ಗೋರಖ್ಪುರ: ಉತ್ತಮ ಮಳೆಯಾಗುವಂತೆ ಕೋರಿಕೆ ಸಲ್ಲಿಸಿ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಜೋಡಿ ಕಪ್ಪೆಗಳಿಗೆ ಮದುವೆ ಮಾಡಿಸಲಾಗಿದೆ. ಹಿಂದೂ ಮಹಾಸಭಾ ಸಂಘಟನೆಯು ಮದುವೆಯ ಎಲ್ಲ ಕಾರ್ಯಗಳನ್ನು ನಿರ್ವಹಿಸಿದೆ.
ಗೋರಖ್ಪುರದ ಕಾಳಿಬರಿ ದೇವಸ್ಥಾನದಲ್ಲಿ ಮದುವೆ ನಡೆದಿದೆ. ಈ ಪ್ರದೇಶದಲ್ಲಿ ಬರಪೀಡಿತ ಸನ್ನಿವೇಶವಿದೆ. ಮಳೆಗಾಲವಾದರೂ, ಸರಿಯಾಗಿ ಮಳೆ ಸುರಿದಿಲ್ಲ. ಹೀಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಲಾಗಿದೆ ಎಂದು ಹಿಂದೂ ಮಹಾಸಂಘದ ರಮಾಕಾಂತ್ ವರ್ಮಾ ಹೇಳಿದ್ದಾರೆ.