ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ 'ಕರ್ನಾಟಕ ಸಂಗೀತ ಪಿತಾಮಹ' ಶ್ರೀ ಪುರಂದರದಾಸರ ಆರಾಧನೋತ್ಸವವನ್ನು ಏರ್ಪಡಿಸಿದ್ದು, ಕಾರ್ಯಕ್ರಮಗಳ ವಿವರಗಳು ಈ ರೀತಿ ಇವೆ:
ಜನವರಿ 17, ಮಂಗಳವಾರ ಸಂಜೆ 6-30ಕ್ಕೆ: ವಿದುಷಿ ಶ್ರೀಮತಿ ಎಂ.ಎಸ್. ಶೀಲಾ ಮತ್ತು ಸಂಗಡಿಗರಿಂದ "ಸಂಗೀತ ಕಾರ್ಯಕ್ರಮ". ಜನವರಿ 18, ಬುಧವಾರ ಸಂಜೆ 6-30ಕ್ಕೆ: ಶ್ರೀ ಗುಲ್ಬರ್ಗ ಗುರುರಾಜದಾಸ್ ಮತ್ತು ಸಂಗಡಿಗರಿಂದ "ಭಜನಾಮೃತ", ಜನವರಿ 19, ಗುರುವಾರ ಸಂಜೆ 6-30ಕ್ಕೆ: ಶ್ರೀಮತಿ ಲಲಿತಾ ಪದ್ಮನಾಭ ಇವರಿಂದ "ನೃತ್ಯ ರೂಪಕ", ಜನವರಿ 20, ಶುಕ್ರವಾರ ಸಂಜೆ 6-30ಕ್ಕೆ: ಮಲ್ಲೇಶ್ವರದ ಸಪ್ತಗಿರಿ ಭಜನಾ ಮಂಡಳಿಯ ಸದಸ್ಯರಿಂದ "ಭಜನಾಮೃತ" ಮತ್ತು ಜನವರಿ 21, ಶನಿವಾರ ಸಂಜೆ 6-30ಕ್ಕೆ: ಶ್ರೀ ಚಂದ್ರಶೇಖರ್ ಆಚಾರ್ ರವರಿಂದ "ಶ್ರೀ ಪುರಂದರದಾಸರ ಪದಗಳ ವೈಶಿಷ್ಟ್ಯ" ಈ ವಿಷಯವಾಗಿ ಧಾರ್ಮಿಕ ಪ್ರವಚನ. ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ