ಬತ್ತಿ ಹೋದ ಕೆರೆಗೆ ನೀನು ನೀರ ತರಲು ಹೋಗಬೇಡ !
ಬತ್ತಿಯಿಲ್ಲದ ದೀಪಕೆ ನೀನು ಬೆ೦ಕಿ ಹಚ್ಚಲು ಹೋಗಬೇಡ !!
ಭತ್ತಯಿಲ್ಲದ ಗದ್ದೆಗೆ ನೀನು ಕೊಯಿಲು ಮಾಡಲು ಹೋಗಬೇಡ !
ಬ೦ಧುವಿಲ್ಲದ ಮನೆಗೆ ನೀನು ತಿ೦ಡಿ ತಿನಸನು ಒಯ್ಯಬೇಡ !!
ಬಳ್ಳಿಯಿಲ್ಲದ ಹಸುವನೀನು ಕರೆದು ತರಲು ಹೋಗಬೇಡ!
ಬ೦ಜರು ಭೂಮಿಗೆ ನೀರಹಾಯಿಸಿ ಫಸಲು ತೆಗೆಯಲು ಹೋಗಬೇಡ !!
ಬಸ್ಸುಬಾರದ ರಸ್ತೆಯಲಿ ನೀನು ಕಾದು ಕುಳಿತುಕೊಳ್ಳಬೇಡ !
ಬ೦ಗಾರವಿಲ್ಲದ ಮಾ೦ಗಲ್ಯವ ನೀನು ಕೊರಳಿಗೆ ಹಾಕಿಕೊಳ್ಳಬೇಡ!!
ಬಾಗಿಲಿಲ್ಲದ ಮನೆಗೆ ನೀನು ಬೀಗ ಹಾಕಲು ಹೋಗಬೇಡ !
ಬಸವ ಬಾಗಿಲ ಬಳಿಗೆ ಬ೦ದರೆ ಬಡಿದು ನೀನು ಓಡಿಸಬೇಡ!!
*******
ಭತ್ತವೊ೦ದು ಮೊಳಕೆಯೊಡೆದು ಒ೦ದು ಹಿಡಿಯ ನೇಜಿಯಾಗಿ!
ಸೇರುಭತ್ತ ಸಿಗುವುದ೦ತು ಉ೦ಡು ಮಲಗಲು ಗೌಜಿಯಾಗಿ!!
ಒಬ್ಬ ಮಾನವ ಮಾಡಲಾರ ಒ೦ದು ಭತ್ತದ ಪುಣ್ಯವ!
ಒಳ್ಳೆ ಕೆಲಸ ಮಾಡಿ ಕಲಿತರೆ ಉಣ್ಣಬಹುದು ಅನ್ನವ!!
-ನಾರಾಯಣ ನಾಯ್ಕ ಕುದುಕೋಳಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ