ಕವನ: ಸತ್ಯ ನುಡಿದು...

Upayuktha
0

ಸತ್ಯ ನುಡಿದು ಯಾಕೆ ನಾನು ನಿಮ್ಮ ನಡುವೆ ಕೆಡಲಿ/

ನಿತ್ಯ ಸುಳ್ಳ ಹೇಳಿ ಹೇಗೆ ನಾಡಿನಲ್ಲಿ ಇರಲಿ/


ಪೀಠ ಪೇಟ ಕೂಟದೊಲವು ಕೆಡಿಸಿತೆದೆಯ ಕೊಳವ/

ತೋಟ ತುಂಬಾ ಹಾತೆ ಕೀಟ

ಬೆಳೆಯ ಬಿಡದು ಬುಡವ/


ನಗುವ ನಡುವೆ ಬದುಕ ಬೇಕು

ನಗುವೆ ಆಗಿದೆ ವಿಷಮ/

ಜಗದ ಕಣ್ಣೆ ಕುರುಡು ಕುಸಿದು ಹೋಗಿ ನೀತಿ ನಿಯಮ/


ನಾಕ ನರಕ ಮರೆತ ಜನಕೆ ಧರೆಯ ಸುಖವೆ ಸೆಳೆತ/

ಸಾಕು ಅನುವ ಗುಣವೆ ಇರದೆ

ಕೊಡದಿ ಪಾಪ ಮೊರೆತ/


ದೊರೆಯು ಕರೆಯುವಾಗ ಹೋಗಬೇಕು ಸಮಯ ಇರದು/

ದೊರೆತ ಸಮಯ ಬೆರೆತು ಬಾಳು ಮತ್ತೆ ನೋವು ಬರದು/

- ಕಾ.ವೀ.ಕೃಷ್ಣದಾಸ್, ಮಂಗಳೂರು

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top