
ಬೆಂಗಳೂರು: ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ ಕಳೆದ ಹತ್ತು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಪ್ರತಿಷ್ಠಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಕ್ಷರ, ಆರೋಗ್ಯ, ಅಧ್ಯಾತ್ಮ ಕ್ಷೇತ್ರದಲ್ಲಿನ ಸಾಧಕ ಶ್ರೇಷ್ಠರನ್ನು ಗುರುತಿಸಿ ಪಾಂಚಜನ್ಯ ಪುರಸ್ಕಾರ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ.
ಸೆ.10 ಶನಿವಾರ ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರು ಜಯನಗರ 8ನೇ ಬ್ಲಾಕ್ನ ಶ್ರೀ ಜಯರಾಮ ಸೇವಾ ಮಂಡಳಿಯ ಪ್ರೊ.ಜಿ. ವೆಂಕಟಸುಬ್ಬಯ್ಯ ಶತಾಬ್ದಿ ಕಲಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಪೂಜ್ಯ ಸ್ವಾಮಿ ಜಪಾನಂದಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಅಧ್ಯಾತ್ಮ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವ ಖ್ಯಾತ ವಾಗ್ಮಿ, ಚಿಂತಕ, ಹಿರಿಯ ವಿದ್ವಾಂಸರಾದ ಶತಾವಧಾನಿ ಡಾ.ಆರ್.ಗಣೇಶ ಅವರಿಗೆ ಪ್ರಸ್ತುತ ವರ್ಷದ ಪಾಂಚಜನ್ಯ ಪುರಸ್ಕಾರವನ್ನು ನೀಡಿ ಪುರಸ್ಕರಿಸಲಾಗುವುದು.
ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಹಾಗು ಪದ್ಮಶ್ರೀ ಪುರಸ್ಕøತ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಕೆ.ಎಸ್. ಗೋಪಿನಾಥ್ ಪಾಲ್ಗೊಳ್ಳುವರು, ಶ್ರೀ ಜಯರಾಮ ಸೇವಾಮಂಡಲಿಯ ಅಧ್ಯಕ್ಷ ಆರ್.ಎನ್.ಸ್ವಾಮಿ ಮತ್ತು ಕಾರ್ಯದರ್ಶಿ ಎಸ್.ಕೆ.ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ಪಾಂಚಜನ್ಯ ಪ್ರತಿಷ್ಠಾನದ ಸಂಸ್ಥಾಪಕ ಗೌ|| ಕಾರ್ಯದರ್ಶಿ ಮುರಳಿ ಎಸ್.ಕಾಕೋಳು ತಿಳಿಸಿದ್ದಾರೆ.
ಸಾಧಕರ ಗೌರವ ಹೆಚ್ಚಿಸುವ “ಪಾಂಚಜನ್ಯ ಪುರಸ್ಕಾರ”
ಹಳ್ಳಿಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಎನ್ನುವುದು ಮಹಾತ್ಮ ಗಾಂಧೀಜಿ ಕಂಡ ಕನಸು. ಈ ಕನಸು ನನಸಾಗಲು ಸರಕಾರದ ಬದ್ದತೆಯೊಂದೇ ಸಾಲದು. ಪ್ರಜೆಗಳೂ, ಪ್ರಜಾಸಂಸ್ಥೆಗಳೂ ಸರಕಾರದ ಜೊತೆ ಕೈಜೋಡಿಸಿ ದುಡಿದಾಗ ಪುರೋಭಿವೃದ್ದಿಯ ಪಥದಲ್ಲಿ ಗಮನ ಸರಾಗವಾಗುತ್ತದೆ. ಈ ದಿಸೆಯಲ್ಲಿ ಶ್ರಮಿಸುತ್ತಿರುವ ಒಂದು ಮಾದರಿ ಸಂಸ್ಥೆ ಪಾಂಚಜನ್ಯ ಪ್ರತಿಷ್ಠಾನ. ಸಮಾನ ಮನೋಧರ್ಮದ ಗೆಳೆಯರು ಒಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ, ಆರೋಗ್ಯ ಮತ್ತು ಅಧ್ಯಾತ್ಮ ವೆಂಬ ಮಂತ್ರಗಳ ಬುನಾದಿಯ ಮೇಲೆ ಭವ್ಯ ಸಮಾಜ ನಿರ್ಮಾಣದ ದೀಕ್ಷೆ ತೊಟ್ಟು,ಹಲವಾರು ಜನಮುಖಿ ಕಾರ್ಯಗಳನ್ನು ನಡೆಸುತ್ತಿದೆ ನಿಸ್ವಾರ್ಥ ಸಂಘಟನೆ.
ಪ್ರತಿಷ್ಠಾನ ಲೋಕಾರ್ಪಣೆಗೊಂಡಾಗಿನಿಂದ ಪ್ರತಿ ವರ್ಷ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಕ್ಷರ, ಆರೋಗ್ಯ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಅವಿರತ ಸೇವಾ- ಸಾಧನೆಯನ್ನು ಮಾಡುತ್ತಿರುವ ಸಾಧಕೋತ್ತಮರಾದ ಬಿಎಚ್ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗು ಖ್ಯಾತ ಶಿಕ್ಷಣ ತಜ್ಞ ಡಾ|| ಕೆ.ಎಸ್. ಸಮೀರ ಸಿಂಹ, ಜೀವೋ ರಕ್ಷತಿ ರಕ್ಷಿತಃ’ ಮಂತ್ರವನ್ನೇ ತಮ್ಮ ಜೀವನದ ಗುರಿಯಾಗಿಸಿಕೊಂಡು ಜೀವನ್ಮರಣದ ನಡುವೆ ಹೋರಾಡುವ ಕ್ಯಾನ್ಸರ್ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಖ್ಯಾತ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ, ಪದ್ಮಶ್ರೀ ಪುರಸ್ಕøತ ಡಾ. ಕೊಡಗನೂರು ಎಸ್. ಗೋಪಿನಾಥ್, ಮಂತ್ರಾಲಯ ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಕುಲಾಧಿಪತಿಗಳಾದ ಹಿರಿಯ ವಿದ್ವಾಂಸ ವಿದ್ವತ್ ಚಕ್ರವರ್ತಿ ಡಾ.ವಿ.ಆರ್. ಪಂಚಮುಖಿ, ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ನ ಸ್ಥಾಪಕ ಅಧ್ಯಕ್ಷರಾದ ಜಗದ್ವಿಖ್ಯಾತ ವಾಗ್ಮಿ ಡಾ. ಗುರುರಾಜ ಕರಜಗಿ, ಧರ್ಮ- ಸಾಹಿತ್ಯ-ಸಂಸ್ಕøತಿ ಕ್ಷೇತ್ರಜ್ಞ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ, ಜಿಆರ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿ, ಹಿರಿಯ ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ ಹಾಗು ಜನಪರ ಕಾಳಜಿಯುಳ್ಳ ಖ್ಯಾತ ವೈದ್ಯೆ ಡಾ.ವಿಜಯಲಕ್ಷ್ಮಿ ದೇಶಮಾನೆ ರವರುಗಳು ಪಾಂಚಜನ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ವಿದ್ಯಾಭ್ಯಾಸದೊಂದಿಗೆ ಆರೋಗ್ಯದಾಯಕವಾದ ಜೀವನ ಮಾಡಿದಾಗ ಮಾನಸಿಕ ಪರಿಪಕ್ವತೆ ಬಂದು ಸ್ವಸ್ಥ ಸಮಾಜ ರಚನೆ ಆಧ್ಯಾತ್ಮದೆಡೆಗೆ ಕರೆದೊಯ್ಯಬಲ್ಲದು ಎಂಬ ನಂಬಿಕೆಯಿಂದ ಪ್ರತಿಷ್ಠಾನವು ರೂಪಿಸಿರುವ ಯೋಜನೆಗಳೇ ಸಾಕ್ಷಿ, ವ್ಯಕ್ತಿಯ ಆಂತರಿಕ ಮೌಲ್ಯಗಳ ವಿಕಸನಕ್ಕೆ ಆಧ್ಯಾತ್ಮವೇ ಬುನಾದಿ, ಆದರೆ ಕ್ಷಣಿಕವಾದ ಭೋಗ ಲಾಲಸೆಗಳಿಗೆ ಆರ್ಥಿಕ ಅಭಿವೃದ್ಧಿಯೇ ಸೋಪಾನ, ಇವೆರಡರ ನಡುವಿನ ಅಂತರವನ್ನು ತೋರುವುದೇ ಸತ್ಯದ ಬೆಳಕು ಆ ಕಾರ್ಯವನ್ನು ಪಾಂಚಜನ್ಯ ಪ್ರತಿಷ್ಠಾನ ಇಂದು ವಿದ್ವಲ್ಲೋಕದ ವಿಸ್ಮಯ ಬಹುಶ್ರುತ ಪಂಡಿತವರೇಣ್ಯ ಶತಾವಧಾನಿ ಡಾ.ಆರ್.ಗಣೇಶವರಿಗೆ ಈ ಸಾಲಿನ ಪಾಂಚಜನ್ಯ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ– ಅಭಿಮಾನದ ಸಂಗತಿಯಾಗಿದೆ.
ವಿವರಗಳಿಗೆ 98862 42168 / 98450 25750
“ಸಮಾಜಮುಖಿ ಸಾಧನೆಯ ಹಾದಿಯಲ್ಲಿ ಪಾಂಚಜನ್ಯ ಪ್ರತಿಸ್ಠಾನ”.
“ನನಗಾಗಿ ಏನು ಪಡೆದೆ ಎನ್ನುವುದಕ್ಕಿಂತ ಇತರರಿಗಾಗಿ ನಾನೇನು ನೀಡಿದೆ” ಎಂಬುದು ಜೀವನದ ಸಾರ್ಥಕತೆ. ಅಂತೆಯೇ ಸಮಾಜಕ್ಕೆ ಏನಾದರೊಂದು ಅಳಿಲು ಸೇವೆ ಸಲ್ಲಿಸಬೇಕೆಂಬ ಮಹದಾಸೆಯ ಸಮಾನ ಮನಸ್ಕರಿಂದ “ಅಕ್ಷರ, ಆರೋಗ್ಯ, ಅಧ್ಯಾತ್ಮವೆಂಬ” ತತ್ವಗಳ ಆಧಾರವ ಮೇಲೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ಸ್ಥಾಪಿತವಾಗಿರುವÀ “ಪಾಂಚಜನ್ಯ ಪ್ರತಿμÁ್ಠನವು” ತನ್ನದೇ ಆದ ಹಾದಿಯಲ್ಲಿ ನಿಸ್ವಾರ್ಥ ಸೇವೆಯನ್ನು ವಿವಿಧ ಕ್ಷೇತ್ರಗಳಲ್ಲಿ ನೀಡುತ್ತಿದೆ. ಇಂತಹ ಸಂಸ್ಥೆಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಇತರ ಸಮಾಜಸೇವಾದುರೀಣರಿಗೆ ಮಾದರಿಯಾಗಿದೆ.
“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ದೇಶ ಅಭಿವೃದ್ಧಿಯನ್ನು ಕಾಣಲು ದೇಶದ ಸಾಮಾಜಿಕ, ಆರ್ಥಿಕ ಸ್ಥಿತಿಯ ಜೊತೆಗೆ ಶೈಕಣಿಕ ಸ್ಥಿತಿಯು ಉತ್ತಮವಾಗಿರಬೇಕು. ಅದರಂತೆ ಸರ್ಕಾರವು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅನುμÁ್ಠನಗೊಳಿಸಿದೆ. ಹಿಂದಿಗಿಂತಲೂ ಇಂದು ಸರ್ಕಾರಿ ಶಾಲಾ ಕಾಲೇಜುಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಕಾರ್ಯಕ್ರಮಗಳ ಯಶಸ್ಸಿಗೆ ಕೇವಲ ಸರ್ಕಾರದ ಬದ್ಧತೆಯೊಂದೇ ಸಾಲದು ಅದರೊಂದಿಗೆ ಸ್ಥಳೀಯರು, ಸಮುದಾಯ, ಸಾಮಾಜಿಕ ಸ್ವಯಂಸೇವಾ ಸಂಘಗಳು ಕೈಜೋಡಿಸಿದಾಗ ಅಭಿವೃದ್ಧಿಯ ಹಾದಿಯು ಸುಗಮವಾಗುತ್ತದೆ. ಸರ್ಕಾರಿ ಶಾಲೆಗಳು ಸರ್ಕಾರದ ಜೊತೆ ಸ್ವಯಂಸೇವಾ ಸಂಘಗಳ ಸಹಕಾರದೊಂದಿಗೆ ಉತ್ತಮ ಗಾಳಿ ಬೆಳಕು ಹೊಂದಿದ ಆಕರ್ಷಕ ಕಟ್ಟಡಗಳು, ಸುಸಜ್ಜಿತ ಪೀಠೋಪಕರಣಗಳು, ಕಂಪ್ಯೂಟರ್ ತರಬೇತಿ ಕೊಠಡಿಗಳು, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಸಾಮಗ್ರಿಗಳು ಇತ್ಯಾದಿಗಳನ್ನು ಹೊಂದಿ ಉತ್ತಮ ನುರಿತ ವಿಷಯ ಸಂಪನ್ಮೂಲ ಶಿಕ್ಷಕರ ಬೋಧನೆಯೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗುತ್ತಿವೆ. ಕರ್ನಾಟಕಾದ್ಯಂತ ಇಂತಹ ಅನೇಕ ಶಾಲೆಗಳು ಶೈಕ್ಷಣಿಕ ಪ್ರಗತಿ ಸಾಧಿಸಿ ಇತರರಿಗೆ ಮಾದರಿ ಶಾಲೆಗಳಾಗಿವೆ.
ಈ ದಿಸೆಯಲ್ಲಿ “ಪಾಂಚಜನ್ಯ ಪ್ರತಿಷ್ಠಾನವು” ಸರ್ಕಾರದೊಂದಿಗೆ ಕೈಜೋಡಿಸಿ ಕಾಕೋಳು ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಪ್ರಗತಿಗೆ ದಾರಿದೀಪವಾಗಿದೆ. ಅಗತ್ಯ ಭೌತಿಕ ಹಾಗು ಶೈಕ್ಷಣಿಕ ಸಹಕಾರವನ್ನು ಒದಗಿಸಿದೆ. ಈ ಸರ್ಕಾರಿ ಪ್ರೌಡಶಾಲೆಯು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 98ರಷ್ಟು ಫಲಿತಾಂಶ ಸಾಧÀನೆ ಮಾಡಿ ಮಾದರಿ ಶಾಲೆಯಾಗಿದೆ. ಪಾಂಚಜನ್ಯ ಪ್ರತಿಷ್ಠಾನದ ಸದಸ್ಯರು ಶಾಲೆಯ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಸಹಕರಿಸಿದ್ದಾರೆ ಪ್ರೋತ್ಸಾಹಿಸಿದ್ದಾರೆ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಲ್ಯಾಪ್ಟಾಪ್, ಸೋಲಾರ್ ದೀಪಗಳು ಇತ್ಯಾದಿ ಒದಗಿಸಿದ್ದಾರೆ. ಭಾನುವಾರವು ವಿಶೇಷ ತರಗತಿಗಳನ್ನು ನಡೆಸಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಕಾರಣರಾಗಿದ್ದಾರೆ.
ಸಾರಸ್ವತ ಲೋಕದ ಹೆಮ್ಮೆ ಶತಾವಧಾನಿ ಡಾ. ಆರ್. ಗಣೇಶ್
ಡಾ. ಆರ್. ಗಣೇಶ್ ಅವಧಾನ ಕಲೆಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಕಿರಿವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಇವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ಔನ್ನತ್ಯಕ್ಕೇರಿದೆ. ಪುರುಷ ಸರಸ್ವತಿ ಎಂದೇ ಖ್ಯಾತರಾಗಿರುವ ಇವರು ಕನ್ನಡದ, ಭಾರತದ ಸಾರಸ್ವತ ಲೋಕದಲ್ಲಿ ಅತ್ಯಂತ ಪ್ರತಿಭಾಪೂರ್ಣರು ಹಾಗೂ ಕನ್ನಡ ನಾಡಿನ, ಜನರ ಹೆಮ್ಮೆಯ ಆಸ್ತಿ ಎನ್ನುವುದರಲ್ಲಿ ಸಂಶಯವಿಲ್ಲ.
ಯಂತ್ರಶಾಸ್ತ್ರದಲ್ಲಿ ಎಂಜಿನಿಯರಿಂಗ್ ಪದವಿ, ಸ್ನಾತ್ತಕೋತ್ತರ ಪದವಿ, ಲೋಹಶಾಸ್ತ್ರ ಹಾಗೂ ವಸ್ತುವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ ಮತ್ತು ಸಂಸ್ಕೃತದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪಡೆದು ವೃತ್ತಿಯಿಂದ ಅಧ್ಯಾಪಕರಾಗಿದ್ದ ಇವರು ಅದೃಷ್ಟವಶಾತ್ ಅವಧಾನ ಕಲೆಯತ್ತ ತಮ್ಮ ಪೂರ್ಣ ಗಮನವನ್ನು ನೀಡಿ ಅದರ ಅಭ್ಯಾಸ ಕೈಗೊಂಡದ್ದು ಕನ್ನಡಿಗರ ಸುದೈವ. “ಕನ್ನಡದಲ್ಲಿ ಅವಧಾನ ಕಲೆ” ಎನ್ನುವ ಅವರ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ.
ಶ್ರೀಯುತರು ಕನ್ನಡ, ತೆಲುಗು, ತಮಿಳು ಹಾಗೂ ಸಂಸ್ಕೃತ ಭಾಷೆಗಳಲ್ಲಿ ಸಹಸ್ರಾರು ಅಷ್ಠಾವಧಾನಗಳು ಹಾಗೂ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕಾವ್ಯಮೀಮಾಂಸೆ, ಛಂದಶ್ಯಾಸ್ತ್ರ, ವೇದೋಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರ, ಹಾಗೂ ಲಲಿತ ಕಲೆಗಳಾದ ಸಂಗೀತ, ನೃತ್ಯ, ಚಿತ್ರಕಲೆ ಹಲವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದಾರೆ. ಸ್ವತಃ ಉತ್ತಮ ಕವಿಯೂ, ಉಪನ್ಯಾಸಕರೂ, ಚಿಂತಕರೂ ಆಗಿ ಸಂಸ್ಕೃತ ಮತ್ತು ಕನ್ನಡದಲ್ಲಿ ಹಲವಾರು ನಾಟಕಗಳನ್ನೂ, ಕಾವ್ಯಗಳನ್ನೂ, ಕಾದಂಬರಿಗಳನ್ನೂ ರಚಿಸಿರುವ ಇವರು, ಪ್ರಸಿದ್ಧ ಕೃತಿಗಳ ಅನುವಾದಗಳನ್ನೂ ಮಾಡಿದ್ದಾರೆ. ಅತ್ಯಂತ ಆಕರ್ಷಕವಾದ ವಾಕ್ಚಾತುರ್ಯವನ್ನು ಹೊಂದಿರುವ ಡಾ. ಗಣೇಶ್ ಅವರ ಪಾಂಡಿತ್ಯಪೂರ್ಣ ಉಪನ್ಯಾಸಗಳು ಮತ್ತು ಬರಹಗಳು ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತವೆ.
ಪ್ರತಿಷ್ಠಿತ ಅನೇಕ ಪ್ರಶಸ್ತಿ ಹಾಗೂ ಬಿರುದುಗಳನ್ನು ಪಡೆದಿರುವ ಇವರು ತಮ್ಮ ಅಮೋಘ ಪಾಂಡಿತ್ಯ, ಅಸಾಧಾರಣ ಚಾತುರ್ಯ, ಸರಳತೆ, ನಿಷ್ಕಪಟತೆ ಹಾಗೂ ಸ್ನೇಹಮಹಿಯಾಗಿ ಪಂಡಿತ-ಪಾಮರ ವರ್ಗಗಳೆರಡರಲ್ಲಿಯೂ, ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ