ಮಂಗಳೂರು: ಹರಿಪಾದಗೈದ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಶ್ರೀಗಳ ಹುಟ್ಟೂರಾದ ರಾಮಕುಂಜ ಯರ್ಟಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರಲ್ಲಿ ನಿರ್ಮಿತವಾದ ಚಂದ್ರ ಮಂಡಲ ರಥವು ಕೋಟೇಶ್ವರದಿಂದ ಮಂಗಳೂರು ಮಾರ್ಗವಾಗಿ ರಾಮಕುಂಜ ಯರ್ಟಾಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಾಗಲಿರುವುದು.
ಈ ಸಂದರ್ಭ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಬಳಿ ರಾಷ್ಟ್ರೀಯ ಹೆದ್ದಾರಿಯ ಪಾರ್ಶ್ವದಲ್ಲಿ ನಾಳೆ ಮಾರ್ಚ್ 3 ಗುರುವಾರ ಮಧ್ಯಾಹ್ನ 12 ಗಂಟೆಗೆ ನೂತನ ರಥವನ್ನು ಸ್ವಾಗತಿಸಲಾಗುವುದು. ಗಣ್ಯರ ಉಪಸ್ಥಿತಿಯಲ್ಲಿ ರಥಕ್ಕೆ ಪುಷ್ಪಾರ್ಚನೆಗೈದು ಬೀಳ್ಕೊಡಲಾಗುವುದು. ಶ್ರೀಗಳ ಅಭಿಮಾನಿಗಳು ಪುಷ್ಪದೊಂದಿಗೆ ಭಾಗವಹಿಸಬೇಕೆಂದು ಎಸ್. ಪ್ರದೀಪ ಕುಮಾರ ಕಲ್ಕೂರ (9845083736) ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ