ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ಉಡುಪಿ ವಲಯದ ನೂತನ ಪರಿಕಲ್ಪನೆ
ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠÀ ಉಡುಪಿ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ಉಡುಪಿ ವಲಯದ ನೇತೃತ್ವದಲ್ಲಿ ಪಂಚಮಿ ಟ್ರಸ್ಟ್ (ರಿ.), ಗಾಂಧಿ ಹಾಸ್ಪಿಟಲ್ ಸಹಯೋಗದೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರಥಮ ಬಾರಿಗೆ ಉಡುಪಿಯ ರಥಬೀದಿಯಲ್ಲಿರುವ ಕನಕ ಗೋಪುರ "ತಿರಂಗಾ" ಬಣ್ಣದ ಬೆಳಕಿನೊಂದಿಗೆ ಝಗಮಗಿಸಲಿದೆ.
ಆ. 13ರಂದು ಶನಿವಾರ, ಸಂಜೆ ಗಂಟೆ 6.00ಕ್ಕೆ- ಕನಕ ಗೋಪುರದ ಎದುರು ಈ ಸಮಾರಂಭ ಉದ್ಘಾಟನೆಗೊಳ್ಳಲಿದ್ದು, ಶನಿವಾರ, ಸಂಜೆ 6.30 -10.00 ಗಂಟೆಯವರೆಗೆ 14.08.2022, ಭಾನುವಾರ ಸಂಜೆ 6.30 ರಿಂದ ರಾತ್ರಿ 1.00 ಗಂಟೆಯವರೆಗೆ, 15.08.2022, ಸೋಮವಾರ ,6.30 ರಿಂದ 10.00 ಗಂಟೆಯವರೆಗೆ ತಿರಂಗಾ ಬಣ್ಣದ ಬೆಳಕಿನ ಪ್ರದರ್ಶನವಿರುತ್ತದೆ.
ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿಯ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಇದಕ್ಕೆ ಚಾಲನೆ ನೀಡಲಿದ್ದಾರೆ. ಜನಾರ್ದನ್ ಕೊಡವೂರು, ಅಧ್ಯಕ್ಷರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯ., ಕೆ. ರಘುಪತಿ ಭಟ್, ಶಾಸಕರು, ಉಡುಪಿ., ಡಾ. ಎಂ. ಹರಿಶ್ಚಂದ್ರ, ಎಂ.ಡಿ, ಗಾಂಧಿ ಆಸ್ಪತ್ರೆ, ಉಡುಪಿ, ವಿಜಯ ಕೊಡವೂರು, ನಗರಸಭಾ ಸದಸ್ಯರು, ಉಡುಪಿ ನಗರಸಭೆ, ಕೆ. ವಾಸುದೇವ ರಾವ್, ಅಧ್ಯಕ್ಷರು, ಎಸ್ಕೆಪಿಎ ವಿವಿದ್ದೋದ್ದೇಶ ಸಹಕಾರಿ ಸಂಘ ನಿ., ಬಾಲಕೃಷ್ಣ ಮದ್ದೋಡಿ, ಅಧ್ಯಕ್ಷರು, ರೋಟರಿ ಉಡುಪಿ ರಾಯಲ್, ರವಿರಾಜ್ ಹೆಚ್.ಪಿ, ಅಧ್ಯಕ್ಷರು, ಕಸಾಪ, ಉಡುಪಿ ತಾಲೂಕು ಘಟಕ, ಜಯಕರ ಸುವರ್ಣ, ಗೌರವಾಧ್ಯಕ್ಷರು, ಎಸ್ಕೆಪಿಎ ಉಡುಪಿ ವಲಯ ಉಪಸ್ಥಿತರಿರುತ್ತಾರೆ.
ಉಡುಪಿ ಪರ್ಕಳದ ನಿವೃತ್ತ ಯೋಧರಾದ ಕೃಷ್ಣ ಶೆಟ್ಟಿಬೆಟ್ಟು ಅವರಿಗೆ ಗೌರವ ಅಭಿನಂದನೆ ನೀಡಲಾಗುವುದು. ಪ್ರಭಾಕರ ಸೌಂಡ್ಸಿಸ್ಟಿಮ್, ಕೆ.ಎಂ.ಮಾರ್ಗ, ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ರೋಟರಿ ಉಡುಪಿ ರಾಯಲ್, ಉಡುಪ ರತ್ನ ಪ್ರತಿಷ್ಠಾನ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸಹಕರಿಸಲಿದ್ದಾರೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ.) ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ