ಬಿಹಾರದ ಅಂತಾರಾಷ್ಟ್ರೀಯ ಧರ್ಮಸಮ್ಮೇಳನದಲ್ಲಿ ಪೇಜಾವರ ಶ್ರೀ

Upayuktha
0



ಉಡುಪಿ: ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ ಜಗದ್ಗುರು ಶ್ರೀರಾಮಾನುಜಾಚಾರ್ಯರ ಜನ್ಮಸಹಸ್ರಾಬ್ಧ ಪ್ರಯುಕ್ತ ಬಿಹಾರದ ಬಕ್ಸರ್ ನಲ್ಲಿ ಶ್ರೀ ದೇವಭೂಮಿ ವಾಮನಾಶ್ರಮದಲ್ಲಿ ನಡೆದ ಅಂತಾರಾಷ್ಟ್ರೀಯ ಧರ್ಮ ಸಮ್ಮೇಳನದಲ್ಲಿ ಶ್ರೀಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುವಾರ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಧರ್ಮಸಂದೇಶ ನೀಡಿದರು.


ಶ್ರೀ ಜೀಯರ್ ಸ್ವಾಮೀಜಿ, ಶ್ರೀ ಅಯೋಧ್ಯಾನಾಥ ಸ್ವಾಮೀಜಿ, ಶ್ರೀಧರಾಚಾರ್ಯ ಸ್ವಾಮೀಜಿ ಮೊದಲಾದವರ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ದೇಶಾದ್ಯಂತದಿಂದ ಹಾಗೂ ವಿದೇಶಗಳಿಂದಲೂ ನೂರಾರು ಸಾಧು ಸಂತರು ಮಠಾಧಿಪತಿಗಳು, ಧಾರ್ಮಿಕ ಮುಖಂಡರು ಭಾಗವಹಿಸಿ ಧರ್ಮ ಚಿಂತನ- ಮಂಥನ ನಡೆಸಿದರು. ಲೋಕಕಲ್ಯಾಣಾರ್ಥ ಲಕ್ಷ್ಮೀನಾರಾಯಣ ಮಹಾಯಜ್ಞವೂ ವೈಭವದಿಂದ ನಡೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top