ಕಾರ್ಕಳ: ಅಗಸ್ಟ್ 1 ರಿಂದ ಅಗುಂಬೆ ಘಾಟಿ ರಸ್ತೆಯು ಬಸ್ ಹಾಗೂ ಲಘು ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗಲಿದೆ.
ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಅಗುಂಬೆ ಘಾಟಿಯ11ನೇ ತಿರುವಿನಲ್ಲಿ ಕುಸಿತ ಉಂಟಾಗಿತ್ತು. ಜೊತೆಗೆ ರಸ್ತೆಯ ತಡೆಗೋಡೆಯು ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಜುಲೈ 10 ರಂದು ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.
ಜುಲೈ 13ರಂದು ಲಘು ವಾಹನಗಳ ಪ್ರಯಾಣಕ್ಕೆ ಅನುವು ಮಾಡಲಾಗಿತ್ತು. ಅಗಸ್ಟ್ 1 ರಿಂದ ಸಾರ್ವಜನಿಕರ ಕೋರಿಕೆಯಂತೆ ಬಸ್ ಹಾಗೂ ಲಘು ವಾಹನಗಳಿಗೆ ಮುಕ್ತವಾಗಿ ಸಂಚರಿಸಬಹುದಾಗಿದೆ. ಅದರೆ ಲಾರಿ ಟಿಪ್ಪರ್ ಸೇರಿದಂತೆ ಘನ ವಾಹನಗಳಿಗೆ ಅಗಸ್ಟ್ 30 ರ ವರೆಗೆ ನಿಷೇಧ ಹೇರಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ