ಮೊನ್ನೆಯಷ್ಟೆ ನಡೆದ ಹಬ್ಬ
ಇಂದು ಬೆಳಗಿನ ದೀವಿಗೆಗೆ
ಕಣ್ಣಾಗಿ ಉದಯಿಸುತ ಬಿಂಬ
ತೋರುವ ನಿತ್ಯ ಪರಿಧಿಗೆ
ಮನವ ಗೆಲ್ಲುವ ಛಲವಿದೊಂದೇ
ಮುಂದೆ ಹಾದಿ ನೂರಿವೆ
ಬದುಕು ಬನ್ನವೆ ಭಿನ್ನವಾಗಿದೆ
ನಿಷ್ಕಳ ಪುಷ್ಟ ಬಂಧುವೆ //
ನಡೆವ ಹಾದಿ ಸವೆಯದೆಂದೂ
ಕಾಲವೇ ಕೂತು ಕೊಂಡು
ಸ್ವಪ್ನದ ತೆರದಿ ಕಂಡು ಕೊಂಡು
ಜಗವನೇ ಹಿಂದಿಕ್ಕಿತು ಇಂದು
ಅನಿಯಮಿತ ಅನಿರೀಕ್ಷಿತ ತಿರುವು
ಬೆಳಕಿನುದ್ದಕೂ ಹೆಜ್ಜೆ ಹಾಕುತ
ಕತ್ತಲ ಭ್ರಮೆ ಹೆಚ್ಚಿಸಿದವು
ನಿತ್ಯ ಮಾತಿನ ನಗೆಯ ಬೆಳಕಲಿ //
ಭಯವೇ ಇರದಂತ ಬದುಕಿಗೆ
ನೂರು ದಾರಿಗಳ ತಿರುವಿದೆ
ನಂದಿ ಹೋಗದಂತ ಬತ್ತಿಯ
ಉತ್ಸಾಹಕೆ ತೈಲವೇ ಸಿದ್ದಿಸಿದೆ
ಧಾರೆ ಧಾರೆ ಪ್ರೀತಿಯೊಸಗೆ
ದಾರಿ ಸೃಷ್ಟಿಗೆ ಎರವಾಗಿದೆ
ಧರೆಯೊಳಿರುವ ಧಾವಂತಕೆ
ದ್ವಂದ್ವ ಭಾವ ಹೆಡೆಯಾಡುತಿದೆ//
✍️ಮಲ್ಲಿಕಾ ಜೆ ರೈ ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


