ಸತ್ಯ ನುಡಿದು ಯಾಕೆ ನಾನು ನಿಮ್ಮ ನಡುವೆ ಕೆಡಲಿ/
ನಿತ್ಯ ಸುಳ್ಳ ಹೇಳಿ ಹೇಗೆ ನಾಡಿನಲ್ಲಿ ಇರಲಿ/
ಪೀಠ ಪೇಟ ಕೂಟದೊಲವು ಕೆಡಿಸಿತೆದೆಯ ಕೊಳವ/
ತೋಟ ತುಂಬಾ ಹಾತೆ ಕೀಟ
ಬೆಳೆಯ ಬಿಡದು ಬುಡವ/
ನಗುವ ನಡುವೆ ಬದುಕ ಬೇಕು
ನಗುವೆ ಆಗಿದೆ ವಿಷಮ/
ಜಗದ ಕಣ್ಣೆ ಕುರುಡು ಕುಸಿದು ಹೋಗಿ ನೀತಿ ನಿಯಮ/
ನಾಕ ನರಕ ಮರೆತ ಜನಕೆ ಧರೆಯ ಸುಖವೆ ಸೆಳೆತ/
ಸಾಕು ಅನುವ ಗುಣವೆ ಇರದೆ
ಕೊಡದಿ ಪಾಪ ಮೊರೆತ/
ದೊರೆಯು ಕರೆಯುವಾಗ ಹೋಗಬೇಕು ಸಮಯ ಇರದು/
ದೊರೆತ ಸಮಯ ಬೆರೆತು ಬಾಳು ಮತ್ತೆ ನೋವು ಬರದು/
- ಕಾ.ವೀ.ಕೃಷ್ಣದಾಸ್, ಮಂಗಳೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ