ಸಿಇಒ ಅವರಿಂದ ಕೊಂಬಾರು ಬಸ್ ನಿಲ್ದಾಣದಲ್ಲಿ ಪುಸ್ತಕದ ಗೂಡಿಗೆ ಚಾಲನೆ

Upayuktha
0

ಮಂಗಳೂರು: ವಿನೂತನ ಯೋಜನೆಯಾಗಿರುವ ಬಸ್ಸು ನಿಲ್ದಾಣದಲ್ಲಿಯೇ ಪುಸ್ತಕ ಅಥವಾ ದಿನ ಪತ್ರಿಕೆಗಳನ್ನು ಓದುವ ಪುಸ್ತಕದ ಗೂಡಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ನ.18ರ ಗುರುವಾರ ಕಡಬ ತಾಲೂಕಿನ ಕೊಂಬಾರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.


ಈ ವಿನೂತನ ಯೋಜನೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಅಲ್ಲಿನ ಬಸ್ ನಿಲ್ದಾಣಗಳಲ್ಲಿ ದೈನಂದಿನ ದಿನಪತ್ರಿಕೆಗಳು ಹಾಗೂ ಓದುಗರಿಗೆ ಅನುಕೂಲವಾಗುವ ಕೆಲವು ಉಪಯುಕ್ತ ಪುಸ್ತಕಗಳನ್ನು ಪುಸ್ತಕದ ಗೂಡಿನಲ್ಲಿ ಇರಿಸಲಾಗುವುದು.


ಬಸ್ ನಿಲ್ದಾಣಕ್ಕೆ ಬರುವ ಆಸಕ್ತ ಓದುಗರು ಬಸ್‍ಗಳಿಗಾಗಿ ಕಾಯುವ ಅವಧಿಯಲ್ಲಿ ಪುಸ್ತಕಗಳು ಅಥವಾ ದಿನಪತ್ರಿಕೆಗಳನ್ನು ಓದಿ, ಬಸ್ ಹತ್ತುವಾಗ ಪುನಃ ಅವುಗಳನ್ನು ಗೂಡಿನಲ್ಲಿ ಇರಿಸಬೇಕು. ಅದಕ್ಕೆಂದೆ ಗಾಜಿನ ಗೂಡೊಂದನ್ನು ಮಾಡಲಾಗಿದೆ. ಪಾರದರ್ಶಕ ಗೂಡಿನಲ್ಲಿ ಇಡಲಾದ ಪುಸ್ತಕಗಳು ಹಾಗೂ ಪತ್ರಿಕೆಗಳು ಸುಲಭವಾಗಿ ಓದುಗರಿಗೆ ಗೋಚರವಾಗುತ್ತವೆ.


ಕಡಬ ತಾಲೂಕು ತಾಲೂಕು ಪಂಚಾಯತ್‍ನ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ ಇಂದಾಜೆ, ಹಿರಿಯ ಪತ್ರಕರ್ತರ ಭಾಸ್ಕರ್ ರೈ, ಪುಷ್ಪರಾಜ್, ಕಡಬ ತಾಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್, ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು ಹಾಗೂ ಇತರೆ ಗಣ್ಯರು ಈ ಸಂದರ್ಭದಲ್ಲಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top