ಎರಡು ಮನಗಳ ನಡುವೆ ಉದಿಸಿತು
ಕುರುಡು ಸೇಡಿನ ಗೋಡೆಯು|
ಮೆರೆವ ಯಶವನು ಸಹಿಸಲಾಗದೆ
ಬಿರುಕ ಮಾಡಿತು ಪೀಡೆಯು|
ಕರಕೆ ಕರವನು ಹಿಡಿವ ಮನಗಳು
ಹರಕೆ ಕುರಿಗಳೆ ಆದವು|
ಶಿರಕೆ ಏರಿದ ಮದದ ಅಮಲಿಗೆ
ಕೆರಳಿ ನರಕಕೆ ಹೋದವು|
ವರದ ಗೆಳೆತನ ಉರುಳಿ ಬೀಳಲು
ಕೊರಗ ತೊಡಗಿತು ಜೀವನ|
ಬರದೆ ಮರಳಿ ಮೊದಲ ವಿನಯವು
ಹೊರಗೆ ಉಳಿಯಿತು ಚೇತನ|
ಅರಳಿ ಹೂಗಳು ನಗತ ಜೊತೆಯಲಿ
ಪುರಕೆ ಕೀರುತಿ ನೀಡಲಿ|
ಇರಿದು ಸೋಲನು ಬಿರಿದು ಅರಳಲಿ
ಇರಿಸಿ ಜೇನನು ಗೂಡಲಿ|
- ಕಾ.ವೀ.ಕೃಷ್ಣದಾಸ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ