|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಕನ್ನಡದ ಕಹಳೆಯು ಮೊಳಗಲಿ

ಕವನ: ಕನ್ನಡದ ಕಹಳೆಯು ಮೊಳಗಲಿ



ಕಣ್ಮನಗಳಿಗೆ ತಂಪನು ಎರೆಯುವ,

ನಮ್ಮೀ ಹೃದಯದಲ್ಲಿ ನಾಡಿನ

ನಾದಸ್ವರವ ನುಡಿಸುವ.

ಅಭಿಮಾನದ ಭಾಷೆಯಿದು,

ಹೆಮ್ಮೆಯ ನಾಡಿದು.


ನಾಡಿನೆಲ್ಲೆಡೆ ಡಿಂಡಿಮವ ಬಾರಿಸುತಾ,

ಕನ್ನಡ ನುಡಿಯ ಸೊಬಗನ್ನು ಪಸರಿಸುತ.

ಸೌಹಾರ್ದತೆಯ ಮೆರೆಯುವ ಮಾಣಿಕ್ಯಧಾರೆಯಲಿ,

ಜ್ಞಾನ ಪೀಠದ ರತ್ನ ನಿನ್ನ ಮುಕುಟದಲ್ಲಿ.


ಬಾದಾಮಿಯ ಪರಂಪರೆಯಿಹುದು ಈ ನೆಲದಲಿ,

ಮೈಸೂರಿನ ವೈಭವದ ಸೊಗಸಿದೆ ಬೀಡಲಿ.

ಹಂಪಿಯ ಸ್ವರ್ಣಯುಗ ಮತ್ತೆ ಬಿಗಡಾಯಿಸಲಿ,

ಕರಾವಳಿಯ ಯಕ್ಷಗಾನದ ಸೊಬಗಲಿ.


ಜೀವನದಿ ಕಾವೇರಿ ಹರಿಯುವ ಸೊಗಸು,

ಜೋಗದ ಸಿರಿಯ ಈ ಸೊಬಗು.

ಹಸಿರು ವನಸಿರಿಯ ಬೀಡು,

ನಮ್ಮೆಲ್ಲರ ಹೆಮ್ಮೆಯ ಕರುನಾಡು.


ಕನ್ನಡವೇ ಎಲ್ಲಾ... ಕನ್ನಡವಿಲ್ಲದೆ ಬೇರೇನೂ ಇಲ್ಲ,

ರಾಜ್ಯೋತ್ಸವದ ದಿನವಾದ್ರೂ ಕನ್ನಡ ಬಳಸೋಣ ಎಲ್ಲಾ.

ಶಾಂತಿ -ಪ್ರೇಮ -ಸಹನೆಯ ನಾಡಿದು,

ಎಲ್ಲರ ಮನದಲ್ಲಿ ನಿರ್ಮಲತೆಯನ್ನು ನೀಡಿದ ಬೀಡಿದು.


ಮೊಳಗಲಿ ಕನ್ನಡದ ಕಹಳೆಯು,

ಉಸಿರಾಗಲಿ ಕನ್ನಡ ಭಾಷೆಯೂ.

ಕನ್ನಡಕ್ಕಾಗಿ ನನ್ನ ಸಾಹಿತ್ಯ ಸೇವೆಯು,

ಕನ್ನಡಾಂಬೆಯ ಪಾದಕೆ ಕೋಟಿ ಕೋಟಿ ನಮನವು.


✍️ ನಾರಾಯಣ. ಕುಂಬ್ರ

ಲ್ಯಾಬ್ ಸಹಾಯಕರು, ರಸಾಯನ ಶಾಸ್ತ್ರ ವಿಭಾಗ,

ವಿವೇಕಾನಂದ ಕಾಲೇಜು, ನೆಹರು ನಗರ, ಪುತ್ತೂರು.

ದ. ಕ.574203.

ಮೊ.ನಂ.8073319717


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post