ಅಂಬಿಕಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ ಪದಾಧಿಕಾರಿಗಳ ಆಯ್ಕೆ

Upayuktha
0

ಅಧ್ಯಕ್ಷರಾಗಿ ತೃತೀಯ ಬಿ.ಎ ನಯನಾ, ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ ಭರತ್ ಆಯ್ಕೆ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ತೃತೀಯ ಬಿ.ಎ. ವಿದ್ಯಾರ್ಥಿನಿ ನಯನಾ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿ ಭರತ್ ಆಯ್ಕೆಯಾಗಿದ್ದಾರೆ. ನಯನಾ ಅವರು ವಾಲ್ತಾಜೆ ನಿವಾಸಿಯಾ ಸತ್ಯನಾರಾಯಣ ಬಿ. ಹಾಗೂ ವಿನಯ ದಂಪತಿ ಪುತ್ರಿ. ಅಂತೆಯೇ ಭರತ್ ಅವರು ಪೆರ್ನೆ ನಿವಾಸಿ ಗಂಗಾಧರ್ ಹಾಗೂ ಸುಜಾತ ದಂಪತಿಯ ಪುತ್ರ.


ಪ್ರಥಮ ಬಿ.ಎ. ಪ್ರತಿನಿಧಿಯಾಗಿ ಮೈಸೂರಿನ ವಿಜೇಂದ್ರ ಎಸ್., ಕುಮುದಾ ವಿಜೇಂದ್ರ ಅವರ ಪುತ್ರ ವಿಕ್ರಮ್, ದ್ವಿತೀಯ ಬಿ.ಎ. ಪ್ರತಿನಿಧಿಯಾಗಿ ಪೆರ್ನೆಯ ಬಾಲಕೃಷ್ಣ, ವನಿತಾ ದಂಪತಿ ಪುತ್ರ ನವನೀತ್, ದ್ವಿತೀಯ ಬಿ.ಕಾಂ. ಪ್ರತಿನಿಧಿಯಾಗಿ ವೀರಮಂಗಲದ ಮನೋಹರ ವಿ., ನಾಗವೇಣಿ ಕೆ. ದಂಪತಿಯ ಪುತ್ರಿ ಲೇಖಾ, ತೃತೀಯ ಬಿ.ಎ. ಪ್ರತಿನಿಧಿಯಾಗಿ ಕಿರಿಮಂಜೇಶ್ವರದ ದೇವರಾಜ್ ಆರ್, ರಾಜೇಶ್ವರಿ ದಂಪತಿಯ ಪುತ್ರಿ ಮೇಘಾ ಡಿ. ಮತ್ತು ತೃತೀಯ ಬಿ.ಎಸ್ಸಿ. ಪ್ರತಿನಿಧಿಯಾಗಿ ಪೆರ್ಲ ಸ್ವರ್ಗದ ಬಾಲಚಂದ್ರ ಬಿ.ವಿ., ಪ್ರಿಯಾ ದಂಪತಿ ಪುತ್ರಿ ವರಣ್ಯ ಬಿ. ಆಯ್ಕೆಯಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top