದಲ್ಲಿ ಸಾಫಲ್ಯರಂಗ ತಂಡ, ಬೆಂಗಳೂರು ಕಲಾವಿದರಿಂದ ಕುದುರೆಬಂತುಕುದುರೆ ನಾಟಕ ಪ್ರದರ್ಶನ.


ಕರ್ನಾಟಕದ ಆರ್ಯಭಟ ಬಸವರಾಜ್ಉ ಮರಾಣಿಯವರೊಂದಿಗೆ ಸಂವಾದದ ಜೊತೆಯಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಸಾಹಿತಿ ಗೊರೂರು ಅನಂತರಾಜು, ಶಿವಮೊಗ್ಗ ಜಿಲ್ಲೆಯ ಸಾಹಿತಿ ಎಂ. ಸತ್ಯನಾರಾಯಣ, ಚಿಕ್ಕಮಗಳೂರು ಜಿಲ್ಲೆಯ ಲೇಖಕಿ ಡಿ. ನಳಿನಿ, ಹಾಸನ ಜಿಲ್ಲೆಯ ಪತ್ರಕರ್ತೆ ಗೊರೂರು ಪಂಕಜಾ ವಿಷಯ ಮಂಡಿಸಲಿದ್ದಾರೆ.


ಮದ್ಯಾಹ್ನ 3 ಗಂಟೆಯ ನಂತರ ವಿವಿಧ ಜಿಲ್ಲೆಯ ಕವಿಗಳಿಂದ “ಕವಿಗಳಿಂದ ಕಣ್ಣಲ್ಲಿ ಮಲೆನಾಡು ಕರ್ನಾಟಕ” ಕವನ ವಾಚಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ನೃತ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.


ಸಂಜೆ 7.00 ಗಂಟೆಗೆ ಪೂರ್ಣಚಂದ್ರ ತೇಜಸ್ವಿ ರಚನೆ ಮತ್ತು ಚಲನಚಿತ್ರ ನಟ ಎಂ.ಎನ್. ಸುರೇಶ ನಿರ್ದೇಶನದಲ್ಲಿ ಸಾಫಲ್ಯ ರಂಗ ತಂಡದಿಂದ ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನ ನಡೆಯಲಿದೆ.


21ರ ಮಂಗಳವಾರ   ಬೆಳಿಗ್ಗೆ 9.30 ರಿಂದ ವಿವಿಧ ಜಿಲ್ಲೆಯ ಕಲಾವಿದರು, ನೃತ್ಯಪಟುಗಳು, ಗಾಯಕರು, ಚಿತ್ರಕಲಾ ಪ್ರದರ್ಶಕರಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

 

ಹಾವೇರಿ ಮತ್ತು ಧಾರವಾಡ ಜಿಲ್ಲೆಯ 5 ಗಾಯಕರಿಂದ ಸುಗಮ ಸಂಗೀತ ಕಾರ್ಯಕ್ರಮ, ಕೊಪ್ಪಳ ಶಿವಮೊಗ್ಗ 4 ಗಾಯಕರಿಂದ ತತ್ವಪದ, ಲಂಬಾಣಿ ಮತ್ತು ಜನಪದಗೀತೆಗಳ ಜನಪದ ಝೇಂಕಾರ.  ವಿಶೇಷ ಬಹುಮುಖ ಪ್ರತಿಭೆಗಳಿಂದ ಜ್ಞಾಪಕಶಕ್ತಿ, ಪುಠಾಣಿಗಳ ಭಾಷಣ, ಮಲೆನಾಡು ಪ್ರತಿಭೆಗಳ ಯಕ್ಷನೃತ್ಯ, ಚಲನಚಿತ್ರ ನೃತ್ಯ ಪ್ರದರ್ಶನ ಮತ್ತು ಹಿಂದುಸ್ಥಾನಿ ಗಾಯನ ಕನ್ನಡಕೋಗಿಲೆ ಖ್ಯಾತಿ ಅರ್ಜುನ್ಇಟಗಿ ಗಾನಸುಧೆ   ಸಂಜೆ 5 ಕ್ಕೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕುರಿತು “ಮಲೆನಾಡು ಕರ್ನಾಟಕ ಪ್ರಾದೇಶಿಕ ಅಸಮತೋಲನ” ಕುರಿತು ವಿಚಾರ ಸಂಕಿರಣದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರಾಜ್ ಅಧ್ಯಕ್ಷತೆ ಹಾಸನ ಜಿಲ್ಲೆ ಕುರಿತು ಪತ್ರಕರ್ತ ಉದಯ ರವಿ, ಚಿಕ್ಕಮಗಳೂರು ಜಿಲ್ಲೆ ಕುರಿತು ಮಂಜುನಾಥ ಬೆಳವಾಡಿ, ಶಿವಮೊಗ್ಗ ಜಿಲ್ಲೆ ಕುರಿತು ಸತ್ಯನಾರಾಯಣ, ಸಮಗ್ರ ಮಲೆನಾಡು ಕರ್ನಾಟಕ ಕುರಿತು ಉಪನ್ಯಾಸಕಿ ಶುಭಾಮರವಂತೆ ವಿಷಯ ಮಂಡಿಸಲಿದ್ದಾರೆ. ಮಲೆನಾಡು ಕರ್ನಾಟಕದ ಪರಿಕಲ್ಪನೆ ಮತ್ತು ಆಶಯ ನುಡಿಯನ್ನು ಪತ್ರಕರ್ತ ರಮೇಶ ಸುರ್ವೆ ಅವರದು.

  

ಅತಿಥಿಗಳಾಗಿ ದಾವಣಗೆರೆ ಜಿಲ್ಲೆಯ ವಿರಕ್ತಮಠ ಶ್ರೀಗುರು ಬಸವ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿಲಿದ್ದು, ಹಿರೇಮಠದ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಲಿದ್ದಾರೆ.  ಮಾಜಿ ಸಚಿವ ಶ್ರೀಕಿಮ್ಮನೆ ರತ್ನಾಕರ್ ವಿಚಾರಸಂಕಿರಣದ ಉದ್ಘಾಟನೆ ಮಾಡಲಿದ್ದು, ಯಾದಗಿರಿಯ ಜಿಲ್ಲೆಯ ಸಾಹಿತಿ ಸಿದ್ಧರಾಮ ಹೊನ್ಕಲ್ ಅಧ್ಯಕ್ಷತೆ ವಹಿಸಿಲಿದ್ದಾರೆ.

  

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ. ನೆ.ಲ. ನರೇಂದ್ರಬಾಬು, ಚಲನಚಿತ್ರ ಕಲಾವಿದರಾದ ಗಣೇಶರಾವ್ಕೇಸರ್ಕರ್, ಎಂ.ಎನ್. ಸುರೇಶ್, ಶ್ರೀಮತಿ ಮೀನಾ, ಶಿವಮೊಗ್ಗದ ಪ್ರಗತಿಪರ ಉದ್ಯಮಿ ಪ್ರಕಾಶ್ಜಿ.ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

 

ಈ ಸಂದರ್ಭದಲ್ಲಿ ಬೆಳಗಾವಿಯ ಶಾಂತಲಾ ಉದೋಷಿ, ಬೀದರಿನ ಸವಿತಾ ಘೋರ್ಪಡೆ ನೃತ್ಯ ಪ್ರದರ್ಶನ ಇರುತ್ತದೆ. 

 

ಹಾಸನ ಜಿಲ್ಲೆಯ ಚಿತ್ರ ಕಲಾವಿದ ಗೊರೂರು ಯಾಕೂಬ್‍ಖಾನ್‍ ಅವರ ಏಕ ವ್ಯಕ್ತಿ ಚಿತ್ರ ಪ್ರದರ್ಶನವಿದೆ. ಹಾಸನ ಜಿಲ್ಲೆಯಿಂದ ಶಿಕ್ಷಣ ಕ್ಷೇತ್ರದಿಂದ ಕೆ.ಬಸವರಾಜ್, ರಂಗಭೂಮಿ ಕ್ಷೇತ್ರದಿಂದ ಶಾರದಾ ಕಲಾಸಂಘದ ಗಾಯಕ ಹೆಚ್.ಜಿ.ಗಂಗಾಧರ್,ಕವಿ ಉಡುವೇರೆ ಸುಂದರೇಶ್ ಕವನ ವಾಚಿಸುವರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top