ರಕ್ಷಾಬಂಧನ ಹಬ್ಬಕ್ಕಾಗಿ ಬಂದಿದೆ... ಪರಿಸರ ಸ್ನೇಹಿ ಗೋಮಯ ರಾಖಿ

Upayuktha
0



ಕಲಬುರಗಿ: ರಕ್ಷ ಬಂಧನ ದಿನದಂದು ಶೇ 90% ಕ್ಕೂ ಹೆಚ್ಚು ಜನರು ಪ್ಲಾಸ್ಟಿಕ್ ನಿಂದ ಮಾಡಿರುವ ರಾಖಿಗಳನ್ನು ಬಳಸುತ್ತಾರೆ. ರಕ್ಷಾ ಬಂಧನ ಹಬ್ಬ ಮುಗಿದ ಮರುದಿನ ಅದನ್ನು ತಿಪ್ಪೆಗೆ ಎಸೆಯಲಾಗುತ್ತದೆ. ಆಹಾರವನ್ನು ಹುಡುಕುತ್ತಾ ಬರುವ ಪ್ರಾಣಿ ಪಕ್ಷಿಗಳು ಆಹಾರದ ಜೊತೆಗೆ ಪ್ಲಾಸ್ಟಿಕ್ ಕೂಡ ತಿಂದುಬಿಡುತ್ತವೆ. ಅದು ಹೊಟ್ಟೆಯಲ್ಲಿ ಕರಗದೆ ಬಹಳಷ್ಟು ನೋವನ್ನು ಅನುಭವಿಸಿ ಬಹಳಷ್ಟು ಪ್ರಾಣಿ ಪಕ್ಷಿಗಳು ಜೀವ ಕಳೆದುಕೊಳ್ಳತ್ತಲಿವೆ. ಅದನ್ನು ಪರಿಗಣಿಸಿ ಕಲಬುರಗಿ ಜಿಲ್ಲೆ ಕಲಬುರಗಿ ತಾಲೂಕಿನ ಗರೂರ ಬಿ ಗ್ರಾಮದಲ್ಲಿ ಪರಿಸರ ಸ್ನೇಹಿ ಗೋಮಯ ರಾಖಿಗಳನ್ನು ತಯಾರಿಸುತ್ತಿದ್ದಾರೆ.


ಈ ಪರಿಸರ ಸ್ನೇಹಿ ರಾಖಿಯು ಗೋವುಗಳ ಸಗಣಿಯಿಂದ ತಯಾರಿಸಿದ್ದು ಮತ್ತು ರಾಖಿಯ ಮೇಲ್ಭಾಗದಲ್ಲಿ ತುಳಸಿ, ಈರುಳ್ಳಿ ಬಿಜಗಳನ್ನು ಹಚ್ಚಲಾಗಿದೆ. ರಕ್ಷಾ ಬಂಧನ ಮುಗಿದ ಮರುದಿನ ರಾಖಿಯು ಹೂವಿನ ಕುಂಡದಲ್ಲಿ ಇಟ್ಟು ಮಣ್ಣಿನಿಂದ ಮುಚ್ಚಿದರೆ ಸಾಕು, ಗೋಮಯ ರಾಖಿಯು ಕ್ರಮೇಣವಾಗಿ ಕರಗಿ ಗೊಬ್ಬರವಾಗಿ ತುಳಸಿ ಅಥವಾ ಈರುಳ್ಳಿ ಸಸ್ಯ ಬೆಳೆಯುತ್ತದೆ. ಇದು ಹೊರಗೆ ಬಿಸಾಡಿದರೂ ಪರಿಸಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ.



ಪರಿಸರ ಸ್ನೇಹಿ ಗೋಮಯ ರಾಖಿ ಮಾಡುವ ವಿಧಾನ

ಮೊದಲು ಆಕಳ ಸಗಣಿಯನ್ನು ತೆಗೆದುಕೊಂಡು ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ ಅದನ್ನು ಪುಡಿಮಾಡಿ ನಂತರ ಅದನ್ನು ಜರಡಿ ಹಿಡಿಯಲಾಗುತ್ತೆ ನಂತರ ಅದರ ಜೊತೆಗೆ ಗವರ್ ಗಮ್ ಮಿಶ್ರಣ ಮಾಡಿ ನೀರನ್ನು ಹಾಕಿ ಚೆನ್ನಾಗಿ ಹದಗೊಳಿಸಲಾಗುತ್ತೆ ನಂತರ ಬೆಕಾದ ಅಚ್ಚು ತೆಗೆದುಕೊಂಡು ಅಚ್ಚುಹಾಕಿ ಎರಡು ದಿನಗಳ ಕಾಲ ಚೆನ್ನಾಗಿ ನೆರಳಿನಲ್ಲಿ ಒಣಗಿಸಬೇಕು. ನಂತರ ಇಷ್ಟವಾದ ಬಣ್ಣವನ್ನುಬಳಿದು ರಾಖಿಯ ಮೇಲೆ ಗಮ್ ನ ಸಹಾಯದಿಂದ ತುಳಸಿ ಅಥವಾ ಈರುಳ್ಳಿ ಬೀಜಗಳನ್ನು ಹಚ್ಷಿ ನೂಲಿನ ದಾರವನ್ನು ಅಂಟಿಸಿದರೆ ಸಾಕು ಪರಿಸರ ಸ್ನೇಹಿ ರಾಖಿ ಸಿದ್ದವಾಗುತ್ತದೆ.


ಭಾರತದಲ್ಲಿ ಪ್ರತಿ ವರ್ಷ ಕೋಟಿಗಟ್ಟಲೆ ರಾಖಿಗಳನ್ನು ಹಬ್ಬ ಮುಗಿದ ಕೂಡಲೇ ತ್ಯಾಜ್ಯದಲ್ಲಿ ಎಸೆಯಲಾಗುತ್ತದೆ. ಉತ್ಸವಗಳನ್ನು ಹೆಚ್ಚು ಸಮರ್ಥನೀಯ ರೀತಿಯಲ್ಲಿ ಆಚರಿಸಲು ಜನರನ್ನು ಪ್ರೋತ್ಸಾಹಿಸುವ ಉತ್ಪನ್ನಗಳೊಂದಿಗೆ ನಾವು ಮಂದಹಾಸ ವೃಕ್ಷ ಎಂಬ ಕಿಟ್ ಅನ್ನು ತಯಾರಿಸಿದ್ದೇವೆ. ಈ ಕಿಟ್ ನಲ್ಲಿ ಗೋವಿನ ಸಗಣಿಯಿಂದ ತಯಾರಿಸಿರುವ ಬುಟ್ಟಿ (Pot), ಗೋಮಯ ರಾಖಿ, ಮಣ್ಣು, ಎರೆಹುಳು ಗೊಬ್ಬರ, ಕೋಕೋಪೀಟ್, ಬೀಜಗಳು, ಸಸ್ಯದ ಬೋರ್ಡ್ ಹಾಗೂ ಅಕ್ಕಿ ಮತ್ತು ಕುಂಕುಮ ಇಡಲಾಗಿದೆ ಎಲ್ಲವು ಪರಿಸರ ಸ್ನೇಹಿಯಾಗಿದೆ.


-ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ(ರಿ)

ಮೋ : 8095007278, 7259128278


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top