ಅಗಲಿದ ಗೃಹರಕ್ಷಕ ಸಂತೋಷ್ ಕಟೀಲ್‌ಗೆ ಸಹಾಯಧನ

Upayuktha
0

ಸಂತೋಷ್ ಅವರ ಸಾವು ತುಂಬಲಾರದ ನಷ್ಟ: ಡಾ. ಚೂಂತಾರು


ಮಂಗಳೂರು: ದಿನಾಂಕ 17-11-2021 ರಂದು ಕಿನ್ನಿಗೋಳಿ ಸಮೀಪ ಸಂಜೆ 4:30ಗೆ ಮಕ್ಕಳಿಗೆ ಕಣಜದ ಹುಳು ಕಡಿಯುವಾಗ ತನ್ನ ಪ್ರಾಣದ ಹಂಗನ್ನು ಲೆಕ್ಕಿಸದೆ ಮಕ್ಕಳನ್ನು ರಕ್ಷಿಸಿ ತನ್ನ ಪ್ರಾಣ ಕಳೆದುಕೊಂಡ ಮಂಗಳೂರು ಘಟಕದ ಗೃಹರಕ್ಷಕ ಶ್ರೀ ಸಂತೋಷ್ ಕುಮಾರ್ ಕಟೀಲ್ (ಮೆ.ಸಂ 30) ಅವರಿಗೆ ಗೃಹರಕ್ಷಕದಳದ ಕ್ಷೇಮಾಭಿವೃದ್ಧಿ ನಿಧಿಯಿಂದ ಮಂಜೂರಾದ ರೂಪಾಯಿ ಹತ್ತು ಸಾವಿರ ರೂಪಾಯಿಯನ್ನು ಮೃತ ಸಂತೋಷ್ ಅವರ ತಾಯಿ ಶ್ರೀಮತಿ ಲಕ್ಷ್ಮಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ದಿನಾಂಕ 02-02-2022ನೇ ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ, ಗೃಹರಕ್ಷಕರಾದ ದಿವಾಕರ್, ದುಷ್ಯಂತ್, ಸುಲೋಚನ, ಜಯಲಕ್ಷ್ಮಿ, ಜ್ಞಾನೇಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಅವರು, ಸಂತೋಷ್ ಅವರು ಒಬ್ಬ ಪ್ರಾಮಾಣಿಕ, ನಿಷ್ಠಾವಂತ ಮತ್ತು ಕಠಿಣ ಪರಿಶ್ರಮ ಮಾದರಿ ಗೃಹರಕ್ಷಕನಾಗಿದ್ದು, ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ತನ್ನ ಪ್ರಾಣ ಕಳೆದುಕೊಂಡು ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಅವರ ಸಾವಿನಿಂದ ಗೃಹರಕ್ಷಕ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಇಂತಹ ನಿಷ್ಕಾಮ ಗೃಹರಕ್ಷಕರೇ ದೇಶದ ನಿಜವಾದ ಆಸ್ತಿ ಎಂದು ಅಭಿಪ್ರಾಯ ಪಟ್ಟರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top