ಬೆಂಗಳೂರು: ನಾದ ಜ್ಯೋತಿ ಸಂಗೀತ ಸಭಾ ಟ್ರಸ್ಟ್ ಹಾಗೂ ಅನನ್ಯ ಇವುಗಳ ಸಂಯುಕ್ತಾಶ್ರಯದಲ್ಲಿ ಸಂಗೀತ ವಿದ್ವಾನ್ ಮಾಗೇರಿ ಎನ್ ರಾಮಚಂದ್ರ ಸ್ಮರಣಾರ್ಥ ಡಿಸೆಂಬರ್ 24 ಮತ್ತು 25 ರಂದು "ಯುವ ಸಂಭ್ರಮ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಡಿಸೆಂಬರ್-24, ಶನಿವಾರ ಸಂಜೆ 5 ಗಂಟೆಗೆ ಸಂಗೀತ ಕಾರ್ಯಕ್ರಮ. ವಿ|| ನಿರಂಜನ್ ಡಿಂಡೋಡಿ (ಗಾಯನ), ವಿ|| ಶ್ರೀಕಾಂತ್ ರಾಧಾಕೃಷ್ಣ (ಪಿಟೀಲು), ಡಾ|| ರಘು ಭಗವತ್ (ಮೃದಂಗ). 7 ಗಂಟೆಗೆ ಅನನ್ಯ-ನಾದಜ್ಯೋತಿ "ಕಲಾಪ್ರತಿಭೆ" ಪುರಸ್ಕಾರ. ಪುರಸ್ಕೃತರು : ವಿ|| ನಿರಂಜನ್ ಡಿಂಡೋಡಿ ಹಾಗೂ ಡಾ|| ಸುರಭಿ ಗೋಪಾಲ್. ಮುಖ್ಯ ಅತಿಥಿಗಳು : ಶ್ರೀ ಟಿ ಎಸ್ ವೇಣುಗೋಪಾಲ ಶಾಸ್ತ್ರಿ (ಚೀಫ್ ಫೈನಾನ್ಸಿಯಲ್ ಆಫೀಸರ್, ರಾಮಯ್ಯ ಯೂನಿವರ್ಸಿಟಿ ಫೌಂಡರ್).
ಡಾ|| ಸುರಭಿ ಗೋಪಾಲ್ ಅವರ ವೀಣಾವಾದನ:
ಡಿಸೆಂಬರ್-25, ಭಾನುವಾರ ಸಂಜೆ 6 ಗಂಟೆಗೆ ಡಾ|| ಸುರಭಿ ಗೋಪಾಲ್ ಅವರ ವೀಣಾವಾದನ. ವಿ|| ಪವನ್ ಮಾಧವ್ (ಮೃದಂಗ), ವಿ|| ಎನ್. ಫಣೀಂದ್ರ (ಘಟ). ಸಹಕಾರ : ವಿ|| ಪಂಕಜ ರಾಮಚಂದ್ರ ಮತ್ತು ಕುಟುಂಬ.
ಕಾರ್ಯಕ್ರಮ ನಡೆಯುವ ಸ್ಥಳ : ಅನನ್ಯ ಸಭಾಂಗಣ, #91/2, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು
ವೀಣಾ ವಾದನ: ಗುಡಿಬಂಡೆ ಸಂಗೀತ ಶಾಲೆಯ ವತಿಯಿಂದ ಡಿಸೆಂಬರ್ 24 ಶನಿವಾರ ಸಂಜೆ 6-15ಕ್ಕೆ ವಿದುಷಿ ಶ್ರೀಮತಿ ಶುಭಾ ಸಂತೋಷ್ ಇವರಿಂದ ವೀಣಾ ವಾದನ ನಡೆಯಲಿದೆ. ವಾದ್ಯ ಸಹಕಾರ : ವಿ|| ಶ್ರೀ ಸಿ. ಚೆಲುವರಾಜು (ಮೃದಂಗ), ವಿ|| ಶ್ರೀ ಗುರುಮೂರ್ತಿ (ಘಟಂ)
ಸ್ಥಳ : ಕಪ್ಪಣ್ಣ ಅಂಗಳ, #148/1, 32ನೇ 'ಎ' ಮುಖ್ಯರಸ್ತೆ, ಟಿ.ಎಂ.ಸಿ. ಲೇಔಟ್, 1ನೇ ಫೇಸ್, ಜೆ.ಪಿ. ನಗರ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ