ಮಹಿಳೆಯರ ಉತ್ತಮ ಆರೋಗ್ಯಕ್ಕೆ ಸೂಕ್ತ ಸಲಹೆ, ಸಮಾಲೋಚನೆ ಅಗತ್ಯ: ಡಾ|| ಶಶಿಧರ್ಮ

Upayuktha
0


ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಶ್ರೀ ಕೆಂಪಮ್ಮದೇವಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ 'ನಮ್ಮ ಆರೋಗ್ಯ ಕೇಂದ್ರ ಉದ್ಘಾಟನೆ ಮತ್ತು ಬಹಿರಂಗ ಸಭೆ' ಉದ್ದೇಶಿಸಿ ಕಾಂಗ್ರೆಸ್‌ ಮುಖಂಡ ಹಾಗೂ ಜನಸ್ಪಂದನಾ ಟ್ರಸ್ಟ್‌ ಅಧ್ಯಕ್ಷ ಡಾ|| ಶಶಿಧರ್ಮ ಮಾತನಾಡಿ, ಇಂದು ಶೇ. 98ರಷ್ಟು ಹೆಣ್ಣುಮಕ್ಕಳು ಮನೆಯ ಒಳಗೆ ಮತ್ತು ಹೊರಗೂ ದುಡಿಯುತ್ತಿದ್ದಾರೆ. ಆದರೆ ಅವರ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆಯಾ ಎಂದು ನಾವು ಯೋಚಿಸಬೇಕಾಗಿದೆ. 

ಇಂದು ನಾನು ಹೆಣ್ಣುಮಕ್ಕಳಲ್ಲಿ ಒಂದು ಕನಸು ತುಂಬಲು ಬಂದಿದ್ದೇನೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬೆಳೆದು ಮುಂದೆ ಬರಬೇಕಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ಹಾಗೆ ಹೆಣ್ಣು ಗಂಡು ಇಬ್ಬರೂ ಸಮಾನರು. ವೈಜ್ಞಾನಿಕವಾಗಿ ಇಷ್ಟೊಂದು ಬೆಳವಣಿಗೆ ಆಗಿರುವ ಸಂದರ್ಭದಲ್ಲಿಯೂ ಇಂದು ಮಹಿಳೆಯರ ಅದರಲ್ಲೂ ಗ್ರಾಮಾಂತರ ಹೆಣ್ಣುಮಕ್ಕಳ ಶೋಷಣೆ ನಿಂತಿಲ್ಲ ಎಂದು ತಿಳಿಸಿದರು.

ಮನೆಯಲ್ಲಿ ಒಬ್ಬ ಹೆಣ್ಣುಮಗಳು ಋತುಮತಿಯಾದರೆ ಅವಳಿಗೆ ಸೂಕ್ತವಾದ ಸಮಾಲೋಚನೆ ಸಿಗುತ್ತಿಲ್ಲ. ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಉಪಯೋಗಿಸಿವುದು ತಿಳಿದಿರುವುದಿಲ್ಲ. ಅವರಿಗೆ ನೀಡಬೇಕಾದ ಸಲಹೆ ಸೂಚನೆ ಸರಿಯಾಗಿ ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರೆ ಹಿಂಜರಿಕೆ ಹೋಗುತ್ತದೆ. ಟ್ವಿಟರ್‍‌ನಲ್ಲಿ ಹ್ಯಾಪಿ ಟು ಬ್ಲೀಡ್ ಎನ್ನುವ ಹ್ಯಾಷ್‌ ಟ್ಯಾಗ್‌ ಕೋಟ್ಯಾಂತರ ಟ್ವೀಟ್‌ ಆಗಿತ್ತು. ಆದರೆ ಅದನ್ನು ಬೆಂಬಲಿಸಿದ ನನಗೆ ವ್ಯಂಗ್ಯ, ಮೂದಲಿಕೆ ಮಾಡಿದರು. ಪ್ರತಿ ಮನೆಯಲ್ಲಿಯೂ ಹೆಣ್ಣುಮಕ್ಕಳ ಈ ಕಷ್ಟ ಅವರ ತಂದೆ-ಗಂಡ-ಅಣ್ಣಂದಿರಿಗೆ ತಿಳಿದು ಅವರಿಗೆ ಸಿಗಬೇಕಾದ ಗೌರವ, ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಡಾ.ಹೇಮಾ ದಿವಾಕರ್, ಹಾಲ್ಕುರಿಕೆ ಗ್ರಾಪಂ ಅಧ್ಯಕ್ಷೆ ಉಮಾ ಮಹೇಶ್‌, ಮಾಜಿ ಜಿಪಂ ಸದಸ್ಯರಾದ ತ್ರಿಯಂಬಕ, ಮಮತಾ, ತಾಪಂ ಮಾಜಿ ಅಧ್ಯಕ್ಷ ಪರಮ ಶಿವಯ್ಯ, ಮಹಿಳಾ ಮುಖಂಡರಾದ ಪುಷ್ಟ, ಭವ್ಯ, ಶಿವಮ್ಮ, ಮಮತ, ಸುಶೀಲಮ್ಮ, ಗೀತ, ನೇತ್ರಾವತಿ ಮತ್ತು ಸುಮಲತಾ ಹಾಗೂ ಸ್ಟಾಂಟಜಿಸ್ಟ್‌ ಎಂ.ಜೆ.ಶ್ರೀಕಾಂತ್‌ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top