|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಭಾವಶರಧಿ' ಕವನ ಸಂಕಲನ ಬಿಡುಗಡೆ

'ಭಾವಶರಧಿ' ಕವನ ಸಂಕಲನ ಬಿಡುಗಡೆ



ಕುಂಬಳೆ: ಕಾಸರಗೋಡಿನ ಭರವಸೆಯ ಲೇಖಕಿ ಶ್ರೀಮತಿ ಪ್ರಮೀಳಾ ಚುಳ್ಳಿಕ್ಕಾನ ಅವರ "ಭಾವಶರಧಿ" ಕವನ ಸಂಕಲನದ ಬಿಡುಗಡೆ ಸಮಾರಂಭವು ಶನಿವಾರ (ಡಿ.25) ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣ "ನಾರಾಯಣೀಯಂ"ನಲ್ಲಿ ನೆರವೇರಿತು.


ಚುಳ್ಳಿಕ್ಕಾನ ಶ್ರೀಕೃಷ್ಣ ಭಟ್ ಅವರ "ನಿಸರ್ಗ" ಪ್ರಕಾಶನದ ಮೂಲಕ ಪ್ರಕಟವಾದ 'ಭಾವಶರಧಿ'  ವೈವಿಧ್ಯಮಯ 102 ಕವನಗಳನ್ನು ಒಳಗೊಂಡಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಕುಮಾರಿ ಪೃಥ್ವಿ ಚುಳ್ಳಿಕ್ಕಾನ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಖ್ಯಾತ ಸಾಹಿತಿಗಳು, ಕೃಷಿ ಸಂಶೋಧಕರೂ ಆದ ಶ್ರೀಯುತ ಬದನಾಜೆ ಶಂಕರ ಭಟ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.


"ಸಹಜ ಭಾವ ಸ್ಪಂದನೆಯಿಂದ ಮನದಲ್ಲಿ ಮೂಡಿದ ಭಾವಗಳೇ ಅಕ್ಷರರೂಪವಾಗಿ 'ಭಾವಶರಧಿ' ಯಲ್ಲಿ ಒಂದಾಗಿ ಬಿಟ್ಟಿವೆ" ಎಂದು ಕವನಸಂಕಲನವನ್ನು ಬಿಡುಗಡೆಗೊಳಿಸಿದ ಕಾಸರಗೋಡಿನ ಹಿರಿಯ ಲೇಖಕರಾದ ಡಾ. ರಮಾನಂದ ಬನಾರಿ ನುಡಿದರು.  


ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಸರಗೋಡು ಸರಕಾರಿ ಪದವಿ ಕಾಲೇಜು ಕಾಸರಗೋಡಿನ ನಿವೃತ್ತ ಕನ್ನಡ ಪ್ರಾಧ್ಯಾಪಿಕೆ ಡಾ. ಯು. ಮಹೇಶ್ವರಿ, ನಿವೃತ್ತ ಕನ್ನಡ ಅಧ್ಯಾಪಕರು ಹಾಗೂ ಖ್ಯಾತ ಸಾಹಿತಿ, ಶಿಕ್ಷಣ ತಜ್ಞರೂ ಆಗಿರುವ ಶ್ರೀ ವಿ.ಬಿ. ಕುಳಮರ್ವ ಅವರು ಲೇಖಕಿಗೆ ಶುಭಹಾರೈಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕರಾದ ಶ್ರೀಮತಿ ಪ್ರೇಮಾ ಕೆ.ಭಟ್ ತೊಟ್ಟೆತ್ತೋಡಿ  ಸಭೆಯ ಅಧ್ಯಕ್ಷತೆಯನ್ನು ವಹಿಸಿ


"ಲೇಖಕಿ ಪ್ರಮೀಳಾ ಅವರ ಇನ್ನಷ್ಟು ಕೃತಿಗಳು ಮೂಡಿಬಂದು ಜನಮಾನಸ ತಲುಪುವಂತಾಗಲಿ" ಎಂದು ಹರಸಿದರು.


"ಭಾವಶರಧಿ" ಕೃತಿಯ ಅವಲೋಕನ ನಡೆಸಿದ ಅಧ್ಯಾಪಕರಾದ ಶ್ರೀ ರಾಜಾರಾಮ ರಾವ್.ಟಿ ಅವರು ಕವನಸಂಕಲನದ ಸಾರವನ್ನು ಸಭಿಕರ ಮುಂದೆ ತೆರೆದಿಟ್ಟರು


ಲೇಖಕಿ ಪ್ರಮೀಳಾ ಚುಳ್ಳಿಕ್ಕಾನ ಅವರು ಮನದಾಳದ ಮಾತುಗಳ ಮೂಲಕ ತಮ್ಮ ಸಾಹಿತ್ಯ ರಚನೆಗೆ ಹಾಗೂ ಕೃತಿ ಬಿಡುಗಡೆಗೆ ಪ್ರೋತ್ಸಾಹ ನೀಡಿದವರನ್ನು ಸ್ಮರಿಸುತ್ತಾ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.


ಮಂಗಳೂರು ಕೆನರಾ ಪ್ರೌಢಶಾಲಾ ಅಧ್ಯಾಪಿಕೆ ಲಕ್ಷ್ಮೀ ವಿ. ಭಟ್ ಅವರ ಧನ್ಯವಾದ ಸಮರ್ಪಣೆ ಹಾಗೂ ನವಜೀವನ ಹೈಯರ್ ಸೆಕೆಂಡರಿ ಶಾಲಾ ಅಧ್ಯಾಪಿಕೆ  ಸುಶೀಲಾ ಪದ್ಯಾಣ ಇವರ ಮೋಹಕ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.


ಪ್ರಸನ್ನಾ ಸಿ.ಯಸ್.ಭಟ್, ರೇಷ್ಮಾ ಕಜೆ ಹಾಗೂ ಇತರ ಗಾಯಕರ 'ಭಾವಶರಧಿ'ಯ ಭಾವಯಾನ ಸಭಿಕರ ಮನರಂಜಿಸಿತು. ನಂತರ ಆಹ್ವಾನಿತ ಕವಿಗಳಿಂದ ಕವಿಗೋಷ್ಠಿ ನಡೆಯಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم