ಪುತ್ತೂರು: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ನ ಅಮೃತ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಲಕ್ಕಿ ಡ್ರಾ ಮತ್ತು ಬಂಪರ್ ಡ್ರಾದ ಮೂರನೇ ಹಂತದ ಡ್ರಾ ಜನವರಿ 25ರಂದು ಪುತ್ತೂರಿನ ಮುಳಿಯ ಜ್ಯುವೆಲ್ಸ್ ನಲ್ಲಿ ನಡೆಯಿತು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಬಂಪರ್ ಬಹುಮಾನ ವಿಜೇತರನ್ನು ಲಾಟರಿ ಮಾದರಿಯಲ್ಲಿ ಹಾಗೂ ಇತರ ಅದೃಷ್ಟಶಾಲಿಗಳ ಆಯ್ಕೆಯನ್ನು ಚೀಟಿ ಎತ್ತುವುದರ ಮೂಲಕ ನಡೆಸಿಕೊಟ್ಟರು.
ಬಂಪರ್ ಬಹುಮಾನವಾಗಿ ಮಾರುತಿ ಎಸ್ಪ್ರೆಸ್ಸೋ ಕಾರನ್ನು ಬೆಳ್ತಂಗಡಿ ಶೋರೂಂನ ಗ್ರಾಹಕಿ ಪಲ್ಲವಿ ರಾಜ್ ಅವರು ಪಡೆದುಕೊಂಡರು.
ಮುಳಿಯ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಚಿನ್ನಾಭರಣ ಖರೀದಿಸಿದ್ದ ಗ್ರಾಹಕರಿಂದ ಒಟ್ಟು 1.50 ಲಕ್ಷ ಕೂಪನ್ಗಳು ಬಂದಿದ್ದು, ಇದರಲ್ಲಿ ಅದೃಷ್ಟಶಾಲಿ ಗ್ರಾಹಕರ ಆಯ್ಕೆ ಮಾಡಲಾಯಿತು.
ಡ್ರಾ ನೆರವೇರಿಸಿಕೊಟ್ಟ ಕಿಶೋರ್ ಕುಮಾರ್ ಕೊಡ್ಗಿ ಅವರು ಮಾತನಾಡಿ, ಸಮಾಜದ ವ್ಯವಸ್ಥೆಯಲ್ಲಿ ಬೆವರು ಸುರಿಸದೆ ಅಥವಾ ಕಷ್ಟಪಡದೆ ಬಹಳ ಬೇಗ ಹಣ ಆಗಬೇಕೆಂಬ ಆಸೆ ಇರುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ಮುಳಿಯ ಸಂಸ್ಥೆಯ ಸಹೋದರರು ತಮ್ಮ ಶ್ರಮ ವಹಿಸಿ ಗ್ರಾಹಕರಿಗೆ ಗುಣಮಟ್ಟದ ಚಿನ್ನಾಭರಣಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಅವರ ತಂದೆತಾಯಿಗಳಾದ ಶ್ಯಾಮ್ ಭಟ್ ದಂಪತಿಗಳ ಆಶೀರ್ವಾದವಿದೆ. ಇದರ ಜತೆಗೆ ಗ್ರಾಹಕರ ನಂಬಿಕೆ ಸರಿಯಾಗಿ ಸೇವೆ ನೀಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಇಂತಹ ಸಂಸ್ಥೆ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಬೆಂಗಳೂರಿನಲ್ಲಿ ಗ್ರಾಹಕರ ಮನ ಗೆದ್ದಿದೆ ಎಂದರು. ಮುಂದೆ ಕುಂದಾಪುರದಲ್ಲೂ ಸಂಸ್ಥೆಯ ಶಾಖೆ ತೆರೆಯುವಂತೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಳಿಯ ಶ್ಯಾಮ್ ಭಟ್, ಹಿರಿಯರಾದ ಸುಲೋಚನಾ ಉಪಸ್ಥಿತರಿದ್ದರು. ಮಳಿಗೆಯ ಮ್ಯಾನೇಜರ್ ರಾಮ್ದೇವ್ ಸ್ವಾಗತಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ಸ್ವಾಗತಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಚಿನ್ಮಯಿ ಇ. ಭಟ್ ಅವರಿಂದ ಗಾಯನ ಕಾರ್ಯಕ್ರಮವಿತ್ತು. ವೇಣು ಶರ್ಮ ಅವರು ಸಂಸ್ಥೆಯ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿದರು,
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ