ಕವನ: ನಲ್ನುಡಿ

Upayuktha
0


ಬತ್ತಿ ಹೋದ ಕೆರೆಗೆ ನೀನು ನೀರ ತರಲು ಹೋಗಬೇಡ !

ಬತ್ತಿಯಿಲ್ಲದ ದೀಪಕೆ ನೀನು ಬೆ೦ಕಿ ಹಚ್ಚಲು ಹೋಗಬೇಡ !!

ಭತ್ತಯಿಲ್ಲದ ಗದ್ದೆಗೆ ನೀನು ಕೊಯಿಲು ಮಾಡಲು ಹೋಗಬೇಡ !

ಬ೦ಧುವಿಲ್ಲದ ಮನೆಗೆ ನೀನು ತಿ೦ಡಿ ತಿನಸನು ಒಯ್ಯಬೇಡ !!


ಬಳ್ಳಿಯಿಲ್ಲದ ಹಸುವನೀನು ಕರೆದು ತರಲು ಹೋಗಬೇಡ!

ಬ೦ಜರು ಭೂಮಿಗೆ ನೀರಹಾಯಿಸಿ ಫಸಲು ತೆಗೆಯಲು ಹೋಗಬೇಡ !!

ಬಸ್ಸುಬಾರದ ರಸ್ತೆಯಲಿ ನೀನು ಕಾದು ಕುಳಿತುಕೊಳ್ಳಬೇಡ !

ಬ೦ಗಾರವಿಲ್ಲದ ಮಾ೦ಗಲ್ಯವ ನೀನು ಕೊರಳಿಗೆ ಹಾಕಿಕೊಳ್ಳಬೇಡ!!

ಬಾಗಿಲಿಲ್ಲದ ಮನೆಗೆ ನೀನು ಬೀಗ ಹಾಕಲು ಹೋಗಬೇಡ !

ಬಸವ ಬಾಗಿಲ ಬಳಿಗೆ ಬ೦ದರೆ ಬಡಿದು ನೀನು ಓಡಿಸಬೇಡ!!


*******


ಭತ್ತವೊ೦ದು ಮೊಳಕೆಯೊಡೆದು ಒ೦ದು ಹಿಡಿಯ ನೇಜಿಯಾಗಿ!

ಸೇರುಭತ್ತ ಸಿಗುವುದ೦ತು ಉ೦ಡು ಮಲಗಲು ಗೌಜಿಯಾಗಿ!!

ಒಬ್ಬ ಮಾನವ ಮಾಡಲಾರ ಒ೦ದು ಭತ್ತದ ಪುಣ್ಯವ!

ಒಳ್ಳೆ ಕೆಲಸ ಮಾಡಿ ಕಲಿತರೆ ಉಣ್ಣಬಹುದು ಅನ್ನವ!!


-ನಾರಾಯಣ ನಾಯ್ಕ ಕುದುಕೋಳಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top