ಗೋವಾ ಚುನಾವಣೆ: ಮತದಾನದ ಬಳಿಕ ತಂದೆಯ ಹಾದಿಯಲ್ಲೇ ಸಾಗುವೆ ಎಂದ ಉತ್ಪಲ್‌ ಪರೀಕರ್

Upayuktha
0

ಪಣಜಿ: ಬಿಜೆಪಿ ಟಿಕೇಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಡಾತಯವೆದ್ದು ಬಿಜೆಪಿ ವಿರುದ್ಧ ಪಣಜಿ ಕ್ಷೇತ್ರದಲ್ಲಿ ಅಖಾಡಕ್ಕಿಳಿದಿರುವ ದಿ. ಮನೋಹರ್ ಪರೀಕರ್ ಪುತ್ರ ಉತ್ಪಲ್ ಪರೀಕರ್ ಸೋಮವಾರ ಪಣಜಿ ಕ್ಷೇತ್ರದಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.


ತಮ್ಮ ಮತದಾನದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ನಾನು ಇಂದು ಚುನಾವಣೆಗೆ ಸ್ಫರ್ಧಿಸಿದ್ದರೂ ಕೂಡ ನನ್ನ ತಂದೆಯ ನೆನಪಾಗುತ್ತದೆ. ನಾನು ಅವರ ಹಾದಿಯಲ್ಲೇ ಸಾಗುತ್ತೇನೆ ಎಂದು ಹೇಳುತ್ತ ಉತ್ಪಲ್ ಪರೀಕರ್  ಬಾವುಕರಾದರು.


ಇಂದು ನಾನು ಮಾತನಾಡುವ ಅವಧಿ ಮುಗಿಸಿದೆ, ಇಂದು ಪಣಜಿ ಜನತೆ ಮಾತನಾಡಲಿದ್ದಾರೆ. ಜನತೆ ಎಲ್ಲರೂ ಖಡ್ಡಾಯವಾಗಿ ಮತದಾನ ಮಾಡಬೇಕು. ನನಗೆ ಜನತೆಯ ಮೇಲೆ ಪೂರ್ಣ ವಿಶ್ವಾಸವಿದೆ ಎಂದು ಉತ್ಪಲ್ ಪರೀಕರ್ ನುಡಿದರು.


ಯಾವಾಗ ಬದಲಾವಣೆಯಾಗುತ್ತದೆಯೋ ಆಗ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿರುವುದು ಕಾಣಬಹುದು. ಪಣಜಿಯಲ್ಲಿ ಪ್ರಸಕ್ತ ಬಾರಿ ಜನರು ಆಸಕ್ತಿಯಿಂದ ಬಂದು ಮತದಾನ ಮಾಡುತ್ತಿದ್ದಾರೆ, ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಇತರ ಉಮೇದುವಾರರು ಅಪಪ್ರಚಾರ ಮಾಡುತ್ತಾರೆ. ಆದರೆ ನಾನು ಹಾಗೆ ಮಾಡುವುದಿಲ್ಲ. ಒಂದು ಸಕಾರಾತ್ಮಕ ದೃಷ್ಠಿಕೋನವನ್ನಿಟ್ಟುಕೊಂಡು ಪಣಜಿ ಕ್ಷೇತ್ರದಲ್ಲಿ ಸ್ಫರ್ಧಿಸಿದ್ದೇನೆ. ನನಗೆ ಪಣಜಿ ಮತದಾರರು ಸಾತ್ ನೀಡಲಿದ್ದಾರೆ. ತಂದೆ ಮನೋಹರ್ ಪರೀಕರ್ ಮಾರ್ಗದಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉತ್ಪಲ್ ಪರೀಕರ್ ವಿಶ್ವಾಸ ವ್ಯಕ್ತಪಡಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top