|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚುಟುಕು ಬ್ರಹ್ಮ ದಿನಕರ ದೇಸಾಯಿ ಸ್ಮರಣೋತ್ಸವ

ಚುಟುಕು ಬ್ರಹ್ಮ ದಿನಕರ ದೇಸಾಯಿ ಸ್ಮರಣೋತ್ಸವ

ಸಾಕ್ಷರರ 'ಕಿಚ್ಚು' ವಿಡಿಯೋ ಬಿಡುಗಡೆ | ರಾಜ್ಯ ಮಟ್ಟದ ಆನ್ಲೈನ್ ಚುಟುಕು ಕವಿಗೋಷ್ಠಿ



ಬಸವನಬಾಗೇವಾಡಿ: ದಿನಕರ ದೇಸಾಯಿಯವರು ಶ್ರಮಿಕ ಮತ್ತು ಹಾಲಕ್ಕಿ ಹಾಗೂ ದೌರ್ಜನ್ಯ ಅನುಭವಿಸುವ ಎಲ್ಲ ವರ್ಗದ ಜನರ ಬಗ್ಗೆ ಅತೀವ ಕಾಳಜಿ ವಹಿಸುವ ಭಾವಜೀವಿಯಾಗಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹಳ್ಳಿಗರ ಬಾಳಿಗೆ ಬೆಳಕಾಗಿದ್ದರು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಸವನಬಾಗೇವಾಡಿಯ ಸಹಾಯಕ ಪ್ರಾಧ್ಯಾಪಕ ಡಾ. ಬಸೀರಾಬಾನು ನಿಡಗುಂದಿ ಇವರು  ಹೇಳಿದರು.


ಅವರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ "ದಿನಕರ ದೇಸಾಯಿ ಸ್ಮರಣೋತ್ಸವ", 'ಚುಟುಕು ಕವಿಗೋಷ್ಠಿ" ಹಾಗೂ "ಸಾಕ್ಷರರ ಕಿಚ್ಚು ವಿಡಿಯೋ ಬಿಡುಗಡೆ" ಗೂಗಲ್ ಮೀಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 


ಇದೇ ಸಂದರ್ಭದಲ್ಲಿ ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಖಂಡಿಸಿ "ಸಾಕ್ಷರರ ಕಿಚ್ಚು" ಎಂಬ ಚುಟುಕು ಸಂಗ್ರಹದ ವಿಡಿಯೋ ಲೋಕಾಯುಕ್ತರ್ಪಣೆಗೊಳಿಸಿ, ದಿನಕರರ ಕೆಲವು ಚುಟುಕು ವಾಚಿಸಿ ವಿಶ್ಲೇಷಿಸಿದರು.


ಚೌಪದಿ ಚುಟುಕಿನಲ್ಲಿ ಸಾಮಾಜಿಕ ಜೀವನದ ಕ್ರೂರ ಮತ್ತು ಮುಚ್ಚಿಟ್ಟ ಸತ್ಯವನ್ನು ಅನಾವರಣಗೊಳಿಸಿ, ಚುಟುಕು ಬ್ರಹ್ಮರೆಂದು ಕರೆಸಿಕೊಂಡು ಬರೆದಂತೆ ಬಾಳಿದ ದಿ. ದಿನಕರ ದೇಸಾಯಿಯವರು ನಮಗೆಲ್ಲ ಸ್ಫೂರ್ತಿ ಎಂದು, ಆಧುನಿಕ ವಚನಕಾರರು, ಮುದ್ದೇಬಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಐ. ಬಿ ಹಿರೇಮಠ (ಕೊಣ್ಣೂರ) ಇವರು ನುಡಿದರು. ಪಕ್ಷೇತರರಾಗಿ ಸಂಸದರಾಗಿ ಆಯ್ಕೆಯಾಗಿದ್ದು ಅವರ ಸಾಮಾಜಿಕ ಸ್ಪಂದನೆ ಹೇಗೆ ಇತ್ತು ಎಂಬುದನ್ನು ತಿಳಿಸುತ್ತದೆ, ಇಂದಿನ ಕವಿಗಳು ಹೆಣ್ಣಿನ ಮುಂಗುರುಳು, ಹೂವು, ಹುಡುಗಿ, ಪ್ರೀತಿ, ಕುರಿತು ಕವನ ಬರೆಯುತ್ತಾ ಕಾಲಹರಣ ಮಾಡದೇ ನಾಡಿನ ಜಲ್ವಂತ ಸಮಸ್ಯೆಗಳ ಬಗ್ಗೆ ಲೇಖನಿ ಹಿಡಿದು ಬೆಳಕು ಚೆಲ್ಲಬೇಕು ಎಂದು ನುಡಿದರು.


ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ ಕುಲಕರ್ಣಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿ ಬಸವನಬಾಗೇವಾಡಿ ಘಟಕವು ಕ್ರಿಯಾತ್ಮಕ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.


ಯುವ ಕವಿಯತ್ರಿ ಶ್ರೀಮತಿ, ಭಾಗ್ಯಶ್ರೀ ಬಿರಾದಾರ ನರಸಲಗಿ ಇವರು "ಸಾಕ್ಷರರ ಕಿಚ್ಚು"ಅಭಿಯಾನವನ್ನು ಪರಿಚಯಿಸುತ್ತಾ, ಹೆಣ್ಣಿನ ಮೇಲಿನ ಅತ್ಯಾಚಾರ ಅಕ್ಷಮ್ಯ ಎಂದರು. ಅಕ್ಷರದ ಕಿಚ್ಚು ಕಾಮುಕರನ್ನು ಸುಟ್ಟು ಹಾಕಲಿ ಎಂದರು.


ಕವಿಗಳಾದ ಮಹೇಶಕುಮಾರ ಶಿರಸಿ, ಭಾಗ್ಯ ಚಿತ್ರದುರ್ಗ, ನಾಗೇಂದ್ರ ಭದ್ರಾವತಿ, ರಶ್ಮೀ ಸನಿಲ್ ಮಂಗಳೂರು, ಎಲ್. ಹಾಲ್ಯಾನಾಯ್ಕ ವಿಜಯನಗರ, ಎಸ್. ಬಿ. ಕೂಚಬಾಳ ಬೀದರ್, ಕೆ.ಎಂ. ಗಾಣಿಗೇರ ಬಾಗಲಕೋಟೆ, ಸುರೇಖಾ ಬಿರಾದಾರ ಕಲಬುರಗಿ, ಅಶೋಕ ಚಿಕ್ಕಬಳ್ಳಾಪುರ, ಅಮೃತಾ ಉಡುಪಿ, ಚರಿತ್ರ ಎಂ.ಆರ್. ಕೊಡಗು, ವಾಗೀಶ ಶಿವಮೊಗ್ಗ, ಶೇಖರಗೌಡ ವಿಜಯಪುರ, ಗಿರಿಜಾ ಹಿರೇಮಠ ಬೆಳಗಾವಿ,  ಭಾರತಿ ಗೊಂಗಡಿ ಸೇರಿದಂತೆ ಸುಮಾರು ಇಪ್ಪತ್ತು ಜನ ಕವಿಗಳು ರಾಜ್ಯದ ವಿವಿಧ ಜಿಲ್ಲೆಯಿಂದ ಭಾಗವಹಿಸಿದರು.


ಇವರೆಲ್ಲ ತಮ್ಮ ಚುಟುಕು ಚಾಟಿ ಬೀಸಿ ಸಮಾಜದಲ್ಲಿ ಮರೆಯಾದ ಮನುಷ್ಯತ್ವ, ಲಂಚ, ರೈತರ ಪರಿಸ್ಥಿತಿ, ದೇಶ ಪ್ರೇಮ, ಪ್ರೀತಿ, ಹತಾಶೆ, ಮುಖವಾಡ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲಿದರು. ಬಸವನಾಡಿನ ಬಳಗದ ಪ್ರಮುಖರು ಇದ್ದರು. ಕರ್ನಾಟಕ ಚುಸಾಪ ಹಿರಿಯ ಮಾರ್ಗದರ್ಶಕರಾದ ಎನ್ ಎಸ್ ಹೂಗಾರ, ಕೆ ಎಸ್ ಅವಟಿ, ಸುಧಾ ಎಂ ರಬಿನಾಳ, ಜಿ ಎಂ ಹಳ್ಳೂರ, ದೇವೇಂದ್ರ ಗೋನಾಳ, ವೈ.ಕೆ ಪತ್ತಾರ ಇದ್ದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಚುಸಾಪ ವಿಜಯಪುರ ಜಿಲ್ಲಾಧ್ಯಕ್ಷರಾದ ಜಗದೀಶ್ ಸಾಲಳ್ಳಿಯವರು ಜಿಲ್ಲೆಯಲ್ಲಿ ಬಸವನಬಾಗೇವಾಡಿ ತಾಲೂಕು ಪರಿಷತ್ತು ಒಂದು ವರ್ಷದ ಅವಧಿಯಲ್ಲಿ ಸುಮಾರು 20 ವಿವಿಧ ಅಭಿಯಾನ ಏರ್ಪಡಿಸುವದರ ಜೊತೆಗೆ, ಹೊಸ ಪ್ರತಿಬೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಸ್ಲಾಘನೀಯ ಎಂದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಚುಸಾಪ ತಾಲೂಕಾ ಅಧ್ಯಕ್ಷರಾದ ಪ್ರಭಾಕರ ಖೇಡದ ಅವರು ಪರಿಷತ್ತಿನ ಪದಾಧಿಕಾರಿಗಳ ಸಹಕರಿಸುವಿಕೆ ಹಾಗೂ ಎಲೆಮರೆಯ ಕಾಯಿಯಂತೆ ಕೈಗೂಡಿಸುವ ಎಲ್ಲರನ್ನು, ನಮ್ಮ ಘಟಕದ ಎಲ್ಲಾ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುವ ಜಿಲ್ಲಾ ಮತ್ತು ರಾಜ್ಯ ಘಟಕವನ್ನು ನೆಪಿಸುತ್ತಾ ಅಕಾಲಿಕವಾಗಿ ಅಗಲಿದ ಹಿಂದಿನ ಕಚುಸಾಪ ಜಿಲ್ಲಾಧ್ಯಕ್ಷ ಲಿಂ/ಬಂಡೆಪ್ಪ ಜಿ ತೇಲಿಯವರನ್ನು ಸ್ಮರಿಸಿದರು.


ಕಚುಸಾಪ ಸಂಘಟಕರು, ಈ ಕಾರ್ಯಕ್ರಮದ ಪ್ರಮುಖ ಸಂಯೋಜಕರಾದ ಸಾಹಿತಿ ಬಸವರಾಜ ಹಡಪದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಅಮರ ಯರಗಟ್ಟಿಕರ ಅವರು ಸ್ವಾಗತ ಮತ್ತು ಪರಿಚಯ ಮಾಡಿದರು. ಹಾನಗಲ್‌ನ ಕು.ಸ್ಫೂರ್ತಿ ಕಾಳಿ ಇವರು ಪ್ರಾರ್ಥನೆಗೈದರು. ಕು. ಸಂತೋಷ ಪಟೇದ ಇವರು ಗಾನಸುಧೆ ಹರಿಸಿದರು. ಶಿಕ್ಷಕಿ ಅರುಂಧತಿ ಹತ್ತಿಕಾಳ ಇವರು ನಿರೂಪಿಸಿದರು. ಶಿಕ್ಷಕ ಅರವಿಂದ್ ಸಜ್ಜನ ಅವರು ವಂದಿಸಿದರು.



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم