ಡಿ.12: ಮಂತ್ರಾಲಯದಲ್ಲಿ ರಾಷ್ಟ್ರೀಯ ವಿಷ್ಣುಸಹಸ್ರನಾಮ ಸಮ್ಮೇಳನ

Upayuktha
0



ಮಂತ್ರಾಲಯ:  ಡಿ.12 ರಂದು ಮಂತ್ರಾಲಯದಲ್ಲಿ ‘ ರಾಷ್ಟ್ರೀಯ ವಿಷ್ಣುಸಹಸ್ರನಾಮ ಸಮ್ಮೇಳನ ’ ಹಾಗೂ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಪರಮಪೂಜ್ಯ ಶ್ರೀ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯ -  ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್(ರಿ) ವತಿಯಿಂದ ಪೂಜ್ಯ ಶ್ರೀಪಾದರಿಗೆ ‘ಯತಿ ರಾಷ್ಟ್ರ ರತ್ನ’ ಗುರವಂದನಾ ಗೌರವ ಪ್ರಶಸ್ತಿ ಸಮರ್ಪಣೆ, ಸಮ್ಮೇಳನದ ಅಧ್ಯಕ್ಷತೆ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್(ರಿ) ಸಂಸ್ಥಾಪಕ ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅರಳು ಮಲ್ಲಿಗೆರವರು ರಚಿಸಿರುವ ‘ವಿಷ್ಣುಸಹಸ್ರನಾಮದ ಅರ್ಥಗಳು’ ಗ್ರಂಥದ ಐದನೆಯ ಆವೃತ್ತಿ ಲೋಕಾರ್ಪಣೆ.

ಮಂತ್ರಾಲಯ ಮಹಾಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಪವಿತ್ರ ಸನ್ನಿಧಾನದಲ್ಲಿ, 2022ರ ಡಿಸೆಂಬರ್ 12 ಸೋಮವಾರದಂದು ವಿಶ್ವಪ್ರಸಿದ್ಧ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್(ರಿ) ಜಾಗತಿಕ ಸಂಸ್ಥೆಯು ಶ್ರೀಮಠದ ಸಹಯೋಗದಲ್ಲಿ ಏರ್ಪಡಿಸಿರುವ ‘ರಾಷ್ಟ್ರೀಯ ವಿಷ್ಣುಸಹಸ್ರನಾಮ ಸಮ್ಮೇಳನ’ ಹಾಗೂ ರಾಷ್ಟ್ರದ ನಾನಾ ಭಾಗಗಳಿಂದ ಆಗಮಿಸಲಿರುವ ಭಕ್ತವೃಂದದಿಂದ ರಾಯರ ಬೃಂದಾವನ ಪ್ರಾಕಾರದ ಪ್ರದಕ್ಷಿಣಾ ಪಥದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.  ಪರಮಪೂಜ್ಯ ಶ್ರೀ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ದಿವ್ಯ  ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮಂತ್ರಾಲಯದ ಭವ್ಯ ರಾಜಾಂಗಣದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ವಿಶ್ವಪ್ರಸಿದ್ಧ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್(ರಿ) ವತಿಯಿಂದ ಯತಿಕುಲ ಚಕ್ರವರ್ತಿಗಳು, ಆಧುನಿಕ ಮಹಾದ್ಭುತ ಮಂತ್ರಾಲಯದ ನವ ನಿರ್ಮಾಪಕರು, ಸಮಸ್ತ ಹಿಂದೂ ಸಮಾಜದ ಹೃದಯ ಸಾಮ್ರಾಟರು, ಶಾಸ್ತ್ರ ಪ್ರಪಂಚದ ಮೇರು ವಿದ್ವಾಂಸರು, ದಾಸ ಸಾಹಿತ್ಯ ಹಾಗೂ ರಾಘವೇಂದ್ರ ಭಕ್ತಿ ಪ್ರಸರಣ ದೀಕ್ಷಾದಕ್ಷರು, ಬ್ರಹ್ಮತೇಜದ ಧೀಮಂತರು, ಹೃದಯ ಶ್ರೀಮಂತರು, ಮೂಲರಾಮಚಂದ್ರದೇವರ ನಿತ್ಯಾರಾಧಕರು, ಸನಾತನ ಧರ್ಮದ ಸಮರ್ಥ ಸಂರಕ್ಷಕರು, ಬ್ರಹ್ಮಭಾಸ್ಕರರು, ಶತಮಾನ ಸಂತರು, ಯುಗಪುರುಷ ಮಹಾಸ್ವಾಮಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಶ್ರೀ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರಿಗೆ ಅತ್ಯಂತ ಶ್ರದ್ಧಾ ಭಕ್ತಿ ಗೌರವಗಳೊಡನೆ ‘ಯತಿ ರಾಷ್ಟ್ರ ರತ್ನ’ ಎಂಬ ಗುರವಂದನಾ ಗೌರವ ಪ್ರಶಸ್ತಿಯನ್ನು ಸಮರ್ಪಿಸಲಾಗುವುದು. 

ಸಮ್ಮೇಳನದ ಅಧ್ಯಕ್ಷತೆಯನ್ನು ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್(ರಿ) ಸಂಸ್ಥಾಪಕ ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ವಹಿಸಲಿದ್ದಾರೆ. ಅರಳುಮಲ್ಲಿಗೆರವರು ರಚಿಸಿರುವ ‘ವಿಷ್ಣುಸಹಸ್ರನಾಮದ ಅರ್ಥಗಳು’ ಗ್ರಂಥದ ಐದನೆಯ ಆವೃತ್ತಿಯನ್ನು ಪೂಜ್ಯ ಶ್ರೀಗಳವರು ಲೋಕಾರ್ಪಣೆಗೊಳಿಸಲಿದ್ದಾರೆ. 

ಇದೇ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮ ಪ್ರಸಾರಕ್ಕಾಗಿ ದಶಕಗಳ ಕಾಲ ಸೇವೆ ಸಲ್ಲಿಸುತ್ತಿರುವ ರಾಷ್ಟ್ರದ ನಾನಾ ಭಾಗದ ಗಣ್ಯರಿಗೆ ಅಭಿನಂದನಾ ಸತ್ಕಾರ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್(ರಿ) ಅಧ್ಯಕ್ಷ  ಕ್ಯಾಪ್ಟನ್ ಮಣಿ, ಕಾರ್ಯದರ್ಶಿ ಭಾನುಪ್ರಕಾಶ್ ಹಾಗೂ ನಿರ್ದೇಶಕಿ ಮಂಗಳಭಾಸ್ಕರ್ ಮೊದಲಾದವರು ಭಾಗವಹಿಸಲಿದ್ದಾರೆ  ಎಂದು ಆಯೋಜಕರು ತಿಳಿಸಿದ್ದಾರೆ.

ಐವತ್ನಾಲ್ಕು ಗ್ರಂಥಗಳು ಹಾಗೂ ನಲವತ್ತು ಧ್ವನಿ ಮುದ್ರಿಕೆಗಳು, ನಾಲ್ಕು ಸಹಸ್ರಕ್ಕೂ ಹೆಚ್ಚು ದೇಶವಿದೇಶಗಳಲ್ಲಿ ಮಾಡಿರುವ ಅಪೂರ್ವ ಪ್ರವಚನಗಳಿಂದಾಗಿ ವಿಶ್ವವಿಖ್ಯಾತರಾಗಿರುವ ಅರಳುಮಲ್ಲಿಗೆ ಪಾರ್ಥಸಾರಥಿಯವರು ಜಗತ್ತಿನ ನಾನಾ ರಾಷ್ಟ್ರಗಳ ಗಣ್ಯಾತಿಗಣ್ಯರಿಂದ ಹಾಗೂ ಪ್ರತಿಷ್ಠಿತ ಸಂಘಸಂಸ್ಥೆಗಳಿಂದ ವಿಶೇಷ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ನಂತಹ ಅಂತರರಾಷ್ಟ್ರೀಯ ಮಹತ್ವದ ಸಂಸ್ಥೆಯ ಸಂಸ್ಥಾಪಕರಾಗಿ, ದಾಸಸಾಹಿತ್ಯ ಹಾಗೂ ವಿಷ್ಣುಸಹಸ್ರನಾಮಗಳ ಬೃಹತ್ ಸಂಚಲನವನ್ನು ವಿಶ್ವಮಟ್ಟದಲ್ಲಿ ಶ್ರೀಯುತರು ಮೂಡಿಸುತ್ತ ಆಧ್ಯಾತ್ಮಿಕ ಆಂದೋಲನದ ಪ್ರಮುಖ ಮಾರ್ಗದರ್ಶಕರಾಗಿದ್ದಾರೆ.  ವಿವರಗಳಿಗೆ : 98867 80215 

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top