ಕೃಷಿಕೋದ್ಯಮ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನ

Upayuktha
0


  ಪುತ್ತೂರು:   ಕೃಷಿಕೋದ್ಯಮ - ಕೃಷಿ ಬದುಕಿನ ಪಯಣದಲ್ಲಿ  ವ್ಯಾ ಹಾರಿಕ ಪ್ರಜ್ಞೆ  

ದಿನಾಂಕ: 20 ಸಪ್ಟೆಂಬರ್ 2022 ಮಂಗಳವಾರ ,ಮುಳಿಯ ಜ್ಯುವೆಲ್ಸ್ ಕೋರ್ಟ್ ರಸ್ತೆ, ಪುತ್ತೂರು. ಪುತ್ತೂರಿನಲ್ಲಿರುವ ಮುಳಿಯ ಜ್ಯುವೆಲ್ಸ್ ಕಟ್ಟಡದಲ್ಲಿ ಬೆಳಿಗ್ಗೆ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ.ಹೆಚ್ಚು ಜನರನ್ನು ತಲುಪುವಲ್ಲಿ ಸ್ಥಳೀಯ ಪತ್ರಿಕೆ ಮತ್ತು ಟಿವಿ ಮಾಧ್ಯಮ 'ಸುದ್ದಿ' ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.

      ಕೃಷಿಯ ಕುರಿತ ಹಲವು ವರ್ಷಗಳ ಅನುಭವದೊಂದಿಗೆ ಹಾಗೂ ಮಣ್ಣು ಪರೀಕ್ಷೆ, ಓPಏ ತೆಂಗು-ಕಂಗು-ರಬ್ಬರ್ ಎಲ್ಲವೂ ನಮ್ಮ ಅನುಭವದ ಜ್ಞಾನ ದೊಂದಿಗೆ ನಾವು ಕೃಷಿಯನ್ನು ಮಾಡುತ್ತಿದ್ದೇವೆ. ಹಲವರಿಗೆ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬಳಕೆ ಬಗ್ಗೆ ಕುತೂಹಲ ಹಾಗೂ ಕೊರೋನಾ ಸಂದರ್ಭದಲ್ಲಿ ನಾವು ಮನೆಯೊಳಗೇ ನಿಂತು ಹೋದಾಗ ನಮ್ಮ ತೋಟದಲ್ಲೂ ಕೆಲವನ್ನು ಅಳವಡಿಸಿ ಬೆಳವಣಿಗೆಯನ್ನು  ಕಂಡಿದ್ದೇವೆ.

 ಆದರೆ, ಕೃಷಿಯನ್ನು ಒಂದು ಉದ್ಯಮದ ರೀತಿಯಲ್ಲಿ ನೋಡಬೇಕೆ? ನೋಡಬಹುದೇ? Costing, finance management ,ROI, staff training , accountability , technology upgradation ... ಮುಂತಾದ ಚಿಂತನೆಗಳನ್ನು ಯಾಕೆ ತರಬಾರದು? ಎಂಬುದು ಈ ಸಂವಾದ ಕಾರ್ಯಕ್ರಮದ ಚರ್ಚೆ-ಚಿಂತನೆಯ ವಿಷಯ.•

 ಒಂದು ಲೀಟರ್ ಹಾಲಿನ ನಮ್ಮ ಖರ್ಚು ಎಷ್ಟು?, ಒಂದು ಕಿಲೋ ಅಡಕೆಯ ತಯಾರಿಯಲ್ಲಿ ಕೃಷಿಕನ ವೆಚ್ಚ ಎಷ್ಟು?, ಒಂದು ತೆಂಗಿನಕಾಯಿ ಅಸಲು ಎಷ್ಟು? ,ಕರಿ ಮೆಣಸು ಇವೆಲ್ಲಕ್ಕೂ ಬೋನಸ್ ಆಗಬಹುದೇ?, ರಬ್ಬರ್ ಟ್ಯಾಪಿಂಗ್-ಖರ್ಚು ವೆಚ್ಚ ನಿಭಾಯಿಸುವುದು ಹೇಗೆ?, ತರಕಾರಿ ಕೃಷಿ ಮಧ್ಯಮ ವರ್ಗದ ಕೃಷಿಕರಿಗೆ ಮತ್ತು ಕಡಿಮೆ,ಕೃಷಿ ಭೂಮಿ ಇರುವವರಿಗೆ ಲಾಭದಾಯಕವೇ?  ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಮೊದಲೇ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. 

ಕೃಷಿ ಬದುಕಿನಲ್ಲಿ ಸದಾ ಮುಳಿಯ ಪ್ರತಿಷ್ಠಾನ ಹಾಗೂ ನಮ್ಮ ಸಂಸ್ಥೆಗಳು ನಿಮ್ಮೊಂದಿಗೆ ಇರುತ್ತದೆ. ಹೆಚ್ಚು ಜನರನ್ನು ತಲುಪಲು 'ಸುದ್ದಿ' ಮಾಧ್ಯಮದ  ಜೊತೆಗೆ ಸೇರಿ ಈ ವಿನೂತನ ಚಿಂತನ ಕಾರ್ಯಕ್ರಮ ಮಾಡುತಿದ್ದೇವೆ.”  ವ್ಯವಹಾರದಲ್ಲಿ ನಾವು ಎಂತ್ರಪ್ರನರ್ ಎನ್ನುವ ಹಾಗೆ ಕ್ರಷಿ ಕ್ಷೇತ್ರಕ್ಕೆ ಯುವಕರು  ‘ ಯಾಗ್ರೊ ಪ್ರನರ್’ ಆಗಿ ಹೊರಬರಬೇಕು. ಈ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮ  ಎಂದು ಕೇಶವ ಪ್ರಸಾದ್ ಮುಳಿಯ ತಿಳಿಸಿದರು.


ಹಲವು ಕ್ಷೇತ್ರಗಳ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.


ಮೈ  ಅಂತರಾತ್ಮ ಸಂಸ್ಥೆಯ ಶ್ರೀ ವೇಣು ಶರ್ಮ ಕಾರ್ಯಕ್ರಮದ ಒಟ್ಟು ರೂಪುರೇಷೆಗಳನ್ನು ಮುನ್ನುಡಿಯಾಗಿ ಹೇಳುವರು. ಶ್ರೀ ಕೇಶವ ಪ್ರಸಾದ್ ಮುಳಿಯ ಸಂವಾದ ಕಾರ್ಯಕ್ರಮ ವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಚಾಲನೆ ನೀಡುವರು. ತದನಂತರದಲ್ಲಿ

 ಶ್ರೀ ಅಶೋಕ್ ಕುಮಾರ್ -  ಫೌಂಡರ್, ಮಾ ಇಂಟಿಗ್ರೇಟರ್ಸ್, ಇಂಟಿಗ್ರೇಟೆಡ್ ಅಗ್ರಿಕಲ್ಚರಿಸ್ಟ್ ;

ಶ್ರೀ ಯಚ್ ಮುರಳಿಕೃಷ್ಣ - ಚೀಫ್ ಟೆಕ್ನಿಕಲ್ ಆಫೀಸರ್ (ಟೆಕ್. ಇನ್ಫೋ.) ;

ಶ್ರೀ ವಿಶ್ವೇಶ್ವರ ಭಟ್ - ಬಂಗಾರಡ್ಕ, ಇವರು ತಮ್ಮ ವಿಚಾರವನ್ನು ಮಂಡಿಸುವರು. ಕೃಷಿ ಸಲಹೆಗಾರ ಪುರಂದರ ಕುಬಣೂರಾಯ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸುವರು.  ಕಾರ್ಯಕ್ರಮದಲ್ಲಿ ಇನ್ನೂ ಅನೇಕ ಕೃಷಿಕರು ಮತ್ತು ಅವರು ನಿರ್ವಹಿಸುವ ಹಣಕಾಸಿನ ಖರ್ಚು ವೆಚ್ಚ ಮುಂತಾದ ವಿಷಯಗಳ ಕುರಿತು ಅಭಿಪ್ರಾಯ ಮಂಡಿಸಲಿರುವವರು.

ಡಾ. ವೇಣು ಕಳೆಯತ್ತೋಡಿ - ( ಕರಿ ಮೆಣಸು ಮತ್ತು ಸಾವಯವ ಕೃಷಿ) ;

ಶ್ರೀಹರಿ ಭಟ್ ಸಜಂಗದ್ದೆ - ( ಕೃಷಿಯಲ್ಲಿ ಸಣ್ಣ ವೆಚ್ಚದ ತಂತ್ರಗಾರಿಕೆ) ;

ವೇಣು ಗೋಪಾಲ್ - (ನರ್ಸರಿ) ;

ಸತೀಶ್ ಗೌಡ - (ಬಸಳೆ ಕೃಷಿ) ;

ಶ್ರೀನಿವಾಸ್ ಭಟ್ ಪಡುಮಲೆ -  (ಅಡಿಕೆ ಕೃಷಿ) ;

ಗೋವಿಂದ ಭಟ್ ಮಾಣಿಲ - (ಸುರಂಗ ನೀರಾವರಿ) ;

ಶ್ರೀಮತಿ ಕಸ್ತೂರಿ ಅಡ್ಯಂತಾಯ -  (ಹೈನುಗಾರಿಕೆ) ;

ಶ್ರೀರಾಮ ಭಟ್ಟ ಚೆನ್ನಾಂಗೋಡು -  (ತರಕಾರಿ ಕೃಷಿ) ;

ಡಾ. ಹರಿಕೃಷ್ಣ ಪಾಣಾಜೆ -  (ಆಯುರ್ವೇದ ಮೂಲಿಕೆಗಳ ಕೃಷಿ) ; ಶ್ರೀ ಕೃಷ್ಣ ಮೋಹನ್ -  ( ಸಂಘಟಿತ ಕೃಷಿ ವ್ಯಾಪಾರ) ;

ಮಹೇಶ್ ಪುಚ್ಚಪ್ಪಾಡಿ - (ಕೃಷಿ ಸಂಘಟನೆ- ಸಾಮಾಜಿಕ ಜಾಲತಾಣ) .... ಮುಂತಾದವರು ಭಾಗವಹಿಸಲಿರುವರು.

 ಒಟ್ಟು 250 ಕೃಷಿಕರಿಗೆ ಮತ್ತು ಪ್ರಗತಿಪರ ಚಿಂತನೆಯ ಕೃಷಿಕರಿಗೆ ಭಾಗವಹಿಸುವ ಅವಕಾಶವಿದೆ . ಆಸಕ್ತರು ತಮ್ಮ ಹೆಸರು ಹೆಸರನ್ನು ಮೊದಲೇ ನೋಂದಾವಣೆ ಮಾಡಲು ಮುಳಿಯ ಜ್ಯುವೆಲ್ಸ್ ನ 8494938916 ಸಂಪರ್ಕಿಸಬೇಕಾಗಿ ಕೋರಿಕೆಸಮಾರೋಪ ಸಮಾರಂಭದಲ್ಲಿ 'ಸುದ್ದಿ' ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಯು ಪಿ ಶಿವಾನಂದ ಇವರು ಉಪಸಂಹಾರ ನುಡಿಯನ್ನು ನೀಡಿದರೆ

ಶ್ರೀ ಕೃಷ್ಣ ನಾರಾಯಣ ಮುಳಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top