ಕದ್ರಿ ಜಾತ್ರೆಯಲ್ಲಿ ದೇಲಂಪಾಡಿ ಪ್ರತಿಷ್ಠಾನದಿಂದ ಆಕರ್ಷಕ ಯೋಗ ಪ್ರದರ್ಶನ

Upayuktha
0 minute read
0

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಶ್ರಯ ಮತ್ತು ಪ್ರೋತ್ಸಾಹದಿಂದ ಮಲ್ಲಿಕಾ ಕಲಾವೃಂದ ಶ್ರೀಕ್ಷೇತ್ರ ಕದ್ರಿ ಮಂಗಳೂರು ನಡೆಸುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ದೇಲಂಪಾಡಿ ಯೋಗ ಪ್ರತಿಷ್ಠಾನದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ನೂತನ ವೇದಿಕೆಯಲ್ಲಿ ಆಕರ್ಷಕ ಯೋಗ ಪ್ರದರ್ಶನ ಇತ್ತೀಚೆಗೆ ಜರುಗಿತು.

ಸುಮಾರು 30 ವರ್ಷದಿಂದ ಮೇಲ್ಪಟ್ಟು ದೇಲಂಪಾಡಿ ಯೋಗ ಪ್ರತಿಷ್ಠಾನದ ವತಿಯಿಂದ ಯೋಗ ಪ್ರದರ್ಶನ ನಡೆಯುತ್ತಿದೆ. ಕಾರ್ಯಾಧ್ಯಕ್ಷರಾದ ಸುಧಾಕರ ಪೇಜಾವರ ಇವರು ಯೋಗ ಪ್ರದರ್ಶನ ನೀಡಿದ ದೇಲಂಪಾಡಿ ಬಳಗದವರನ್ನು ಗೌರವಿಸಿದರು. ಈ ಯೋಗ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸಂಘಟನೆಯವರಿಗೆ ವಿಶೇಷವಾದ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
To Top