ಮೈಸೂರಿನಲ್ಲಿ ಯಕ್ಷ ಸಂಭ್ರಮ 2022; ಕೃತಿಗಳ ಬಿಡುಗಡೆ, 'ಭಕ್ತ ಸುಧನ್ವ' ಪ್ರದರ್ಶನ

Upayuktha
0

ಮೈಸೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಆಯೋಜಿಸಿರುವ, ಕನ್ನಡ ಸಾಹಿತ್ಯ ಕಲಾಕೂಟ ಮೈಸೂರು ಇವರ ಸಹಯೋಗದಲ್ಲಿ ನಡೆದ "ಯಕ್ಷ ಸಂಭ್ರಮ-2022" ಕಾರ್ಯಕ್ರಮ ಶನಿವಾರ (ಫೆ.26) ಮೈಸೂರಿನ ಕಲಾಮಂದಿರದ ಆವರಣದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಯಕ್ಷಗಾನ ಕವಿಗಳ ಚಿತ್ರಕಾವ್ಯ ಮತ್ತು ಶ್ರೀ ಚಿಕ್ಕಚೌಡಯ್ಯ ಅವರ ಸಂಪಾದಿತ ಕೃತಿ ಮೂಡಲಪಾಯ ಯಕ್ಷಗಾನ ಪ್ರಸಂಗ ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು.


ಶೂರ್ಪನಖಾ ನಾಸಾಭಂಗ ಯಕ್ಷಗಾನ ತಾಳಮದ್ದಲೆಯ ಜೊತೆಗೆ ಬೆಂಗಳೂರಿನ ಕರ್ನಾಟಕ ಮಹಿಳಾ ಯಕ್ಷಗಾನ ತಂಡದವರಿಂದ "ಭಕ್ತ ಸುಧನ್ವ" ಯಕ್ಷಗಾನ ಕಾರ್ಯಕ್ರಮ ನಡೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
To Top