ಕೃಷಿ ರಂಗ: ಶುಲ್ಕಾಧಾರಿತ ಫೈಬರ್ ದೋಟಿಗೊಯ್ಲು / ಸಿಂಪಡಣೆ ತರಬೇತಿ, ಈಗಿನ ಅಗತ್ಯ

Upayuktha
0

ಅಡಿಕೆ ಬೆಳೆಯ ಪ್ರದೇಶ ಬಹು ವಿಸ್ತಾರ ಆಗಿದೆ. ಹಲವು ಕೃಷಿಕರು ಸ್ವತಃ ದೋಟಿ ಬಳಸಿ ಕೊಯ್ಲು ಸಿಂಪಡಣೆ ಮಾಡಲಾರರು. ಕೆಲವರು ತಮ್ಮ / ತಮ್ಮೂರ ಕಾರ್ಮಿಕರಿಗೆ ಈ ’ದೋಟಿ ಮರಗೆಲಸ’ ಕಲಿಸಲು ಉತ್ಸುಕರಾದವರಿದ್ದಾರೆ.


ನಮ್ಮ ಯಾವುದಾದರೂ ಸೊಸೈಟಿ, ರೈತೋತ್ಪಾದಕ ಸಂಘಗಳು, ರುಡ್ ಸೆಟಿ , ಕೃಷಿ ಇಲಾಖೆಯೂ ಕೂಡಾ' ARYA' ಯೋಜನೆಯಡಿ (Attracting and Retaining Youth in Agriculture) ಈ ತರಬೇತಿ ಏರ್ಪಡಿಸಬಹುದು. ಅದಕ್ಕೆ ಕಾಲಕ್ಕನುಗುಣವಾದ ಶುಲ್ಕ ವಿಧಿಸಿದರೂ ಅಡ್ಡಿಯಿಲ್ಲ.


ಕೃಷಿಕರಿಗೆ ಕೊಯ್ಲು ಸಿಂಪಡಣೆಗೆ ಸುಗಮ ವ್ಯವಸ್ಥೆ. ಸಾವಿರಾರು ಯುವಕರಿಗೆ ಹುಬ್ಬೇರಿಸುವ ವರಮಾನದ ಕಸುಬು. ನಗರ ವಲಸೆಗೆ ಕಡಿವಾಣ. 


ಹೀಗೊಂದು ಚಟುವಟಿಕೆ ತುಂಬ ಕೃಷಿಸ್ನೇಹಿ ಆಗಬಹುದು. ಯಾವುದಾದರೂ ಸಂಸ್ಥೆ ಹೆಜ್ಜೆ ಮುಂದೆ ಇಡಬೇಕಿದೆ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top