ಉಜಿರೆ: ಶ್ರೀ ಧ. ಮಂ ಕಾಲೇಜಿನ ಮಹಿಳಾ ದೂರು ನಿವಾರಣಾ ಮತ್ತು ಆಂತರಿಕ ದೂರು ಸಮಿತಿ ಹಾಗೂ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಲಿಂಗ ಸಮಾನತೆಯ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 20-12-2022ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ಧ. ಮಂ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ ಕೆ.ಆರ್ ರವರು ಮಾತನಾಡಿ, "ಲಿಂಗವು ದೇವರ ಸೃಷ್ಟಿಯಾಗಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸಮಾನತೆ ಎಂಬ ಪದಕ್ಕೆ ಅರ್ಥ ಇಲ್ಲದಂತಾಗಿದೆ. ಪುರುಷರು ಮಾಡುವ ಕಾರ್ಯಗಳನ್ನು ಮನಸ್ಸು ಮಾಡಿದರೆ ಮಹಿಳೆಯರು ಕೂಡ ಮಾಡಬಲ್ಲರು. ಈಗಿನ ಕಾಲದಲ್ಲಿ ಶಿಕ್ಷಿತರಾದ ನಾವು ಲಿಂಗ ಅಸಮಾನತೆಯನ್ನು ತೆಗೆದುಹಾಕಬೇಕು. ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಬೇಕು. ಲೈಂಗಿಕ ಅಸಮಾನತೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ ಸಿಗುತ್ತಿದೆ, ಹಾಗಾಗಿ ಸಮತೋಲನಕ್ಕಾಗಿ ಒಳ್ಳೆಯ ಬದಲಾವಣೆ ಅಗತ್ಯ ಎಂದು ಆಶಿಸುತ್ತಾ, ಲಿಂಗ ಅಸಮಾನತೆಯ ಕಾರಣಗಳು ಮತ್ತು ಪರಿಹಾರಗಳನ್ನು ತಿಳಿಸಿ ಮಹಿಳೆಯರಿಗೆ ಅಗತ್ಯವಾದ ಆರೋಗ್ಯ, ಪೌಷ್ಟಿಕ ಆಹಾರ, ಶಿಕ್ಷಣ, ಜೀವನ ರಕ್ಷಣೆ ನೀತಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಮಹಿಳಾ ದೂರು ನಿವಾರಣಾ ಮತ್ತು ಆಂತರಿಕ ದೂರು ಸಮಿತಿಯ ಅಧ್ಯಕ್ಷರಾದ ಡಾ. ಸವಿತಾ ಕುಮಾರಿ, ಎನ್ಎಸ್ಎಸ್ ನ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್ ಹಾಗೂ ದೀಪಾ ಆರ್. ಪಿ, ಮಹಿಳಾ ದೂರು ನಿವಾರಣಾ ಮತ್ತು ಆಂತರಿಕ ದೂರು ಸಮಿತಿಯ ಸದಸ್ಯರು ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.
ಎನ್ಎನ್ಎಸ್ ನ ಸ್ವಯಂಸೇವಕರಾದ ಅಭಿಷೇಕ್, ವೀಕ್ಷಾ, ನಮಿತಾ, ಸ್ಕಂದ ಪ್ರಾರ್ಥಿಸಿದರು. ಸ್ವಯಂಸೇವಕರಾದ ನೂಪುರ್ ಕಾರ್ಯಕ್ರಮವನ್ನು ನಿರೂಪಿಸಿ, ನಿಕ್ಷೇಪ್ ಸ್ವಾಗತಿಸಿದರು. ಶೃತೇಶ್ ಅತಿಥಿ ಪರಿಚಯ ಮಾಡಿ, ವಾಣಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ