ವಿವೇಕಾನಂದ ಕಾಲೇಜಿನ ಇಬ್ಬರು ಪ್ರಾಧ್ಯಾಪಕರಿಗೆ ಡಾಕ್ಟರೇಟ್ ಪದವಿ

Upayuktha
0


ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ  ಇವರು ಮಂಡಿಸಿದ  "Market for FMCGs and Consumer Durables in Rural Areas- A study on Consumer Behaviour with special reference to Dakshina Kannada District of Karnataka" ಎಂಬ ಮಹಾಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಂ ನಲ್ಲಿರುವ ದ್ರವಿಡಿಯನ್ ವಿಶ್ವವಿದ್ಯಾಲಯ ಹಾಗೂ ಪ್ರಾಣಿಶಾಸ್ತ್ರ ವಿಭಾಗದಲ್ಲಿ ವಿಭಾಗ ಮುಖ್ಯಸ್ಥ ಈಶ್ವರ ಪ್ರಸಾದ್ ಕೆ.ಎಸ್. ಇವರು ಮಂಡಿಸಿದ "ದಕ್ಷಿಣ ಕನ್ನಡ ಜಿಲ್ಲೆಯ ಸೊಳ್ಳೆ ಪ್ರಭೇದಗಳ ಅಧ್ಯಯನ ಮತ್ತು ಸಿಟ್ರಸ್ ಹಣ್ಣುಗಳ ಲಾರ್ವಿಸೈಡಲ್ ಗುಣಲಕ್ಷಣಗಳು" ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ವಿಶ್ವವಿದ್ಯಾನಿಲಯವು ಪಿಎಚ್. ಡಿ. ಪದವಿ ನೀಡಿದೆ.

ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ ಇವರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ನಿವೃತ್ತ ಪ್ರೊಫೆಸರ್ ಆದ ಡಾ. ಪರಮೇಶ್ವರ ಭಟ್ ಎನ್ ಇವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.


ರವಿಕಲಾ ಅವರು ಹಲವು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿರುವರು. ಹಾಗೆಯೇ ಇವರ ಹಲವು ಸಂಶೋಧನಾ ಲೇಖನಗಳು ISSN ಮತ್ತು ISBN  Journal ಗಳಲ್ಲಿ ಪ್ರಕಟಗೊಂಡಿರುತ್ತದೆ.


ಇವರು ಕುಂಜಾರಿನ ನಿವಾಸಿ ಕೆ ನರಸಿಂಹ ಮಯ್ಯ ಮತ್ತು ಇಂದಿರಾ ದಂಪತಿಯ ಸುಪುತ್ರಿ ಹಾಗೂ ಅಮೃತಾ ಪಿ ರಾವ್ ಇವರ ಧರ್ಮ ಪತ್ನಿ. ಇವರು ತಮ್ಮ ಕಾಲೇಜು ಶಿಕ್ಷಣವನ್ನು ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಎಂಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರೈಸುತ್ತಾರೆ. ಇವರು ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಇವರು ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ.


ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥ ಈಶ್ವರ ಪ್ರಸಾದ್ ಕೆ.ಎಸ್. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಕೆ.ಎಸ್. ಶ್ರೀಪಾದ ಇವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು. ಕಾಲೇಜಿನ ರೇಂಜರ್ಸ್ ಹಾಗೂ ರೋವರ್ಸ್ ತಂಡದ ಸಂಯೋಜಕರಾದ ಇವರು ಬಂಟ್ವಾಳ ತಾಲೂಕಿನ ಬೆಳ್ಳೇರಿಯಲ್ಲಿರುವ ಕೆ.ಐ. ಶಂಕರ ಭಟ್ ಮತ್ತು  ಸುಮತಿಯವರ ಪುತ್ರ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top