ಪೂರ್ಣಪ್ರಜ್ಞ ಕಾಲೇಜಿನ ಬಿ.ಎಸ್ಸಿ. ವಿದ್ಯಾರ್ಥಿಗಳಾದ ಷಹಜಹಾನ್ ಇಕ್ಬಾಲ್, ಚೈತ್ರಿಕಾ ಬಿ.ಎಂ., ಮೊಹಮ್ಮದ್ ಹಾಶಿಮ್ ಮತ್ತು ಚ್ಯವನ್ ಹೆಗಡೆ ಇವರು, ಭಾರತೀಯ ಭೌತಶಾಸ್ತ್ರ ಶಿಕ್ಷಕರ ಸಂಘ - ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಕ್ಸ್ ಟೀಚರ್ಸ್ (IAPT) ಆಯೋಜಿಸಿದ ರಾಷ್ಟ್ರ ಮಟ್ಟದ ಕಂಪ್ಯೂಟೇಶನಲ್ ಫಿಸಿಕ್ಸ್ ಸ್ಪರ್ಧೆ - NCICP 2022 ರಲ್ಲಿ ಭಾಗವಹಿಸಿ, 'ಕಂಪ್ಯೂಟೇಷನಲ್ ಸ್ಟಡಿ ಟೆಂಪರೇಚರ್ ಡೆಪೆಂಡೆನ್ಸ್ ಆಫ್ NQR ಫ್ರಿಕ್ವೆನ್ಸಿ ಅಂಡ್ ಇಂಟರ್ನಲ್ ಮೋಷನ್ಸ್ ಆಫ್ ಕಂಪೌಂಡ್ಸ್ ಇನ್ ಪ್ಲಾಂಟ್ ನ್ಯೂಟ್ರಿಯೆಂಟ್ಸ್ ಕಾನ್ಸಿಟ್ಯುಯೆಂಟ್ ಆಫ್ ಹರ್ಬಿಸೈಡ್' ಎಂಬ ವಿಷಯವನ್ನು, ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಮು ಎಲ್ ಮತ್ತು ಅತುಲ್ ಭಟ್ ಅವರ ಮಾರ್ಗದರ್ಶನದಲ್ಲಿ ತಂಡವು ಪ್ರಸ್ತುತಪಡಿಸಿತ್ತು.
ವಿದ್ಯಾರ್ಥಿಗಳು, ಈ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು. ಡಿಸೆಂಬರ್ 2 ರಿಂದ 4 ರ ವರೆಗೆ ಪಾಟ್ನಾದ ಪಾಟಲಿಪುತ್ರ ವಿಶ್ವವಿದ್ಯಾಲಯದಲ್ಲಿ ನಡೆದ 36 ನೇ ವಾರ್ಷಿಕ IAPT ಸಮಾವೇಶದಲ್ಲಿ, ಷಹಜಹಾನ್ ಇಕ್ಬಾಲ್ ಈ ಪ್ರೊಜೆಕ್ಕನ್ನು ಪ್ರಸ್ತುತಪಡಿಸಿದ್ದು ನಗದು ಬಹುಮಾನ ಪಡೆದಿರುವರು. ಪ್ರಸ್ತುತಿಯ ಸಮಯದಲ್ಲಿ ಹಲವಾರು ಭೌತಶಾಸ್ತ್ರ ಪುಸ್ತಕಗಳ ಖ್ಯಾತ ಲೇಖಕರು ಹಾಗೂ ಐಐಟಿ ಕಾನ್ಪುರದ ವಿಶ್ರಾಂತ ಪ್ರಾಧ್ಯಾಪಕರಾದ ಪದ್ಮಶ್ರೀ ಪ್ರೊ. ಎಚ್.ಸಿ. ವರ್ಮಾ ಇವರು ಪರಿಶೀಲಿಸಿದರು ಹಾಗೂ ವಿದ್ಯಾರ್ಥಿ ಜೊತೆ ಸಂವಾದ ನಡೆಸಿ, ತಂಡದ ಕಾರ್ಯವನ್ನು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿದ್ದಾರೆ.
🗞️📲 ಉಪಾಯುಕ್ತ ನ್ಯೂಸ್ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ