ಮಧುಮೇಹ ಮತ್ತು ಅದರ ದುಷ್ಪರಿಣಾಮಗಳಿಗೆ ಸ್ಟೆಮ್‌ಸೆಲ್ ಥೆರಪಿ ಪರಿಣಾಮಕಾರಿ

Upayuktha
0

ಭಾರತದಲ್ಲಿ PODIATRY ಗೆ ಪ್ರಮುಖ ಪರಿಹಾರವನ್ನು PODOCON 2022 ನೀಡಿದ್ದು, ಮಧುಮೇಹ ಪಾದದ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಪುನರುತ್ಪಾದಕ ಔಷಧ ಆರಂಭಿಸುವ ಮೂಲಕ ಅಂಗಚ್ಛೇದನೆಯನ್ನು ತಡೆಯಬಹುದಾಗಿದೆ.


ಬೆಂಗಳೂರು: ಮಧುಮೇಹ ಪಾದದ ಹುಣ್ಣಿನ ನಿರ್ವಹಣೆಯಲ್ಲಿ ಪೋಡೋಕಾನ್ 2022 ರ ಪ್ರಮುಖ ಅಂಶ ಸ್ಟೆಮ್ಸೆಲ್ ಥೆರಪಿ. ಇದು ಶನಿವಾರ (ಮೇ 28) ಹೈಬ್ರಿಡ್ ಮೋಡ್‌ನಲ್ಲಿ ನಡೆದ ಪೋಡಿಯಾಟ್ರಿಯಾದ ಪೋಡೋಕಾನ್ -2022 (PODOCON -2022)ರ  ಪ್ರಮುಖ ಅಂಶ. ಭವಿಷ್ಯದ ಮತ್ತು ಆದ್ಯತೆಯ ಚಿಕಿತ್ಸೆ ವಿಧಾನಗಳ ಕುರಿತು ಗಮನ ಕೇಂದ್ರೀಕರಿಸಿ ನಡೆದ ಚರ್ಚೆಯಲ್ಲಿ ಭಾರತ ಮತ್ತು ಯುಎಸ್‌ಎಗಳಲ್ಲಿರುವ ತಜ್ಞರು ಪಾಲ್ಗೊಂಡಿದ್ದರು.


ಭಾರತದ ಏಕೈಕ ಪೊಡಿಯಾಟ್ರಿಕ್ ಚಿಕಿತ್ಸಾಲಯ ಫುಟ್‌ಸೆಕ್ಯೂರ್ ಪೋಡೋಕಾನ್ -2022ನ್ನು ಆಯೋಜಿಸಿತ್ತು.


ಮಧುಮೇಹದ ಪಾದ ಪುನರಾವರ್ತಿತ ಹುಣ್ಣುಗಳಿಂದಾಗಿ ಹೆಚ್ಚು ನಿರ್ಲಕ್ಷಿಸಲ್ಪಟ್ಟ ಸಮಸ್ಯೆಯಾಗಿದೆ. ಇದು ಸಾಮಾನ್ಯವಾಗಿ ಸಾಂಪ್ರಾದಾಯಿಕ ವಿಧಾನಗಳ ಚಿಕಿತ್ಸೆಗಳಿಗೆ ಸ್ಪಂದಿಸುವುದಿಲ್ಲ. ವಿಶ್ವದ ಬೇರೆ ಬೇರೆ ಭಾಗಗಳ ವೈದ್ಯಕೀಯ ವೃತ್ತಿಪರರು ನಿರಂತರವಾಗಿ ಚಿಕಿತ್ಸೆಯ ಪದ್ಧತಿಯನ್ನು ಸುಧಾರಣೆಗೊಳಿಸುತ್ತಿದ್ದಾರೆ. ಪ್ರಸ್ತುತ ನೀಡಲಾಗುತ್ತಿರುವ ಚಿಕಿತ್ಸೆಯಿಂದ ಮಧುಮೇಹ ಪಾದದ ಹುಣ್ಣುಗಳು ವಾಸಿಯಾಗದೆ ಬಹಳಷ್ಟು ಸಂಖ್ಯೆಯ ರೋಗಿಗಳಿಗೆ ಕಾಲು ಕತ್ತರಿಸುವುದು ಅನಿವಾರ್ಯವಾಗುತ್ತಿದೆ.


ಯುಎಸ್ಎಯ ಟೆಕ್ಸಾಸ್‌ನ ವಿಶ್ವಪ್ರಸಿದ್ಧ ಪೊಡಿಯಾಟ್ರಿಕ್ ಶಸ್ತ್ರಚಿಕಿತ್ಸಕ ಡಾ ಬಿಜಾನ್ ನಜಾಫಿ ಅವರು ತಮ್ಮ ಮುಖ್ಯ ಭಾಷಣದಲ್ಲಿ, ಬಳಸಬಹುದಾದ ವಸ್ತುಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿನ ಪ್ರಗತಿಯ ಕುರಿತು ಮಾತನಾಡಿದರು. ಪ್ರಿಸ್ಕ್ರಿಪ್ಷನ್ ಕಡಿಮೆ ಮಾಡುವ ಮತ್ತು ರಕ್ಷಣಾತ್ಮಕ ಪಾದರಕ್ಷೆಗಳ ನ್ನು ಅಭಿವೃದ್ಧಿಪಡಿಸುವ ಕುರಿತು ವಿವರಿಸಿದರು.


ಪಾಂಡಿಚೇರಿ ಜೆಐಪಿಎಂಇಆರ್ ನ ಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾ ರವಿ ಚಿತ್ತೋರಿಯಾ ಅವರು, ಹಿಮೋಗ್ಲೋಬಿನ್ ಸ್ಪ್ರೇನಂತಹ ಪುನರುತ್ಪಾದಕ ಔಷಧದಲ್ಲಿ ಸರಳ ವಿಧಾನಗಳ ಕುರಿತು ವಿವರಣೆ ನೀಡಿದರು.


ಡಯಾಬಿಟಿಕ್ ಫುಟ್‌ಕೇರ್ ಮತ್ತು ರಿಸರ್ಚ್ ಸೆಂಟರ್‌ನ ಡಾ.ಅರುಣ್ ಮೈಯಾ ಅವರು ತಮ್ಮ ಸಂಶೋಧನೆಯ ಮಾಹಿತಿಯೊಂದಿಗೆ, ಮಧುಮೇಹದ ಪಾದದ ಹುಣ್ಣಿನ ನೋವು ನಿರ್ವಹಣೆಯಲ್ಲಿ 'ಲೇಸರ್ ಶೂ' ಕುರಿತು ಸಮ್ಮೇಳನದ ಪ್ರತಿನಿಧಿಗಳ ಗಮನ ಸೆಳೆದರು. ಇದು ಎಲ್ಲರಿಗೂ ಅನ್ವಯವಾಗುವುದಲ್ಲದೆ, ಪಾದದ ಹುಣ್ಣಿನ ನೋವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅವರು ವಿವರಿಸಿದರು.


ಪ್ರಮುಖ ಅಂತಃಸ್ರಾವ ಶಾಸ್ತ್ರಜ್ಞ, ಪಿಜಿಐಎಂಆರ್ ಚಂಡೀಗಢದ ಪ್ರಾಧ್ಯಾಪಕ ಮತ್ತು ಮಧುಮೇಹವನ್ನು ಹಿಮ್ಮೆಟ್ಟಿಸುವಲ್ಲಿ ಸ್ಟೆಮ್‌ಸೆಲ್ ಥೆರಪಿ ಕುರಿತು ಸಂಶೋಧನೆ ನಡೆಸುತ್ತಿರುವ ವಿಶ್ವದ ಮೊದಲ ವೈದ್ಯ ಡಾ.ಅನಿಲ್ ಬನ್ಸಾಲಿ, ಮಧುಮೇಹವನ್ನು ಹಿಮ್ಮೆಟ್ಟಿಸುವಲ್ಲಿ ಪುನರುತ್ಪಾದಕ ಔಷಧದ ಯಶಸ್ಸಿನ ಕುರಿತು ಮಾತನಾಡಿದರು.


ಮಧುಮೇಹ ಪಾದದ ಹುಣ್ಣು  ಪ್ರಮುಖ ವೈದ್ಯಕೀಯ ಸವಾಲಾಗಿ ಮಾರ್ಪಟ್ಟಿರುವುದರಿಂದ- ಮಧುಮೇಹ ಪಾದದ ರೋಗಕಾರಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಆಳವಾಗಿ ಅಧ್ಯಯನ ಮಾಡುವುದು, ಹೊಸ ಚಿಕಿತ್ಸಾ ತಂತ್ರಗಳನ್ನು ಅನ್ವೇಷಿಸುವುದು ಮತ್ತು ಅವುಗಳ ಅಳವಡಿಕೆಯನ್ನು ಉತ್ತೇಜಿಸುವುದು ಅನಿವಾರ್ಯವಾಗಿದೆ.  ಈ ತುರ್ತು ಸಂದರ್ಭಗಳಲ್ಲಿ, ವೈದ್ಯಕೀಯ ವೃತ್ತಿಪರರ ಜ್ಞಾನವನ್ನು ಹೆಚ್ಚಿಸುವಲ್ಲಿ PODOCON -2022 ಮಹತ್ವದ  ಪಾತ್ರವನ್ನು ವಹಿಸಿತು.


ಮಧುಮೇಹವು ಬಹು ಅಂಗಾಂಗಳ ಕಾರ್ಯವನ್ನು ಅಸಮರ್ಪಕಗೊಳಿಸುತ್ತದೆ ಮತ್ತು ಮಧುಮೇಹ ಪಾದವು ನರರೋಗ, ಮ್ಯಾಕ್ರೋವಾಸ್ಕುಲರ್ ಮತ್ತು ಮೈಕ್ರೋವಾಸ್ಕುಲರ್ ಕಾಯಿಲೆಗಳ ದೀರ್ಘಕಾಲೀನ ಸಂಕೀರ್ಣತೆಯಿಂದಾಗಿ ಗುಣಪಡಿಸುವ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.


ಡಾ ಸಂಜಯ್ ಶರ್ಮಾ  

ಡಾ. ಸಂಜಯ್ ಶರ್ಮಾ ಅವರು ಆರೋಗ್ಯ ರಕ್ಷಣೆ ವಿಷಯದಲ್ಲಿ 18 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು USA ಮತ್ತು ಭಾರತದಲ್ಲಿ ಪೊಡಿಯಾಟ್ರಿಕ್ ಶಸ್ತ್ರಚಿಕಿತ್ಸೆಯಲ್ಲಿ 10 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಅರಿಜೋನಾದ ಬ್ಯಾನರ್ ಆಸ್ಪತ್ರೆಯಲ್ಲಿ ಡಾ ಡೇವಿಡ್ ಆರ್ಮ್‌ಸ್ಟ್ರಾಂಗ್ ಅವರ ಅಡಿಯಲ್ಲಿ ಡಯಾಬಿಟಿಕ್ ಫೂಟ್ / ಲಿಂಬ್ ಸಾಲ್ವೇಜ್‌ನಲ್ಲಿ ತರಬೇತಿ ಪಡೆದಿದ್ದಾರೆ. ಯುಎಸ್ಎ. ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್, ಯುಕೆ, ಗ್ಲ್ಯಾಸ್ಗೋದಿಂದ ಪೊಡಿಯಾಟ್ರಿಯಲ್ಲಿ (ಎಫ್‌ಎಫ್‌ಪಿಎಸ್) ಫೆಲೋಶಿಪ್ ಪಡೆದ ಭಾರತದ 7 ಶಸ್ತ್ರಚಿಕಿತ್ಸಕರಲ್ಲಿ ಅವರು ಒಬ್ಬರು. ಅವರು ಮೆಡ್‌ಟೆಕ್ ಮತ್ತು ಟೆಲಿಮೆಡಿಸಿನ್‌ನಲ್ಲಿ ಬಹು ಪೇಟೆಂಟ್‌ಗಳನ್ನು ಹೊಂದಿದ್ದಾರೆ. ಅವರು ವರ್ಲ್ಡ್ ಎಕನಾಮಿಕ್ ಫೋರಮ್‌ನಿಂದ ಟೆಕ್ನಾಲಜಿ ಪಯೋನಿಯರ್ (ನ್ಯೂರೋಸಿನಾಪ್ಟಿಕ್ ಅನ್ನು ಪ್ರತಿನಿಧಿಸುವ) ಪ್ರಶಸ್ತಿಯನ್ನು ಪಡೆದಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಫೂಟ್ ಸೆಕ್ಯೂರ್ 

ಫುಟ್ಸೆಕ್ಯೂರ್, ಡಾ ಸಂಜಯ್ ಶರ್ಮಾ ಅವರು ಸ್ಥಾಪಿಸಿದ ಸಂಸ್ಥೆ, ಇದು ಫೂಟ್ ಮತ್ತು ಆಂಕಲ್ ಕ್ಲಿನಿಕ್‌ಗಳ ಸಮಗ್ರ ಸರಪಳಿಯಾಗಿದ್ದು, ಯೋಗಕ್ಷೇಮ, ರೋಗನಿರ್ಣಯ, ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆ, ಆರ್ಥೋಟಿಕ್ಸ್ ಮತ್ತು ಪುನರ್ವಸತಿ ಸೇರಿದಂತೆ ಪೊಡಿಯಾಟ್ರಿಕ್ ಸೇವೆಗಳಿಗೆ ಮೀಸಲಾಗಿದೆ. ಪ್ರಸ್ತುತ ಫೂಟ್ ಸೆಕ್ಯೂರ್ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ 5 ಪೊಡಿಯಾಟ್ರಿ ವಿಭಾಗಗಳನ್ನು ಸ್ಥಾಪಿಸಿದೆ.


ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ:

ಡಾ ಸಂಜಯ್ ಶರ್ಮಾ

M: 9980772658 |E mail: sanjay@footsecure.com


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top