ಶ್ರೀರಾಮಾಯಣ ಹಕ್ಕಿನೋಟ
ದಾಸರ ನಿಂದಿಸಬೇಡ ಹರಿ-|
ದಾಸರ ನಿಂದಿಸಬೇಡ ಮನುಜ||
ರಾಮನ ನಿಂದಿಸಿ ರಾವಣ ಕೆಟ್ಟ ವಿಭೀಷಣಗಾಯಿತು ಪಟ್ಟ|
ಭೂಮಿಯ ಲೋಭದಿ ಕೌರವ ತಾ ಕೆಟ್ಟ
ಧರ್ಮಗೆ ರಾಜ್ಯವ ಬಿಟ್ಟ||
ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ ಸುಡದಲೆ ಬಿಡುವುದೇನಣ್ಣ|
ಪೊಡವಿಯ ಜನರಿಗೆ ಬಡತನ ಬಂದರೆ ಬಿಡುನುಡಿ ಆಡದಿರಿ ಅಣ್ಣ ||
ದೇವಕಿ ಸೆರೆಯನು ಬಿಡಿಸಿದ ದಾಸರು ನರರೇನಯ್ಯ ಜಗದೊಳಗೆ|
ಭಾವಜಯ್ಯನ ಭಕುತರ ಸೇವಿಸಿ ಪಾವನ ಮಾಡುವ ಪುರಂದರವಿಠಲ||
-ವಿಶ್ವ
(U S Vishweshwara Bhat)
ಚಿತ್ರ: ವಿದ್ಯಾರ್ಥಿವಾಹಿನೀ- ಹವ್ಯಕ ಮಹಾಮಂಡಲ