|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಗಲ್ಪಾಡಿ ದೇವಸ್ಥಾನದಲ್ಲಿ ಧಾರ್ಮಿಕ ಚಿಂತನಾ ಸತ್ರ

ಅಗಲ್ಪಾಡಿ ದೇವಸ್ಥಾನದಲ್ಲಿ ಧಾರ್ಮಿಕ ಚಿಂತನಾ ಸತ್ರ


ಪ್ರಾತಿನಿಧಿಕ ಚಿತ್ರ (ಸಂಕಲನ)


ವಿಷಯ: ಅಂತ್ಯೇಷ್ಟಿ (ಆಶ್ವಲಾಯನ ಸೂತ್ರಾನುಸಾರಿ)

ಬದಿಯಡ್ಕ: ಬೆಂಗಳೂರಿನ ಜನಸೇವಾ ಚಾರಿಟೆಬಲ್ ಅಸೋಸಿಯೇಷನ್ (ರಿ.) ಆಶ್ರಯದಲ್ಲಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿ, ವೇದ ಮಾತಾ ಟ್ರಸ್ಟ್ (ರಿ.) ಅಗಲ್ಪಾಡಿ, ಕರಾಡ ವೈದಿಕ ಸಭಾ ಅಗಲ್ಪಾಡಿ ಮತ್ತು ಕರಾಡ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ಚಿಂತನಾ ಸತ್ರವನ್ನು ಆಯೋಜಿಸಲು ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.


ಮುಂದಿನ ಜನವರಿ 8ರಂದು (08-01-2023) ಭಾನುವಾರ ಬೆಳಗ್ಗೆ 9:00ರಿಂದ ಸಂಜೆ 5:00ರ ವರೆಗೆ ಈ ಚಿಂತನಾ ಸತ್ರವನ್ನು ಆಯೋಜಿಸಲಾಗುತ್ತದೆ. ಸ್ಥಳ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿ. ಪ್ರಧಾನ ವಿಷಯ- ಅಂತ್ಯೇಷ್ಟಿ (ಆಶ್ವಲಾಯನ ಸೂತ್ರಾನುಸಾರಿ).


ಧರ್ಮ-ಕರ್ಮಗಳ ಕುರಿತು ಅಪಾರ ಜ್ಞಾನ ಹೊಂದಿರುವ ಶ್ರೇಷ್ಠ ವೈದಿಕ ವಿದ್ವಾಂಸರಾದ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ, ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು, ಡಾ| ಸತ್ಯನಾರಾಯಣ ಆಚಾರ್ಯ, ಬೆಂಗಳೂರು, ಬೇಂಗ್ರೋಡಿ ಮಾಧವ ಭಟ್, ಬೆಳ್ಳೆಚ್ಚಾಲು ಬಾಲಸುಬ್ರಹ್ಮಣ್ಯ ಭಟ್ ಮತ್ತು ಬೋಳೂರು ವಿದ್ಯಾಶಂಕರ ಭಟ್ ಈ ಚಿಂತನಾ ಸತ್ರದಲ್ಲಿ ಭಾಗವಹಿಸಲಿದ್ದಾರೆ.


ಮಂಡನೀಯ ವಿಚಾರಗಳು:

1. ಔರ್ಧ್ವದೇಹಿಕ ಕ್ರಿಯಾಭಾಗಗಳ ಪ್ರಸ್ತುತತೆ.

2. ಮರಣಕಾಲದ ಕರ್ತವ್ಯಗಳು.

3. ಅಗ್ನಿ ಸಂಸ್ಕಾರ, ದಶಾಹಕೃತ್ಯಗಳು, ಧರ್ಮೋದಕ, ಏಕೋದ್ದಿಷ್ಟಾದಿ ವೈಕುಂಠ ಸಮಾರಾಧನಾ ಪರ್ಯಂತ ಕಾರ್ಯಗಳು ಮತ್ತು ಆಚರಣೆ. 

4. ಮಾಸಿಕ - ಸಾಂವತ್ಸರಿಕ ಶ್ರಾದ್ಧ ಚಿಂತನೆ.

5. ದೇಶಾಚಾರ - ಕಾಲಾಚಾರಗಳ ವಿಮರ್ಶೆ


ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಸೂರ್ಯನಾರಾಯಣ ಭಟ್ ಕಶೆಕೋಡಿ (ಕಲಾಶ್ರಯ) - 8105437183

ನಾಗರಾಜ ಉಪ್ಪಂಗಳ, ಬೆಂಗಳೂರು (ಅಧ್ಯಕ್ಷರು, ಜನಸೇವಾ ಚಾರಿಟೇಬಲ್ ಅಸೋಸಿಯೇಷನ್) - 9535000365


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post