ಪುತ್ತೂರು ಜ.20: 14 ವರ್ಷದವರೆಗೆ ಶಿಕ್ಷಣವನ್ನು ಕಲಿತುಕೊಂಡು ಬಂದರೂ, ಶಿಕ್ಷಣ ಮಾತ್ರ ಅಲ್ಲದೇ ಜೀವನ ಮೌಲ್ಯಗಳ ಬಗ್ಗೆ ಅಗಾಧವಾದ ವಿಷಯಗಳನ್ನು ಕಲಿತುಕೊಳ್ಳಬೇಕು. ಜೀವನಕ್ಕೆ ಶಿಕ್ಷಣವು ಮುಖ್ಯ ಅದಲ್ಲದೆ ಅದರ ಜೊತೆಗೆ ನೈತಿಕ ಮೌಲ್ಯಗಳ ಬಗ್ಗೆ ಜ್ಞಾನ ಇರಬೇಕು ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ ಹೇಳಿದರು.
ಇವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕವು ಆಯೋಜಿಸಿರುವ ತೃತೀಯ ಬಿಕಾಂ ವಿದ್ಯಾರ್ಥಿಗಳ ವಿಷಯ ಮಂಡನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ, ಕೌಶಲ್ಯ ಮತ್ತು ಮೌಲ್ಯಗಳನ್ನು ಕಲಿತಾಗ ಯಶಸ್ಸುಗಳಿಸಲು ಸಾಧ್ಯ. ಶಿಕ್ಷಣದ ಜೊತೆಗೆ ಸಾಮಾನ್ಯಜ್ಞಾನ ಕೂಡ ಇರಬೇಕು. ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಪರಿಶ್ರಮ ತುಂಬಾ ಮುಖ್ಯವಾಗಿದೆ. ಅದರ ಜೊತೆಗೆ ಬುದ್ಧಿವಂತಿಕೆಯೂ ಇರಬೇಕು. ಯಾವಾಗ ಶ್ರಮ ಪಟ್ಟು ಪ್ರಾಮಾಣಿಕತೆಯಿಂದ ಪರೀಕ್ಷೆಗಳನ್ನು ಬರಿಯುತ್ತೀರಿ ಆಗ ಜೀವನಕ್ಕೆ ಯಶಸ್ಸು ದೊರೆಯುತ್ತದೆ. ಜೀವನದಲ್ಲಿ ಹಾರ್ಡ್ ವರ್ಕ್, ಸ್ಮಾರ್ಟ್ ವರ್ಕ್, ಪ್ರಾಮಾಣಿಕತೆ, ಆತ್ಮಸ್ಥೆರ್ಯ ಈ ನಾಲ್ಕು ಅಂಶಗಳು ಬಹಳ ಮುಖ್ಯವಾಗಿದ್ದು ಎಂದು ನುಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಜ್ಯೋತಿ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ತೃತೀಯ ಬಿ.ಕಾಂ ವಿದ್ಯಾರ್ಥಿಗಳಾದ ಮೈಥಿಲಿ ಎಸ್ ರಾವ್ ದೇಶ ಪ್ರೇಮ ಮತ್ತು ರಾಷ್ಟ್ರ ಶಕ್ತಿ, ಸಾಕ್ಷಿತಾ ವಿ ಮೌಲ್ಯಗಳ ಆಧಾರ, ಸಂಪತ್ಗೌಡ ಪ್ರತಿಯೊಬ್ಬರಲ್ಲೂ ಯಶಸ್ಸು - ಗೆಲುವು ಹಾಗೂ ಸಿದ್ದಣ್ಣ ಗೌಡ ಪೂರ್ಣ ವಿರಾಮದ ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಗೆಲುವು ಹೇಗೆ ಸಾಧ್ಯ ಮತ್ತು ರಾಷ್ಟ್ರ ಭಕ್ತಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಮಂಜುಳಾ, ಅಂಕಿತ ಅರುಣ್ ಪ್ರಕಾಶ್, ವಿನಿತಾ ಉಪಸ್ಥಿತರಿದ್ದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿ ಅಂಕಿತಾ ಸ್ವಾಗತಿಸಿ, ಯಶಿತಾ ವಂದಿಸಿ, ಶುಭಾಶ್ರಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ