ರೇಡಿಯೋ ಪಾಂಚಜನ್ಯದಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಭಕ್ತಿಗೀತೆ ಸ್ಪರ್ಧೆ ಜುಲೈ 15 ಕ್ಕೆ

Upayuktha
0

ಪುತ್ತೂರು : ಸಮುದಾಯ ಬಾನುಲಿ ರೇಡಿಯೋ ಪಾಂಚಜನ್ಯ 90.8 ಎಫ್ ಎಂ, ಇನ್ನರ್ ವೀಲ್ ಮತ್ತು ಮುಳಿಯ ಜ್ಯುವೆಲ್ಸ್ ಸಹಯೋಗದಲಿ ಜುಲೈ 15 ರಂದು ಬೆಳಿಗ್ಗೆ 9 ಗಂಟೆಗೆ ನಾಗರ ಪಂಚಮಿ ಪ್ರಯುಕ್ತ ವಿಶೇಷ ಭಕ್ತಿಗೀತೆ ಸ್ಪರ್ಧೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಆಯೋಜಿಸಿದೆ.


ಭಕ್ತಿಗೀತೆಯನ್ನು ಹಾಡುವ ಅವಧಿ 3+1 ನಿಮಿಷ ಆಗಿದದ್ದು 1 ರಿಂದ 4ನೇ ತರಗತಿ ಮತ್ತು 5 ರಿಂದ 7ನೇ ತರಗತಿಯ ಮಕ್ಕಳಿಗೆ ಎರಡು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ.


ನಾಗದೇವರ ಮತ್ತು ನಾಗರ ಪಂಚಮಿ ಹಬ್ಬದ ವಿಶೇಷತೆ ಕುರಿತ ಸ್ವರಚಿತ ಕವನ ವಾಚನ ಸ್ಪರ್ಧೆ (3+1 ನಿಮಿಷ) ಕೂಡ ನಡೆಯಲಿದೆ. ಕವನಗಳು ಕನಿಷ್ಟ 12 ಸಾಲು, ಗರಿಷ್ಟ 22 ಸಾಲಿನೊಳಗೆ ಇರಬೇಕಾಗುತ್ತದೆ. 8ರಿಂದ 10ನೇ ತರಗತಿಯ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.


ಸ್ಪರ್ಧೆಯು ರೇಡಿಯೋ ಪಾಂಚಜನ್ಯದ ಕಚೇರಿಯಲ್ಲಿ ನಡೆಯಲಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 8050809885 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top