|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಸ ಋಷಿಗೆ ನಮನ

ರಸ ಋಷಿಗೆ ನಮನ

ವಿಶ್ವ ಮಾನವ ದಿನದ ಅಂಗವಾಗಿ



ಕುಪ್ಪಳಿಯ ವರಕುವರ ಪುಟ್ಟಪ್ಪ ವರಕವಿಯು 

ಚಪ್ಪರಿಸಿ ಮೆದ್ದಿಹರು ಹಲಬಗೆಯ ಕಾವ್ಯ 

ಕೊಪ್ಪರಿಗೆ ಹೊನ್ನೆಲ್ಲ ಬರಿಶೂನ್ಯ ಹೋಲಿಸಲು

ಒಪ್ಪಯಿಸಿ ಹೊಳೆದಿರಲು ಸಾಹಿತ್ಯ ಸೂರ್ಯ ||೧||


ಹುಟ್ಟಿರುವ ಕಾವ್ಯಗಳು ತಟ್ಟಿರಲು ಎದೆಕದವ 



ಮುಟ್ಟಿಹುದು ಜನಮನದ ಭಾವನೆಯ ಗಂಧ 

ಗಟ್ಟಿ ಕಾಳುಗಳೆಲ್ಲ ಸೇರಿಹುದು ಕಣಜದಲಿ 

ಬೆಟ್ಟದಾ ಅಚಲತೆಯ ಹೊಂದಿರುವ ಬಂಧ||೨||


ಯುಗದಕವಿ ಜಗದಕವಿ ಆಧುನಿಕ ವಾಲ್ಮೀಕಿ 

ಜಗದಗಲ ಪಸರಿಸಿದ ಮಾನವತೆ ಸಾರ 

ಪ್ರಗತಿಪರ ಚಿಂತಕರು ಸಂತಕವಿ ಎಂದೆನಿಸಿ  

ಭಗವಂತನನು ಕಂಡು ಇಳೆಯಲ್ಲಿ ನೇರ ||೩||


ಮನುಜಮತ ವಿಶ್ವಪಥ ಸರ್ವೋದಯದ ಮಂತ್ರ 

ದನಿಯಾಗೆ ದೀನರಿಗೆ ಮಿಡಿದಿರುವ ಹೃದಯ 

ಜನತೆಯೂ ಜೀವನವು ಸಾಹಿತ್ಯ ಚಕ್ಷುಗಳು 

ಸನಿಹದೊಡನಾಟದಾ ಅಭ್ಯುದಯ ಧ್ಯೇಯ ||೪||


ನೆಲದಲ್ಲಿ ಜಲದಲ್ಲಿ ಹಸಿರಲ್ಲಿ ಉಸಿರಲ್ಲಿ 

ಬಲವಿಹುದು ಸಂಪನ್ನ ಕಾವ್ಯಕೃಷಿಯಲ್ಲಿ 

ಒಲವಿರಲು ಸಾಧನೆಗೆ ತೊಡಕಾಗದಾ ಶಕ್ತಿ 

ಕುಲಗೋತ್ರವೇತಕ್ಕೆ ವೈಷಮ್ಯ ತಳ್ಳಿ||೫||


ರಸಋಷಿಯ ರಸಿಕತೆಯು ಒಡಲನ್ನು ಛೇದಿಸಲು 

ಜಸವಿಹುದು ಮಲೆಗಳಲಿ ಮದುಮಗಳ ಜೋಡಿ 

ರಸಹೀರೆ ದುಂಬಿಗಳು ಸುಮರಾಜಿ ಚೆಲುವಿನಲಿ

ಹೊಸಬಗೆಯ ಚೇತನವ ಬೆಸೆದಿರುವ ಮೋಡಿ ||೬||


ರವಿವದನವೇ ಶಿವಸದನವೆಂದ ಮೇರುಕವಿ 

ಸವಿನಾಡ ಗೀತೆಯಾ ಮೃಷ್ಟಾನ್ನವುಣಿಸಿ

ಭವಿತವ್ಯ ಮರೆಯದಾ ಉಡುಗೊರೆಯನಿತ್ತಿಹರು 

ಭವಬಂಧ ಅನುಬಂಧ ಅನುಭಾವ ಹರಿಸಿ ||೭||


ಸಾಹಿತ್ಯ- ಶ್ರೀಮತಿ ಲಕ್ಷ್ಮೀ ವಿ ಭಟ್. ಕೆನರಾ ಹೈಸ್ಕೂಲ್ ಉರ್ವ. 

ಸಂಗೀತ - ಶ್ರೀಮತಿ ರಚನಾ ಆರ್ ಕಾಮತ್ , ಕೆನರಾ ಹೈಸ್ಕೂಲ್. ಸಂಗೀತ ಟೀಚರ್


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم